ಕಾಂಗ್ರೆಸ್‌ ಅಳಿಯನ ಭಯೋತ್ಪಾದಕ ಪ್ರೇಮವನ್ನು ತಿಳಿಯಿರಿ !

ರಾಬರ್ಟ್ ವಾದ್ರಾ

೧. ಹಿಂದೂ ನಾಯಕರಿಗೆ ರಕ್ಷಣೆ ನೀಡಿ !

೧. ‘ರಜಪೂತ ಕರಣಿ ಸೇನೆ’ಯ ಜಾರ್ಖಂಡ್‌ ಪ್ರದೇಶಾಧ್ಯಕ್ಷ ವಿನಯ ಸಿಂಗ್‌ ಅವರನ್ನು ಜಮಶೇದಪುರದಲ್ಲಿ ಅಜ್ಞಾತರು ಗುಂಡಿಕ್ಕಿ ಕೊಂದರು. ವಿನಯ ಸಿಂಗ್‌ ಅವರು ಇಲ್ಲಿನ ಮಿನಿ ಪಂಜಾಬ್‌ ಎಂಬ ಹೋಟೆಲ್‌ ಬಳಿಯ ಓಣಿಯೊಂದರಲ್ಲಿ ಹೋಗುತ್ತಿದ್ದಾಗ ದಾಳಿಕೋರರು ಅವರ ಮೇಲೆ ಗುಂಡು ಹಾರಿಸಿದರು.

೨. ಇದು ಇನ್ನೆಷ್ಟು ವರ್ಷ ನಡೆಯಲಿದೆ ?

ಪಹಲ್ಗಾಮ್‌ (ಜಮ್ಮು ಮತ್ತು ಕಾಶ್ಮೀರ)ನಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂ ಪ್ರವಾಸಿಗರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ೨೮ ಜನರು ಸಾವನ್ನಪ್ಪಿದರು. ಭಯೋತ್ಪಾದಕರು ಪ್ರವಾಸಿಗರ ಹೆಸರನ್ನು ಕೇಳಿ ಅವರು ಹಿಂದೂಗಳೆಂದು ಗೊತ್ತಾದಾಗ ಅವರ ಮೇಲೆ ಗುಂಡು ಹಾರಿಸಿದರು.

೩. ಕಾಂಗ್ರೆಸ್‌ ಅಳಿಯನ ಭಯೋತ್ಪಾದಕ ಪ್ರೇಮವನ್ನು ತಿಳಿಯಿರಿ !

ಹಿಂದೂ ಮತ್ತು ಮುಸಲ್ಮಾನರ ನಡುವೆ ಒಡಕುಂಟಾಗಿದ್ದರಿಂದ ಭಾರತದಲ್ಲಿ ಹಿಂದೂಗಳು ಮುಸಲ್ಮಾನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಈ ಭಯೋತ್ಪಾದಕ ಸಂಘಟನೆಗಳು ಭಾವಿಸುತ್ತವೆ. ಅದಕ್ಕಾಗಿಯೇ ಭಯೋತ್ಪಾದಕರು ಹಿಂದೂಗಳನ್ನು ಗುರುತಿಸಿ ಅವರ ಮೇಲೆ ದಾಳಿ ಮಾಡಿದರು ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ.

೪. ಹಾಗೆ ನಿಜವಾಗಿಯೂ ಆಗುವುದೇ ?

ಯಾವುದೇ ಭಯೋತ್ಪಾದಕನು ಸತ್ತರೆ, ಯಾವುದೇ ಇಮಾಮ್‌ ಅಥವಾ ಕಾಜಿ ಅವನ ಅಂತ್ಯಕ್ರಿಯೆಯ ನೇತೃತ್ವ ವಹಿಸುವುದಿಲ್ಲ. ಅವನನ್ನು ಹೂಳಲು ಕಬ್ರಸ್ತಾನದಲ್ಲಿಯೂ ಜಾಗ ಕೊಡುವುದಿಲ್ಲ ಎಂದು ಆಲ್‌ ಇಂಡಿಯಾ ಇಮಾಮ್‌ ಆರ್ಗನೈಸೇಶನ್‌ನ ಮುಖ್ಯಸ್ಥ ಡಾ. ಇಮಾಮ್‌ ಇಲಿಯಾಸಿ ಫತ್ವಾ ಹೊರಡಿಸಿದ್ದಾರೆ.

೫. ಇಂತಹವರಿಗೆ ಗಲ್ಲು ಶಿಕ್ಷೆಯೇ ಆಗಬೇಕು !

ಅಸ್ಸಾಂನ ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಎ.ಐ.ಯು.ಡಿ.ಎಫ್‌.) ಪಕ್ಷದ ಶಾಸಕ ಅಮಿನುಲ್‌ ಇಸ್ಲಾಂ ಇವನು ಪಾಕಿಸ್ತಾನದ ಪರವಾಗಿ ಮಾತನಾಡಿದ್ದಕ್ಕಾಗಿ ದೇಶದ್ರೋಹದ ಅಪರಾಧದ ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ.

೬. ಜಿಹಾದಿ ಭಯೋತ್ಪಾದಕ ಪ್ರೇಮಿ ಕಾಂಗ್ರೆಸ್ಸನ್ನು ಗುರುತಿಸಿರಿ !

ಪಹಲಗಾಮನಲ್ಲಿ ಮುಸಲ್ಮಾನರು ಅನೇಕ ಜನರ ಪ್ರಾಣ ಉಳಿಸಿದರು. ಅಲ್ಲಿ ಧರ್ಮವನ್ನು ಕೇಳಿ ಯಾರನ್ನೂ ಕೊಲ್ಲಲಿಲ್ಲ. ಭಾಜಪವು ಸುಮ್ಮನೆ ಮುಸಲ್ಮಾನರು, ಮುಸಲ್ಮಾನರು ಎಂದು ಅಪಪ್ರಚಾರ ಮಾಡುತ್ತಿದೆ, ಎಂದು ಕರ್ನಾಟಕದ ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್‌ ಹೇಳಿದ್ದಾರೆ.

೭. ಈ ಹೇಳಿಕೆಯನ್ನು ಭಾರತೀಯರು ಒಪ್ಪುವರೇ ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಹಲಗಾಮ್‌ ಹತ್ಯಾಕಾಂಡವನ್ನು ಭದ್ರತಾ ವ್ಯವಸ್ಥೆಯ ಮಹತ್ವದ ವೈಫಲ್ಯ ಎಂದು ಹೇಳಿದ್ದಾರೆ ಹಾಗೂ ಅದಕ್ಕೆ ಸರ್ಕಾರವನ್ನು ಜವಾಬ್ದಾರಿಯಾಗಿ ಹಿಡಿದಿದ್ದಾರೆ. ‘ಈ ವಿಷಯದಿಂದ ಪಾಕಿಸ್ತಾನದೊಂದಿಗೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಅಗತ್ಯವಿಲ್ಲ,’ ಎಂದು ಅವರು ಹೇಳಿದರು.