ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪ್ರೀತಿಯಿಂದ ದೀರ್ಘಕಾಲ ಉಳಿಯುವ ಸುಖ ಸಿಗುತ್ತದೆ; ಆದರೆ ಶಾರೀರಿಕ ಸಂಬಂಧಗಳಿಂದ ತಾತ್ಕಾಲಿಕ ಸುಖ ಸಿಗುತ್ತದೆ !

‘ಹಿಂದಿನ ಕಾಲದಲ್ಲಿ ಮೊದಲು ಮಾನಸಿಕವಾಗಿ ಪ್ರೀತಿ ಉಂಟಾಗುತ್ತಿತ್ತು ಮತ್ತು ಅನಂತರ ಶಾರೀರಿಕ ಸಂಬಂಧ ಆಗುತ್ತಿತ್ತು; ಆದರೆ ಇತ್ತೀಚಿಗೆ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಮೊದಲು ಶಾರೀರಿಕ ಸಂಬಂಧ ಉಂಟಾಗುತ್ತದೆ ಮತ್ತು ಮುಂದೆ ಇಬ್ಬರಲ್ಲಿಯೂ ಹೊಂದಾಣಿಕೆಯಾದರೆ ಮಾನಸಿಕ ಪ್ರೀತಿ ಉಂಟಾಗುತ್ತದೆ. ಈ ಕಾರಣದಿಂದ ಇಂದಿನ ಪೀಳಿಗೆಯು ತಾತ್ಕಾಲಿಕ ಸುಖವನ್ನೂ, ದೀರ್ಘಕಾಲ ದುಃಖವನ್ನೂ  ಭೋಗಿಸಬೇಕಾಗುತ್ತಿದೆ.’

ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಸ್ವೀಕರಿಸಿ ವಿನಾಶದ ಪ್ರಪಾತಕ್ಕೆ ಬೀಳುತ್ತಿರುವ ಸಮಾಜ !

‘ಹಿಂದಿನ ಕಾಲದಲ್ಲಿ ಪೀಳಿಗೆಗಳ ನಡುವೆ ವೈಚಾರಿಕ ಅಂತರ (ಜನರೇಶನ್‌ ಗ್ಯಾಪ್) ಇರುತ್ತಿರಲಿಲ್ಲ. ಪ್ರತಿಯೊಂದು ಪೀಳಿಗೆಯು ಮೊದಲನೆಯ ಪೀಳಿಗೆ ಯೊಂದಿಗೆ ಹೊಂದಿಕೊಳ್ಳುತ್ತಿತ್ತು. ಅಜ್ಜ, ಮುತ್ತಜ್ಜನಿಂದ ಹಿಡಿದು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಒಟ್ಟಾಗಿ ಇರುತ್ತಿದ್ದರು. ಹಿಂದೂಗಳು ಪಾಶ್ಚಿಮಾತ್ಯ ಸಂಸ್ಕೃತಿ ಯನ್ನು ಅಂಗೀಕರಿಸಿದ್ದರಿಂದ ಎರಡು ಪೀಳಿಗೆಗಳಲ್ಲಿ ಅರ್ಥಾತ್‌ ತಂದೆ-ತಾಯಿ ಮತ್ತು ಮಗ-ಸೊಸೆಯರ ನಡುವೆಯೂ ಪರಸ್ಪರ ಹೊಂದಾಣಿಕೆ ಆಗುತ್ತಿಲ್ಲ. ಈಗ ಪತಿ-ಪತ್ನಿಯರ ನಡುವೆಯೂ ಪರಸ್ಪರ ಹೊಂದಾಣಿಕೆ ಇರುವುದಿಲ್ಲ. ಮದುವೆಯ ನಂತರ ಅಲ್ಪಾವಧಿಯಲ್ಲಿಯೇ ವಿವಾಹ ವಿಚ್ಛೇದನೆಯಾಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ