
ಕುಟುಂಬದಲ್ಲಿನ ಭ್ರಷ್ಟಾಚಾರಿಯನ್ನು ವಿರೋಧಿಸುವುದು ಸಾಧನೆಯೇ ಆಗಿದೆ ‘ತನ್ನ ಪತಿ ಭ್ರಷ್ಟಾಚಾರಿಯಾಗಿದ್ದಾನೆ ಎಂಬುದು ತಿಳಿದ ಮೇಲೆ ಆತನ ಧರ್ಮಪತ್ನಿ ಮತ್ತು ಹತ್ತಿರದ ಸಂಬಂಧಿಗಳು ಆತನನ್ನು ಪಾಪಗಳಿಂದ ರಕ್ಷಿಸಲು ಅವನಿಗೆ ಬುದ್ಧಿ ಹೇಳುವುದು, ಆತನ ಪಾಪದ ಹಣವನ್ನು ಸ್ವೀಕರಿಸದಿರುವುದು ಇತ್ಯಾದಿ ಪ್ರಯತ್ನಗಳನ್ನು ಮಾಡಬೇಕು. ಅದರಿಂದಲೂ ಅವನಲ್ಲಿ ಬದಲಾವಣೆ ಆಗದಿದ್ದರೆ, ಆತನ ವಿರುದ್ಧ ದೂರು ದಾಖಲಿಸಬೇಕು. ಹೀಗೆ ಮಾಡಿದರೆ ಪಾಪದಲ್ಲಿ ಪಾಲುದಾರರಾಗುವ ಪಾಪವು ಕುಟುಂಬದವರಿಗೆ ತಟ್ಟುವುದಿಲ್ಲ.’
ಶರೀರಶುದ್ಧಿಗೆ ಮಹತ್ವ ನೀಡಿ !
ಶರೀರವು ಮೊದಲ ವಾಸ್ತುವಾಗಿದೆ. ಮೊದಲು ಅದರ ಶುದ್ಧಿಯ ವಿಚಾರ ಮಾಡಬೇಕು, ಅನಂತರ ನಿರ್ಮಿಸಿದ ವಾಸ್ತುವಿನದ್ದು.
ಭ್ರಷ್ಟಾಚಾರ ನಿರ್ಮೂಲನೆಗಾಗಿ ಗುಪ್ತಚರ ಇಲಾಖೆಯನ್ನು ಉಪಯೋಗಿಸಿ !
‘ಸರಕಾರದ ಬಳಿ ಗುಪ್ತಚರ ಇಲಾಖೆ ಇದ್ದರೂ ತನ್ನ ಭ್ರಷ್ಟ, ದೇಶದ್ರೋಹಿ ಸಾವಿರಾರು ನೌಕರರಿಗೆ ಏಕೆ ಶಿಕ್ಷೆ ನೀಡಲು ಸಾಧ್ಯವಾಗುತ್ತಿಲ್ಲ ?’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ