ಸಾಧಕರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನಗಳ ಅಥವಾ ಸುವಚನಗಳ ಸಂಗ್ರಹವಿದ್ದರೆ ಅವುಗಳನ್ನು ಸಮಷ್ಟಿಗೆ ಸಿಗುವುದಕ್ಕಾಗಿ ಗೋವಾದ ಗ್ರಂಥ ಸಂಕಲನ ವಿಭಾಗಕ್ಕೆ ಕಳುಹಿಸಿ !

ಸಾಧಕರಿಗೆ ಸೂಚನೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ರಾಷ್ಟ್ರ, ಧರ್ಮ, ಹಾಗೆಯೇ ಅಧ್ಯಾತ್ಮದಂತಹ ವಿವಿಧ ವಿಷಯಗಳ ಬಗ್ಗೆ ಸಾವಿರಾರು ಸಾಧಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಪ್ರತಿಯೊಂದು ವಾಕ್ಯವು ಚಿರಂತನವಾಗಿರುವ ಮಾರ್ಗದರ್ಶಕ ತತ್ತ್ವವಾಗಿರುತ್ತದೆ. ವಿವಿಧ ಪ್ರಸಂಗಗಳಲ್ಲಿ ಅವರು ಮಾಡಿದ ಮಾರ್ಗದರ್ಶನವು ಸಮಷ್ಟಿಗೆ, ಹಾಗೆಯೇ ಮುಂದಿನ ಪೀಳಿಗೆಗೆ ಉಪಯುಕ್ತವಾಗಬೇಕೆಂದು ನಾವು ಅವುಗಳನ್ನು ಸಂಗ್ರಹಿಸಿ ಅವುಗಳನ್ನು ನಿಯತಕಾಲಿಕೆಗಳು, ಗ್ರಂಥಗಳು, ಜಾಲತಾಣ ಮುಂತಾದವುಗಳ ಮೂಲಕ ವಿವಿಧ ಮಾಧ್ಯಮಗಳಿಂದ ಪ್ರಕಟಿಸುತ್ತಿದ್ದೇವೆ.

ಸನಾತನ ಸಂಸ್ಥೆಯ ಸ್ಥಾಪನೆಯಾದ ಕಾಲದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅನೇಕ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ ಅಧ್ಯಾತ್ಮಪ್ರಸಾರವನ್ನು ಮಾಡಿದರು, ಸಾಧಕರ ಸಂದೇಹ ನಿವಾರಣೆ ಮಾಡಿದರು ಮತ್ತು ಸಾಧಕರಿಗೆ ಮಾರ್ಗದರ್ಶನವನ್ನೂ ಮಾಡಿದರು. ಅದರ ಕೆಲವು ಪ್ರಸಂಗಗಳ ಚಿತ್ರೀಕರಣವನ್ನು ಮಾಡಲಾಗಿದೆ. ಅದರ ಹೊರತು ಅನೇಕ ಪ್ರಸಂಗಗಳ ಚಿತ್ರೀಕರಣವನ್ನು ಮಾಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಸಾಧಕರು ಅವರ ಮಾರ್ಗದರ್ಶನದ ಅಂಶಗಳನ್ನು ಬರೆದುಕೊಂಡಿದ್ದರು.

ದೈನಿಕ, ಗ್ರಂಥ, ಧ್ವನಿಚಿತ್ರಮುದ್ರಿಕೆ ಮುಂತಾದ ವಿವಿಧ ಮಾಧ್ಯಮಗಳಲ್ಲಿ ಇದುವರೆಗೆ ಪ್ರಕಟವಾಗದಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಮಾರ್ಗದರ್ಶನದ ಅಂಶಗಳನ್ನು ಯಾರಾದರೂ ಸಂಗ್ರಹಿಸಿಟ್ಟಿದ್ದರೆ ಅವುಗಳು ಸಮಷ್ಟಿಗೆ ಸಿಗುವ ದೃಷ್ಟಿಯಿಂದ ಮುಂದೆ ನೀಡಿರುವ ವಿಳಾಸಕ್ಕೆ ಬರೆದು ಕಳುಹಿಸಬೇಕು.

ಬರವಣಿಗೆಯನ್ನು ಕಳುಹಿಸುವಾಗ ಪುನರಾವರ್ತನೆಯನ್ನು ತಪ್ಪಿಸಲು ಗಮನಿಸಬೇಕಾದ ಅಂಶಗಳು

೧. ಸಭೆ, ಬಹಿರಂಗ ಪ್ರವಚನಗಳು ಮತ್ತು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ನಡೆದ ಸತ್ಸಂಗಗಳಲ್ಲಿನ ಅಂಶಗಳ ಚಿತ್ರೀಕರಣ ಅಥವಾ ಧ್ವನಿಮುದ್ರಿತವನ್ನು ಮಾಡಲಾಗಿವೆ. ಆದ್ದರಿಂದ ಆ ಅಂಶಗಳನ್ನು ಬರೆದು ಕಳುಹಿಸಬಾರದು.

೨. ಜಿಲ್ಲೆಯ ಸಾಧಕರಿಗೆ ಒಟ್ಟಾಗಿ ಮಾರ್ಗದರ್ಶನ ಮಾಡಿದ್ದರೆ ಸಾಧ್ಯವಾದರೆ ಅದರಲ್ಲಿನ ಅಂಶಗಳನ್ನು ಜಿಲ್ಲೆಯ ಒಬ್ಬರೇ ಸಾಧಕರು ಸಂಕಲನ ಮಾಡಿ ಕಳುಹಿಸಬೇಕು.

೩. ಯಾವುದಾದರೂ ಪ್ರಸಂಗದಲ್ಲಿ ಅಥವಾ ಕಾರ್ಯಕ್ರಮದಲ್ಲಿ ಕೆಲವೇ ಸಾಧಕರಿದ್ದರೆ ಅವರಲ್ಲಿ ಯಾರಾದರೊಬ್ಬರು ಜವಾಬ್ದಾರಿಯನ್ನು ವಹಿಸಿ ಆ ಅಂಶಗಳನ್ನು ಬರೆದು ಕಳುಹಿಸಬೇಕು.

ಬರವಣಿಗೆ ಕಳುಹಿಸುವ ವಿಳಾಸ

ವಿ-ಅಂಚೆ : [email protected]

ಅಂಚೆ ವಿಳಾಸ : ಶ್ರೀ. ಅಮೋಲ ಬಧಾಲೆ, ಛಿ/ಒ ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೊಂಡಾ, ಗೋವಾ. ಪಿನ್‌ – ೪೦೩೪೦೧