ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು

ಇಬ್ಬರ ಬಂಧನ

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂತಿಮವಾಗಿ ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಟಿನ್ನು ಯಾದವ್, ಮನೀಷ್ ಯಾದವ್, ಅನುಕಲ್ಪ ಮಿಶ್ರಾ, ಅವಿನಾಶ್ ಶುಕ್ಲಾ, ರಾಮಶಂಕರ್ ಮಿಶ್ರಾ, ಸುಭಾಷ್, ಕುರುಣೇಶ್ ಮತ್ತು ಲವಕುಶ ಮಿಶ್ರಾ ಮುಂತಾದವರ ಹೆಸರನ್ನು ಉಲ್ಲೇಖಿಸಲಾಗಿದೆ; ಆದರೆ ಈ ಪಟ್ಟಿಯಲ್ಲಿ ನ್ಯಾಸದ (ಟ್ರಸ್ಟ್) ಯಾವುದೇ ಪ್ರಮುಖ ಪದಾಧಿಕಾರಿಗಳ ಹೆಸರಿಲ್ಲ. ಇದರಲ್ಲಿ ಲವಕುಶ ಮಿಶ್ರಾ ಮತ್ತು ಅನುಕಲ್ಪ ಮಿಶ್ರಾ ಇವರನ್ನು ಬಂಧಿಸಲಾಗಿದೆ

ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿಯ ನಂತರ, ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ವು ನೀಡಿದ ದೂರಿನ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ದುರುಪಯೋಗ, ವಂಚನೆ ಮತ್ತು ಕ್ರಿಮಿನಲ್ ಪಿತೂರಿಯಡಿ, ಕಲಂ 306, 316(5), 317(4), 317(5), 61 ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.