ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!

೯೫ ದೇವಸ್ಥಾನಗಳು ಧ್ವಂಸ

​ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಫೆಬ್ರವರಿ ೧೨, ೨೦೨೬ ರಂದು ನಡೆದ ಸಾರ್ವತ್ರಿಕ ಚುನಾವಣೆಗಳ ನಂತರ ಅಲ್ಪಸಂಖ್ಯಾತರ ವಿರುದ್ಧ ಇಲ್ಲಿಯವರೆಗೆ ೬೪೫ ಘಟನೆಗಳು ನಡೆದಿರುವುದು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಸಮಾಜ ಮತ್ತು ಇಸ್ಕಾನ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ವಿಷಯಗಳನ್ನು ಹರಡಲಾಗುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳಾದ ‘ಎ.ಎಸ್.ಕೆ.’, ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಐಕ್ಯ ಪರಿಷತ್ ಮತ್ತು ಎಚ್.ಆರ್.ಸಿ.ಬಿ.ಎಮ್. ನೀಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

೧. ಮುಸಲ್ಮಾನರ ಸ್ಥಳೀಯ ಸಭೆಗಳಲ್ಲಿ ಅಲ್ಪಸಂಖ್ಯಾತರ ಸಾಮಾಜಿಕ ಬಹಿಷ್ಕಾರದ ಮತ್ತು ಅವರ ಸಂಘಟನೆಗಳ ನಿರ್ಬಂಧದ ಬೇಡಿಕೆಗಳು ಕೇಳಿ ಬರುತ್ತಿವೆ. ಹಲವು ಕಡೆಗಳಲ್ಲಿ ಹಿಂದೂಗಳಿಗೆ ಬೆದರಿಕೆಗಳನ್ನೂ ಹಾಕಲಾಗಿದೆ.

೨. ಮಾನವಾಧಿಕಾರ ಸಂಘಟನೆಗಳ ಮಾಹಿತಿಯ ಅನುಸಾರ, ಹಿಂದೂಗಳ ಭೂಮಿಯನ್ನು ಕಬಳಿಸಿದ ೧೩೨ ಘಟನೆಗಳು ಬೆಳಕಿಗೆ ಬಂದಿವೆ. ಹಲವು ಕುಟುಂಬಗಳು ತಮ್ಮನ್ನು ಮನೆಗಳಿಂದ ಹೊರಹಾಕುವ ಬೆದರಿಕೆ ಬಂದಿರುವ ಬಗ್ಗೆ ಮತ್ತು ಮನೆಗಳನ್ನು ಧ್ವಂಸಗೊಳಿಸಿರುವ ಬಗ್ಗೆ ದೂರುಗಳನ್ನು ದಾಖಲಿಸಿವೆ. ೯೫ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಅಪವಿತ್ರಗೊಳಿಸಲಾಗಿದೆ.

೩. ಕುಮಿಲ್ಲಾದ ನಿವಾಸಿಯಾದ ನಂದಿತ ಕುಮಾರ ರವರ ಅನುಸಾರ, ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ವಿರೋಧಿ ವಾತಾವರಣವು ಅತ್ಯಧಿಕ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಸಂಚು ರೂಪಿಸಿರುವ ಬಗ್ಗೆ ಸಂದೇಹ ಹುಟ್ಟಿಸುವ ಸಂದೇಶಗಳನ್ನು ಸತತವಾಗಿ ಹರಡಲಾಗುತ್ತಿದೆ. ಇಂತಹ ವಿಷಯಗಳ ಮೇಲೆ ತಕ್ಷಣವೇ ನಿಯಂತ್ರಣ ಹೇರದಿದ್ದರೆ ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ಗಾಯಿಬಾಂಧಾದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿರುವುದು, ದೊಡ್ಡ ರಾಜಕೀಯ ಸಂಚಿನ ಭಾಗವಾಗಿದೆ ಎಂದು ಆರೋಪಿಸಲಾಗಿದೆ.

೪. ಬಾಂಗ್ಲಾದೇಶ ಹಿಂದೂ – ಬೌದ್ಧ – ಕ್ರಿಶ್ಚಿಯನ್ ಐಕ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಮೋನಿಂದ್ರ ಕುಮಾರ ನಾಥ ರವರ ಅನುಸಾರ, ಯಾವುದೇ ಸಮುದಾಯಕ್ಕೆ ಕೇವಲ ನೇರ ಹಿಂಸಾಚಾರ ಮಾತ್ರವಲ್ಲದೆ, ಸತತವಾಗಿ ಬರುವ ಬೆದರಿಕೆಗಳೂ ಕೂಡ ಭಯಕ್ಕೆ ಕಾರಣವಾಗುತ್ತವೆ. ಬಹಿರಂಗವಾಗಿ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಜನರಿಗೆ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ.

ಆಡಳಿತದ ನಿಷ್ಕ್ರಿಯತೆ

ಆಡಳಿತ ಮಂಡಳಿಯು ಆರೋಪಿಗಳ ವಿರುದ್ಧ ಸೂಕ್ತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದರಿಂದ, ಅಲ್ಪಸಂಖ್ಯಾತ ಸಮುದಾಯದಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗುತ್ತಿದ್ದು, ಅವರ ನಂಬಿಕೆಯೂ ಕುಸಿಯುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಯಾರದೇ ಸರಕಾರ ಬಂದರೂ ಅದು ಮತಾಂಧರದ್ದೇ ಆಗಿರುತ್ತದೆ, ಎಂಬುದು ಸ್ಪಷ್ಟವಾಗಿರುವುದರಿಂದ ಈ ಘಟನೆಗಳು ಎಂದಿಗೂ ನಿಲ್ಲುವುದಿಲ್ಲ! ಅಲ್ಲಿನ ಹಿಂದೂಗಳನ್ನು ರಕ್ಷಿಸಲು ಮೊದಲು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು!