‘ಶನಿಗೋಚರ’ದ ನಿಮಿತ್ತ ಚೆನ್ನೈಯಲ್ಲಿ ನೆರವೇರಿದ ಶನಿದೇವ ಮತ್ತು ವಾರಾಹೀದೇವಿ ಹೋಮ !

ಸಪ್ತರ್ಷಿ ಜೀವನಾಡಿಪಟ್ಟಿಯ ವಾಚಕ ಪೂ. ಡಾ. ಓಂ ಉಲಗನಾಥನ್‌ ಇವರಿಂದ ಹೋಮದ ಆಯೋಜನೆ !

ವಾರಾಹಿ ದೇವಿಯ ಪೀಠದ ಗುರುಜಿ ಶ್ರೀ ಗಣಪತಿ ಸುಬ್ರಹ್ಮಣ್ಯ ಸ್ವಾಮಿ ಇವರು ಹೋಮ ಮಾಡಿದರು 

ಹೋಮಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರ ವಂದನೀಯ ಉಪಸ್ಥಿತಿ !

ಶನಿದೇವರು

ಚೆನ್ನೈ (ತಮಿಳುನಾಡು) – ೨೯ ಮಾರ್ಚ್ ೨೦೨೫ ರಂದು ಶನಿ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿತು. ಶನಿ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋದಾಗ, ಈ ಘಟನೆಯನ್ನು ‘ಶನಿಗೋಚರ’ ಎಂದು ಕರೆಯುತ್ತಾರೆ. ಶನಿಗೋಚರದಿಂದ ಗ್ರಹಮಂಡಲದಲ್ಲಿ ಆಗುವ ಬದಲಾವಣೆಗಳು ಮತ್ತು ಅದರಿಂದ ಮಾನವನ ಮೇಲೆ ಆಗುವ ಒಳ್ಳೆಯ-ಕೆಟ್ಟ ಪರಿಣಾಮಗಳ ಕುರಿತು ಅನೇಕ ಜ್ಯೋತಿಷ್ಯ ಅಭ್ಯಾಸಕರು ಉಲ್ಲೇಖಿಸಿದ್ದಾರೆ. ಇಂತಹ ಸಂಧಿಕಾಲದಲ್ಲಿ ಸಾಧನೆ ಮಾಡುವುದು ಆವಶ್ಯಕವಾಗಿದೆ ಎಂದು ಅನೇಕ ಸಂತರು ಮತ್ತು ಸದ್ಗುರುಗಳು ಹೇಳಿದ್ದಾರೆ. ಸಪ್ತರ್ಷಿ ಜೀವನಾಡಿಪಟ್ಟಿಯ ವಾಚಕರು, ‘ಅಖಿಲ ವಿಶ್ವ ಜ್ಯೋತಿಷ್ಯ ಪರಿಷತ್ತಿ’ನ ಅಧ್ಯಕ್ಷರು ಮತ್ತು ‘ಹೋರಾಮಾರ್ತಂಡ’ ಆಗಿರುವ ಪೂ. ಡಾ. ಓಂ ಉಲಗನಾಥನ್‌ ಇವರು ನಾಡಿಪಟ್ಟಿಯಲ್ಲಿ ಹೇಳಿರುವಂತೆ ೨೯ ಮಾರ್ಚ್ ೨೦೨೫ ರಂದು ‘ಶನಿಗೋಚರ’ದ ನಿಮಿತ್ತ ಶನಿದೇವರು ಮತ್ತು ವಾರಾಹೀದೇವಿಯ ಹೋಮವನ್ನು ಆಯೋಜಿಸಿದ್ದರು.

ವಾರಾಹೀದೇವಿ

ಚೆನ್ನೈ ನಗರದ ಅರುಂಬಾಕ್ಕಂ ಇಲ್ಲಿನ ಐಶ್ವರ್ಯ ಹಾಲ್‌ ನಲ್ಲಿ ನೆರವೇರಿದ ಈ ಹೋಮಕ್ಕೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಹ ಉಪಸ್ಥಿತರಿದ್ದರು. ಚೆನ್ನೈನ ವಾರಾಹೀದೇವಿಯ ಪೀಠದ ಗುರೂಜಿ ಶ್ರೀ ಗಣಪತಿ ಸುಬ್ರಹ್ಮಣ್ಯ ಸ್ವಾಮಿ ಇವರು ಈ ಹೋಮ ನೆರವೇರಿಸಿದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

‘ಶನಿಗೋಚರ’ದ ನಿಮಿತ್ತ ಸಪ್ತರ್ಷಿಗಳು ನೀಡಿದ ಸಂದೇಶ

೨೯ ಮಾರ್ಚ್ ೨೦೨೫ ಈ ದಿನವು ಹಿಂದೂ ರಾಷ್ಟ್ರ ಸ್ಥಾಪನೆಯ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿದೆ. ಶನಿ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಲಿದೆ. ಇದರ ನಂತರ ದೇಶ-ವಿದೇಶ, ಮಾನವ-ದೇವತೆ, ಧರ್ಮ-ಅಧರ್ಮ, ರಾಜಕಾರಣ, ಅರ್ಥವ್ಯವಸ್ಥೆ, ಭೂಮಿ-ಆಕಾಶ ಹೀಗೆ ಅನೇಕ ಸ್ತರಗಳಲ್ಲಿ ಎಂದೂ ಆಗದಂತಹ ಬದಲಾವಣೆಗಳು ಆಗಲಿವೆ. ಈ ದಿನ ಅಮಾವಾಸ್ಯೆಯೂ ಇದೆ. ಭೂಮಿಯ ಕೆಲವು ಭಾಗಗಳಲ್ಲಿ ಸೂರ್ಯಗ್ರಹಣದ ಪ್ರಭಾವ ಇರಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಮಾನವ ಜೀವನದ ಒಂದು ‘ಆಧ್ಯಾತ್ಮಿಕ ಸಂಧಿಕಾಲ’ ಎಂದು ಹೇಳಬಹುದು.

ಹೋಮದ ಪೂರ್ಣಾಹುತಿ ನೀಡುತ್ತಿರುವ ಎಡದಿಂದ  ಶ್ರೀ ಗಣಪತಿ ಸುಬ್ರಹ್ಮಣ್ಯ ಮತ್ತು  ಪೂ. ಡಾ. ಓಂ ಉಲಗನಾಥನ್‌
ಶನಿದೇವರು ಮತ್ತು ವಾರಾಹಿದೇವಿ ಇವರಿಗೆ ಭಾವಪೂರ್ಣವಾಗಿ ಪ್ರಾರ್ಥನೆ ಮಾಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಈ ಸಂಧಿಕಾಲವನ್ನು ಎದುರಿಸಲು ಮತ್ತು ರಕ್ಷಣೆಗಾಗಿ ಸನಾತನದ ಎಲ್ಲೆಡೆಯ ಸಾಧಕರು ೨೯ ಮಾರ್ಚ್ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧೨.೩೦ ರವರೆಗೆ ೭ ಬಾರಿ ಹನುಮಾನ ಚಾಲೀಸಾವನ್ನು ಸಾಮೂಹಿಕವಾಗಿ ಪಠಿಸಬೇಕು. ಎಲ್ಲ ಆಶ್ರಮಗಳು, ಸೇವಾಕೇಂದ್ರಗಳಲ್ಲಿಯೂ ಸಾಮೂಹಿಕ ಪಠಣವನ್ನು ಮಾಡಬೇಕು. ಹನುಮಂತನು ಶನಿಪೀಡೆಯನ್ನು ದೂರ ಮಾಡುವ ದೇವತೆಯಾಗಿದ್ದಾನೆ. – ಸಪ್ತರ್ಷಿ (೧೮.೩.೨೦೨೫) (ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ಎಲ್ಲೆಡೆಯ ಸಾಧಕರು ೭ ಬಾರಿ ಹನುಮಾನ ಚಾಲೀಸಾವನ್ನು ಸಾಮೂಹಿಕವಾಗಿ ಪಠಿಸಿದರು. – ಸಂಕಲನಕಾರರು)

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೋಮದ ಸಮಯದಲ್ಲಿ ದೇವತೆಗಳಿಗೆ ಸಲ್ಲಿಸಿದ ಪ್ರಾರ್ಥನೆ !

ಈ ಹೋಮದ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಎಲ್ಲೆಡೆಯ ಸಾಧಕರ ಸಾಧನೆಯಲ್ಲಿನ ಅಡಚಣೆಗಳು ದೂರವಾಗಿ ಹಿಂದೂ ರಾಷ್ಟ್ರವು ಶೀಘ್ರಾತಿಶೀಘ್ರದಲ್ಲಿ ಸ್ಥಾಪನೆಯಾಗಲಿ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಉತ್ತಮ ಆರೋಗ್ಯ ಲಭಿಸಲಿ ಮತ್ತು ಮುಂಬರುವ ಆಪತ್ಕಾಲದಲ್ಲಿ ಎಲ್ಲ ಸಾಧಕರ ರಕ್ಷಣೆಯಾಗಲಿ’, ಎಂದು ಶನಿದೇವರು ಮತ್ತು ವಾರಾಹಿದೇವಿ ಇವರಿಗೆ ಪ್ರಾರ್ಥಿಸಿದರು.