ಶ್ರೀ. ಪ್ರಮೋದ ಮುತಾಲಿಕರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ೧೯೬೩ ರಲ್ಲಿ ಒಂದು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಹನುಮಂತರಾವ್ ಮುತಾಲಿಕ ಮತ್ತು ತಾಯಿ ಸುಮತೀಬಾಯಿ ಇವರಿಬ್ಬರಿಗೂ ರಾಷ್ಟ್ರ ಮತ್ತು ಧರ್ಮ ಕಾರ್ಯದ ಬಗ್ಗೆ ನಿಷ್ಠೆಯಿತ್ತು. ಅವರ ತಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಚಾರಕರೆಂದು ಕಾರ್ಯನಿರ್ವಹಿಸುತ್ತಿದ್ದರು. ಆದ್ದರಿಂದ ಅವರು ಚಿಕ್ಕಂದಿನಿಂದಲೂ ತಮ್ಮ ಮಗನಿಗೆ ರಾಷ್ಟ್ರಭಕ್ತಿಯ ಸಂಸ್ಕಾರ ನೀಡಿದರು. ಅದರ ಪರಿಣಾಮದಿಂದ ಅವರು ಸಣ್ಣ ವಯಸ್ಸಿನಲ್ಲಿಯೆ ಅಂದರೆ ೧೩ ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸೇರಿಕೊಂಡರು. ಅವರು ತಮ್ಮ ‘ಎಸ್.ಎಸ್.ಎಲ್.ಸಿ. ವರೆಗಿನ ಶಿಕ್ಷಣವನ್ನು ಹುಕ್ಕೇರಿಯಲ್ಲಿ ಮುಗಿಸಿದರು ಹಾಗೂ ವಾಣಿಜ್ಯ ಶಾಖೆಯ ಪದವಿಯನ್ನು ಬೆಳಗಾವಿಯಲ್ಲಿ ಪಡೆದರು. ಅವರು ದಿವಂಗತ ವಿಠ್ಠಲ ಅಡಕೆ (ಸನದಿ ಲೆಕ್ಕಪರಿಶೋಧಕ) ಇವರ ಪ್ರೇರಣೆಯಿಂದ ಹಿಂದುತ್ವದ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ರಾಷ್ಟ್ರ-ಧರ್ಮದ ಕಾರ್ಯಕ್ಕಾಗಿ ಅವರು ತಳಮಳದಿಂದ ಕಾರ್ಯ ಮಾಡುತ್ತಿರುವುದನ್ನು ನೋಡಿ ಸಂಘದವರು ೨೦೦೪ ರಲ್ಲಿ ಅವರನ್ನು ಬಜರಂಗದಳದ ದಕ್ಷಿಣ ಭಾರತದ ಪ್ರಚಾರಕರೆಂದು ನೇಮಕ ಮಾಡಿದರು. ಅವರು ದಕ್ಷಿಣ ಭಾರತದಲ್ಲಿ ಭಾಷಣ, ಸಂಪರ್ಕ ಅಭಿಯಾನ ಹಾಗೂ ಹಿಂದುತ್ವದ ಕಾರ್ಯ ಮಾಡುತ್ತಾ ಲಕ್ಷಾಂತರ ಯುವಕರಿಗೆ ಬಜರಂಗ ದಳದಲ್ಲಿ ಸೇರಿಸಿಕೊಂಡರು. ಆ ಕಾಲದಲ್ಲಿ ಬಜರಂಗದಳದ ಹೆಸರು ಕೇಳಿದ ತಕ್ಷಣ ಕೇವಲ ಜಿಹಾದಿಗಳಲ್ಲ, ಸರಕಾರ, ಜನಪ್ರತಿನಿಧಿಗಳು ಕೂಡ ಗಡಗಡ ನಡುಗುತ್ತಿದ್ದರು. ಈ ರೀತಿ ಶ್ರೀ. ಮುತಾಲಿಕರು ದಕ್ಷಿಣ ಭಾರತದಲ್ಲಿ ಶಕ್ತಿಶಾಲಿ ಸಂಘಟನೆಯನ್ನು ನಿರ್ಮಾಣ ಮಾಡಿದರು.
ಅವರು ೨೨ ವರ್ಷ ಕರ್ನಾಟಕದಲ್ಲಿ ಸಂಘದ ಪ್ರಚಾರಕರೆಂದು ಕಾರ್ಯನಿರತರಾಗಿದ್ದರು. ಅನಂತರ ಅವರು ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳದ ರಾಜ್ಯ ಸಂಘಟಕರಾದರು. ನಂತರ ಅವರು ದಕ್ಷಿಣ ಭಾರತ (ಕರ್ನಾಟಕ, ತಮಿಳ್ನಾಡು, ಆಂಧ್ರಪ್ರದೇಶ, ಕೇರಳ) ಬಜರಂಗದಳದ ಸಂಯೋಜಕರೆಂದು ಕಾರ್ಯನಿರ್ವಹಿಸಿದರು. ಅವರು ಕರ್ನಾಟಕದಲ್ಲಿ ಬಜರಂಗದಳದ ಮೂಲಕ ಹಿಂದೂ ಸಮಾಜದಲ್ಲಿ ಸಂಘಟನೆಯ ಮಹತ್ತ್ವವನ್ನು ಹೆಚ್ಚಿಸಿದರು. ಹಳ್ಳಿ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೇಸರಿ ಧ್ವಜ ಮತ್ತು ಕೇಸರಿ ಶಾಲುಗಳ ಪ್ರಸಾರವಾಯಿತು. ಜಿಹಾದಿಗಳು, ಮತಾಂತರ ಮಾಡುವ ಕ್ರೈಸ್ತರು, ಮುಸಲ್ಮಾನರ ಓಲೈಕೆ ಮಾಡುವ ಕಾಂಗ್ರೆಸ್ ಮತ್ತು ನಾಸ್ತಿಕ ಸಾಮ್ಯವಾದಿಗಳ ವಿರುದ್ಧ ಸಂಘರ್ಷ ಆರಂಭಿಸಿ ಹಿಂದೂ ಯುವಕರಲ್ಲಿ ಧೈರ್ಯ ತುಂಬುದ ಶ್ರೇಯಸ್ಸು ಶ್ರೀ. ಪ್ರಮೋದ ಮುತಾಲಿಕರಿಗೆ ಸಲ್ಲುತ್ತದೆ. ನಂತರ ಬಜರಂಗ ದಳದೊಂದಿಗೆ ಭಿನ್ನಾಭಿಪ್ರಾಯ ನಿರ್ಮಾಣವಾದ ಕಾರಣ ಅವರು ಸಂಘಟನೆಯನ್ನು ತ್ಯಜಿಸಬೇಕಾಯಿತು. ಅನಂತರ ೨೦೦೫ ರಲ್ಲಿ ಅವರು ‘ಶ್ರೀರಾಮ ಸೇನೆ’ಯನ್ನು ಸ್ಥಾಪನೆ ಮಾಡಿದರು. ಅಂದಿನಿಂದ ಇಂದಿನವರೆಗೆ ಅವರು ಕಳೆದ ೨೦ ವರ್ಷಗಳಿಂದ ಯಾವುದೇ ರಾಜಿ ಇಲ್ಲದೆ ಹಿಂದುತ್ವಕ್ಕಾಗಿ ಹೋರಾಡುತ್ತಿದ್ದಾರೆ. ಅವರ ಸಂಘರ್ಷಕ್ಕೆ ಅನೇಕ ಹಿರಿಯ ವ್ಯಕ್ತಿಗಳ, ಸಂತರ ಆಶೀರ್ವಾದ ಹಾಗೂ ಮಾರ್ಗದರ್ಶನ ಲಭಿಸಿತು.
ವಿಶೇಷ ಮಾಲಿಕೆ
ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
೧. ಚಿಕ್ಕಮಗಳೂರಿನ ದತ್ತಪೀಠದ ರಕ್ಷಣೆಗಾಗಿ ಮಾಡಿದ ಹೋರಾಟ
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದ ಮೇಲೆ ದತ್ತಪೀಠವಿದೆ. ಅದು ಸಾಕ್ಷಾತ್ ಅತ್ರಿ ಋಷಿ ಹಾಗೂ ಅವರ ಶಿಷ್ಯರು ತಪಸ್ಸು ಮಾಡಿದ ಪವಿತ್ರ ಕ್ಷೇತ್ರವಾಗಿದೆ; ಆದರೆ ಮುಸಲ್ಮಾನರು ಅತಿಕ್ರಮಣ ಮಾಡಿ ಅಲ್ಲಿ ಬಾಬಾ ಬುಡನ ಗಿರಿ ದರ್ಗಾ ನಿರ್ಮಿಸಿದ್ದಾರೆ. ಅಲ್ಲಿ ಪ್ರತಿವರ್ಷ ಉರೂಸ್ (ಜಾತ್ರೆ) ನಡೆಯುತ್ತದೆ; ಆದರೆ ಹಿಂದೂಗಳಿಗೆ ದತ್ತಜಯಂತಿ ಮತ್ತು ನಿತ್ಯನಿಯಮದ ಪೂಜೆ ಮಾಡಲು ಅನುಮತಿ ಇರಲಿಲ್ಲ. ಅಲ್ಲಿ ಅನಧಿಕೃತವಾಗಿ ಕೆಲವು ಗೋರಿಗಳನ್ನು ನಿರ್ಮಿಸಲಾಗಿದೆ. ಹಿಂದೂ ಕ್ಷೇತ್ರ ಆಗಿದ್ದರೂ ಅಲ್ಲಿ ಹಿಂದೂ ಅರ್ಚಕ ಇರಲಿಲ್ಲ. ಇದರ ವಿರುದ್ಧ ಶ್ರೀ. ಪ್ರಮೋದ ಮುತಾಲಿಕರು ದತ್ತಪೀಠದ ಮುಕ್ತಿಗಾಗಿ ದೊಡ್ಡ ಆಂದೋಲನ ಆರಂಭಿಸಿದರು. ಲಕ್ಷಗಟ್ಟಲೆ ಯುವಕರು ದತ್ರಜಯಂತಿಯಂದು ದತ್ತಮಾಲೆ ಧರಿಸಿ ದತ್ತಪೀಠದ ಕಡೆಗೆ ಹೋಗಲು ಆರಂಭಿಸಿದರು. ಅನಂತರ ಹಿಂದೂಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ದತ್ತಪೀಠದ ಕಡೆಗೆ ಹೋಗಲು ಆರಂಭಿಸಿದರು. ಅದರ ಪರಿಣಾಮವೆಂದು ಇಂದು ಈ ಹೋರಾಟದಲ್ಲಿ ಶೇ. ೯೦ ರಷ್ಟು ಯಶಸ್ಸು ಸಿಕ್ಕಿದೆ.
2. ವಿದೇಶಿ ವಿಕೃತಿ ಹಾಗೂ ಅನಧಿಕೃತ ಪಬ್ ವಿರುದ್ಧ ಹೋರಾಟ !
೨೦೦೯ ರಲ್ಲಿ ಮಂಗಳೂರಿನಲ್ಲಿ ಒಂದು ಸುಪ್ರಸಿದ್ಧ ವೈದ್ಯಕೀಯ ಮಹಾವಿದ್ಯಾಲಯದ ಮುಂದೆ ಒಂದು ಅನಧಿಕೃತ ಪಬ್ ನಡೆಯುತ್ತಿತ್ತು, ಅಲ್ಲಿ ಮಹಾವಿದ್ಯಾಲಯದ ಯುವತಿಯರು ಮತ್ತು ಯುವಕರು ಹೋಗಿ ಕಾಲಹರಣ ಮಾಡುತ್ತಿದ್ದರು. ಅನೇಕ ಬಾರಿ ವಿನಂತಿಸಿದರೂ ಪೊಲೀಸರು ಮತ್ತು ಪಬ್ನ ಮಾಲಕರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಗ ಶ್ರೀರಾಮ ಸೇನೆಯ ಕಾರ್ಯಕರ್ತರು ಪಬ್ನೊಳಗೆ ನುಗ್ಗಿ ಹಾಡುಹಗಲೆ ಮಹಾವಿದ್ಯಾಲಯದ ತರಗತಿಗೆ ಹೋಗದೆ ಪಬ್ನಲ್ಲಿ ಮೋಜು ಮಜಾ ಮಾಡುತ್ತಿದ್ದ ಯುವಕ-ಯುವತಿಯರಿಗೆ ವಿಚಾರಿಸಿದರು. ಯುವಕ-ಯುವತಿಯರೊಂದಿಗೆ ವಾದವಿವಾದ ನಡೆಯಿತು. ಈ ಘಟನೆಯನ್ನು ‘ಪಬ್ ಮೇಲೆ ದಾಳಿ’ ಎಂದು ಬಣ್ಣಿಸಿ ಪ್ರಸಿದ್ಧಿ ನೀಡಲಾಯಿತು. ಶ್ರೀರಾಮ ಸೇನೆಯ ೨೫ ಕಾರ್ಯಕರ್ತರನ್ನು ಬಂಧಿಸಲಾಯಿತು. ಈ ರೀತಿ ಸಮಾಜ ಕಂಟಕ ಪಬ್ಗಳ ವಿರುದ್ಧದ ಹೋರಾಟ ಆರಂಭವಾಯಿತು. ಈ ಸಂದರ್ಭದಲ್ಲಿ ಪಬ್ನಲ್ಲಿದ್ದ ಕೆಲವು ಯುವತಿಯರ ತಾಯಿಯರು ಶ್ರೀ. ಪ್ರಮೋದ ಮುತಾಲಿಕರನ್ನು ಪ್ರಶಂಸಿ, ನೀವು ಯೋಗ್ಯವಾದ ಕಾರ್ಯವನ್ನೆ ಮಾಡಿದ್ದೀರಿ. ನೀವು ನಮ್ಮ ಹುಡುಗಿಯರನ್ನು ಪಬ್ನ ಜಾಲದಿಂದ ರಕ್ಷಿಸಿದ್ದೀರಿ. ನಮ್ಮ ಹುಡುಗಿಯರು ಪಬ್ಗೆ ಹೋಗುವುದು ನಮಗೆ ತಿಳಿದಿರಲಿಲ್ಲ. ಮಕ್ಕಳ ತಾಯಿ-ತಂದೆಯರು ಮಾಡಬೇಕಾದ ಕಾರ್ಯವನ್ನು ನೀವು ಮಾಡಿದ್ದೀರಿ.’, ಎಂದು ಹೇಳಿದರು. ಈ ರೀತಿ ಒಂದು ಪಬ್ನಲ್ಲಿನ ಆಕ್ರಮಣದಿಂದ ಅನೇಕ ಅನಧಿಕೃತ ಪಬ್ಗಳಿಗೆ ಎಚ್ಚರಿಕೆ ನೀಡಿದಂತಾಯಿತು. ೨೦೧೮ ರಲ್ಲಿ ಮಂಗಳೂರಿನ ನ್ಯಾಯಾಲಯ ಈ ಪ್ರಕರಣದಲ್ಲಿ ಶ್ರೀ. ಮುತಾಲಿಕರನ್ನು ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ನಿರಪರಾಧಿಗಳೆಂದು ಮುಕ್ತಗೊಳಿಸಿತು. ವಿದೇಶಿ ವಿಕೃತ ಸಂಸ್ಕೃತಿಯ ವಿರುದ್ಧ ಜನಜಾಗೃತಿ ಮಾಡುವಾಗ ಅವರು ಕಥಿತ ‘ವೆಲೆಂಟಾಯಿನ್ ಡೇ’ (ಪ್ರೀತಿ ದಿನ), ‘ರೋಸ್ ಡೇ’ (ಗುಲಾಬಿ ನೀಡುವ ದಿನ), ‘ಫ್ರೆಂಡ್ಶಿಪ್ ಡೇ’ (ಮೈತ್ರಿ ಮಾಡುವ ದಿನ), ‘ಕಿಸ್ ಡೇ’ (ಮುತ್ತು ಕೊಡುವ ದಿನ) ಇಂತಹ ಪಾಶ್ಚಾತ್ಯ ಸಂಸ್ಕಾರದ ಹಿಂದಿನ ಕ್ರೈಸ್ತರ ಕೈವಾಡವನ್ನು ಬಯಲಿಗೆಳೆದು ಸಮಾಜವನ್ನು ಜಾಗೃತಗೊಳಿಸಿದರು.

೩. ಹಿಂದುತ್ವದ ಕಾರ್ಯಕ್ಕಾಗಿ ೧೧೭ ಕ್ಕಿಂತಲೂ ಹೆಚ್ಚು ಅಪರಾಧಗಳು ದಾಖಲಾಗಿದ್ದರೂ ವಿಚಲಿತರಾಗದೆ ಹೋರಾಡುವ ಹಿಂದೂ ನಾಯಕ !
ಶ್ರೀ. ಪ್ರಮೋದ ಮುತಾಲಿಕರು ಹಿಂದೂ ಸಮಾಜವನ್ನು ಜಾಗೃತಗೊಳಿಸುತ್ತಾರೆ ಹಾಗೂ ಹಿಂದೂ ಸಮಾಜದ ಮೇಲಾಗುವ ಆಘಾತ ಉದಾ. ಲವ್ ಜಿಹಾದ್, ಹಲಾಲ ಜಿಹಾದ್, ಮತಾಂತರ, ಭಯೋತ್ಪಾದನೆ ಹಾಗೂ ಹಿಂದೂ ಕಾರ್ಯಕರ್ತರ ಕೊಲೆ ಇತ್ಯಾದಿಗಳ ವಿಶ್ಲೇಷಣೆ ಮಾಡುತ್ತಾರೆ. ಆದ್ದರಿಂದ ಅನೇಕ ಸ್ಥಳಗಳಲ್ಲಿ ಪೊಲೀಸರು ಅವರ ವಿರುದ್ಧ ಅನೇಕ ಅಪರಾಧಗಳನ್ನು ದಾಖಲಿಸಿದ್ದಾರೆ. ಅವರು ಹಿಂದೂಗಳಿಗೆ ತಮ್ಮ ಅಕ್ಕ-ತಂಗಿಯರ ಮತ್ತು ಸ್ವಂತದ ರಕ್ಷಣೆಗಾಗಿ ಮನೆಯಲ್ಲಿ ಶಸ್ತ್ರಗಳನ್ನಿಡಬೇಕೆಂದು ಕರೆ ನೀಡಿದಾಗ ಪೊಲೀಸರು ಅವರ ವಿರುದ್ಧ ದ್ವೇಷಯುಕ್ತ ಭಾಷಣ ಮಾಡಿದರೆಂದು ಅನೇಕ ಸ್ಥಳಗಳಲ್ಲಿ ಅಪರಾಧವನ್ನು ದಾಖಲಿಸಿದರು. ‘ವಂದೇ ಮಾತರಮ್’ ಹೇಳದವರು, ಗೋಹತ್ಯೆ ಮಾಡುವವರು, ಶ್ರೀರಾಮಮಂದಿರವನ್ನು ವಿರೋಧಿಸುವವರೊಂದಿಗೆ ವ್ಯಾಪಾರ ಮಾಡಬಾರದು’, ಎಂದು ಕರೆ ನೀಡಿರುವುದರಿಂದ ಅವರ ವಿರುದ್ಧ ಅನೇಕ ಸ್ಥಳಗಳಲ್ಲಿ ಅಪರಾಧ ದಾಖಲಿಸಲಾಗಿದೆ. ಈ ರೀತಿ ಅವರ ವಿರುದ್ಧ ಕರ್ನಾಟಕದಲ್ಲಿ ೧೧೭ ಕ್ಕಿಂತಲೂ ಹೆಚ್ಚು ಅಪರಾಧಗಳು ದಾಖಲಾಗಿವೆ. ಈ ಎಲ್ಲ ಅಪರಾಧಗಳ ವಿರುದ್ಧ ಅವರು ಕಾನೂನು ಪ್ರಕಾರ ಹೋರಾಡಿದ್ದಾರೆ. ಅವುಗಳಲ್ಲಿ ಶೇ. ೯೦ ರಷ್ಟು ಅಪರಾಧಗಳಲ್ಲಿ ನ್ಯಾಯಾಲಯ ಅವರನ್ನು ನಿರಪರಾಧಿ ಎಂದು ಮುಕ್ತಗೊಳಿಸಿದೆ.
೪. ಕರ್ನಾಟಕದ ಅನೇಕ ಜಿಲ್ಲೆ ಮತ್ತು ಅನೇಕ ರಾಜ್ಯಗಳಲ್ಲಿ ಪ್ರವೇಶ ನಿರ್ಬಂಧ
ಶ್ರೀ. ಮುತಾಲಿಕರು ಗೋವಾ ಸರಕಾರಕ್ಕೆ ಪಬ್ ಮತ್ತು ಕೆಸಿನೋ ಸಂಸ್ಕೃತಿಯನ್ನು ನಿಲ್ಲಿಸಬೇಕೆಂದು ಕರೆ ನೀಡಿದಾಗ ಗೋವಾ ಸರಕಾರ ಅವರ ಮೇಲೆ ಹಾಗೂ ಶ್ರೀರಾಮ ಸೇನೆಗೆ ೧೨ ವರ್ಷ ನಿರ್ಬಂಧ ಹೇರಿತ್ತು. ಅಷ್ಟು ಮಾತ್ರವಲ್ಲ, ಪಬ್ಗಳ ಮೇಲಿನ ಆಕ್ರಮಣದ ಪ್ರಕರಣದ ನಂತರ ದಕ್ಷಿಣ ಕನ್ನಡ ಜಿಲ್ಲೆ, ಹರಿಹರ, ಬೈಲಹೊಂಗಲ, ಕೋಲಾರ ಇತ್ಯಾದಿ ೧೫ ಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ ಅವರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ; ಆದರೆ ಈ ಎಲ್ಲ ನಿರ್ಬಂಧದ ವಿರುದ್ಧ ಕಾನೂನು ಪ್ರಕಾರ ಹೋರಾಟ ಮಾಡಿ ಬಹಳಷ್ಟು ಜಿಲ್ಲೆಗಳಲ್ಲಿನ ನಿರ್ಬಂಧವನ್ನು ನ್ಯಾಯಾಲಯ ತೆರವುಗೊಳಿಸಿದೆ. ಈ ರೀತಿ ಅವರು ಹಿಂದುತ್ವದ ಕಾರ್ಯಕ್ಕಾಗಿ ಅನೇಕ ಜಿಲ್ಲೆಗಳಲ್ಲಿ ಪ್ರವೇಶ ನಿರ್ಬಂಧದಂತಹ ಕಹಿ ಅನುಭವವಾಗಿರುವ ಏಕೈಕ ನಾಯಕರಾಗಿದ್ದಾರೆ.
೫. ಲವ್ ಜಿಹಾದ್ ತಡೆಗಟ್ಟಲು ‘ಹೆಲ್ಪ್ಲೈನ್'(ಸಹಾಯವಾಣಿ) ಸಂಖ್ಯೆ ಮತ್ತು ಪುಸ್ತಕ ಪ್ರಕಾಶನ
ಶ್ರೀ. ಪ್ರಮೋದ ಮುತಾಲಿಕರು ಲವ್ ಜಿಹಾದ್ನ ವಿರುದ್ಧ ಅನೇಕ ವರ್ಷಗಳಿಂದ ಹೋರಾಡುತ್ತಿದ್ದಾರೆ. ಲವ್ ಜಿಹಾದ್ನ ಪ್ರಕರಣಗಳನ್ನು ತಡೆಗಟ್ಟುವುದರಲ್ಲಿ ಕರ್ನಾಟಕ ಪೊಲೀಸರು ಅಸಫಲವಾಗಿದ್ದಾರೆ. ಆದ್ದರಿಂದ ಶ್ರೀರಾಮಸೇನೆಯ ವತಿಯಿಂದ ಲವ್ಜಿಹಾದ್ ತಡೆಗಟ್ಟಲು ‘ಲವ್ ಜಿಹಾದ್ ಹೆಲ್ಪ್ ಲೈನ್ ಸಂಖ್ಯೆ’ಯನ್ನು ಪ್ರಸಾರ ಮಾಡಲಾಗಿದೆ. ಲವ್ಜಿಹಾದ್ನ ಪ್ರಕರಣದಲ್ಲಿ ಹಿಂದೂ ಯುವತಿಯರು ಸಿಲುಕಿದರೆ ಅವರು ಹೆಲ್ಪ್ಲೈನ್ ಗೆ ಕರೆ ಮಾಡಿದರೆ ಶ್ರೀರಾಮ ಸೇನೆಯ ಕಾರ್ಯಕರ್ತರು ಅವರಿಗೆ ಸಹಾಯ ಮಾಡುತ್ತಾರೆ. ಈ ಹೆಲ್ಪ್ ಲೈನ್ ಆರಂಭವಾದನಂತರ ನೂರಾರು ದೂರವಾಣಿ ಕರೆಗಳು ಬಂದಿವೆ. ಶ್ರೀರಾಮ ಸೇನೆಯ ೨೦ ವರ್ಷಗಳ ಕಾರ್ಯಾವಧಿಯಲ್ಲಿ ಅವರು ೪,೭೬೦ ಹಿಂದೂ ಹುಡುಗಿಯರನ್ನು ಇಸ್ಲಾಂನ ಜಾಲದಿಂದ ಹೊರಗೆ ತಂದಿದ್ದಾರೆ. ಅನೇಕ ಪ್ರಕರಣಗಳಲ್ಲಿ ದೂರನ್ನು ದಾಖಲಿಸಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ಶ್ರೀರಾಮ ಸೇನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಹೋದಾಗ ಅವರಿಗೆ ನ್ಯಾಯ ಸಿಕ್ಕಿರುವ ಘಟನೆ ಘಟಿಸಿದೆ. ಉದಾಹರಣೆಗೆ ಹುಬ್ಬಳ್ಳಿಯಲ್ಲಿನ ನೇಹಾ ಹಿರೇಮಠ ಪ್ರಕರಣದಲ್ಲಿ ಮತಾಂಧ ಮುಸಲ್ಮಾನ ಯುವಕ ಹಿಂದೂ ಯುವತಿಯ ಹತ್ಯೆ ಮಾಡಿದನಂತರವೂ ಅವನನ್ನು ಮಹಾವಿದ್ಯಾಲಯದಿಂದ ಹೊರಗೆ ಹಾಕಿರಲಿಲ್ಲ. ಇದು ಶ್ರೀ. ಮುತಾಲಿಕರ ಗಮನಕ್ಕೆ ಬಂದ ತಕ್ಷಣ ಅವರು ಪ್ರಾಂಶ್ಯುಪಾಲರನ್ನು ಭೇಟಿ ಮಾಡಿದನಂತರ ಹಿಂದೂ ಯುವತಿಯ ಹತ್ಯೆ ಮಾಡಿದ ಮುಸಲ್ಮಾನ ಯುವಕನನ್ನು ಮಹಾವಿದ್ಯಾಲಯದಿಂದ ಹೊರಗೆ ಹಾಕಿದರು.
ಶ್ರೀ. ಮುತಾಲಿಕರು ಇತ್ತೀಚೆಗಷ್ಟೆ ‘ಲವ್ ಜಿಹಾದ್’ ಎಂಬ ಹೆಸರಿನ ಕನ್ನಡ ಭಾಷೆಯ ಪುಸ್ತಕವನ್ನು ಪ್ರಕಾಶನ ಮಾಡಿ ಅದರ ವಿಷಯದಲ್ಲಿ ಜನಜಾಗೃತಿ ಮೂಡಿಸಿದ್ದಾರೆ.
೬. ಗೋರಕ್ಷಣೆಗಾಗಿ ಅವರು ಮಾಡಿದ ಹೋರಾಟ
ಶ್ರೀರಾಮ ಸೇನೆಯ ಕಾರ್ಯಕರ್ತರು ಹಗಲಿರುಳು ಜೀವ ಪಣಕ್ಕಿಟ್ಟು ಅನಧಿಕೃತವಾಗಿ ಗೋ ಸಾಗಾಟ ಮಾಡುವ ಮತಾಂಧರ ವಿರುದ್ಧ ಹೋರಾಟ ಮಾಡಿ ಅವರು ೧೩ ಸಾವಿರ ಹಸುಗಳನ್ನು ರಕ್ಷಣೆ ಮಾಡಿದರು. ೩೦ ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕರ್ತರಿಗೆ ಗೋರಕ್ಷಣೆಯ ದೀಕ್ಷೆ ನೀಡಿದ್ದಾರೆ. ಗೋರಕ್ಷಣೆಯ ಅನೇಕ ಪ್ರಕರಣಗಳಲ್ಲಿ ಪೊಲೀಸರ ಸುಳ್ಳು ಖಟ್ಲೆಗಳು ಮತ್ತು ರಾಜಕೀಯ ಒತ್ತಡದಿಂದ ಕಾರ್ಯಕರ್ತರಿಗೆ ಅನೇಕ ತಿಂಗಳು ಸೆರೆಮನೆಯಲ್ಲಿರಬೇಕಾಯಿತು. ಈ ರೀತಿ ಶ್ರೀರಾಮ ಸೇನೆ ಗೋರಕ್ಷಣೆಗಾಗಿ ನಿರಂತರ ಕಾರ್ಯ ಮಾಡುತ್ತಿದೆ.

೭. ಮತಾಂಧರ ವಿರುದ್ಧ ಹೋರಾಟ
ಮುಗ್ಧ ಹಿಂದೂಗಳನ್ನು ಮತಾಂತರ ಮಾಡುವ ಧೂರ್ತ ಕ್ರೈಸ್ತ ಮಿಶನರಿಗಳ ವಿರುದ್ಧ ಅವರು ಅನೇಕ ಬಾರಿ ಹೋರಾಟ ಮಾಡಿದ್ದಾರೆ. ಅನೇಕ ಸ್ವಾಮಿಗಳನ್ನು, ಸಂತರೊಂದಿಗೆ ಅಂದಿನ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು ಹಾಗೂ ‘ಮತಾಂತರ ವಿರೋಧಿ ಕಾನೂನು’ ಅನ್ವಯಗೊಳಿಸಲು ವಿನಂತಿಸಿದರು. ಅದರಿಂದಾಗಿ ಕರ್ನಾಟಕದಲ್ಲಿ ‘ಮತಾಂತರ ವಿರೋಧಿ ಕಾನೂನು ಅನ್ವಯವಾಗಿದೆ.
೮. ಯಾವುದೇ ಹಿಂದೂಗೆ ಅನ್ಯಾಯವಾದರೆ ಅವರಿಗಾಗಿ ಹೋರಾಡುವ ಏಕೈಕ ನಾಯಕ ಶ್ರೀ. ಪ್ರಮೋದ ಮುತಾಲಿಕ !
ಶ್ರೀ. ಪ್ರಮೋದ ಮುತಾಲಿಕರು ಸಮಾಜದಲ್ಲಿನ ಯಾವುದೇ ಹಿಂದೂಗೆ ಅನ್ಯಾಯವಾದರೆ ಅವರಿಗಾಗಿ ಹೋರಾಡುತ್ತಾರೆ. ಆ ಹಿಂದೂ ಯಾವುದೇ ಸಂಘಟನೆಯಲ್ಲಿ ಅಥವಾ ಯಾವುದೇ ಪಕ್ಷದಲ್ಲಿರಲಿ, ಹಿಂದೂ ಸಮಾಜದ ರಕ್ಷಣೆಗಾಗಿ ಅವರ ಮನಸ್ಸಿವಲ್ಲಿ ಕಳವಳವಾಗುತ್ತದೆ. ಅವರು ಪಕ್ಷ, ಸಂಘಟನೆ, ಜಾತಿಭೇದವನ್ನು ಮರೆತು ಹಿಂದುತ್ವದ ರಕ್ಷಣೆಯ ಕಾರ್ಯ ಮಾಡುವ ಏಕೈಕ ನಾಯಕರಾಗಿದ್ದಾರೆ.
ಶ್ರೀ. ಪ್ರಮೋದ ಮುತಾಲಿಕ : ಹಿಂದೂಗಳ ಸಂಘಟನಾ ಶಕ್ತಿ ! ಡಾ. ಪ್ರವೀಣ ತೊಗಾಡಿಯಾ
ಶ್ರೀ. ಪ್ರಮೋದ್ ಮುತಾಲಿಕ್: ಹಿಂದೂಗಳ ಸಂಘಟನೆಗೆ ಒಂದು ಶಕ್ತಿ!
ಶ್ರೀ. ಪ್ರಮೋದ ಮುತಾಲಿಕರು ಕರ್ನಾಟಕದಲ್ಲಿನ ಪ್ರತಿಯೊಂದು ಮೂಲೆಯಲ್ಲಿ, ಊರುಕೇರಿಗಳಲ್ಲಿ ಗುರುತಿಸಲ್ಪಡುವ ವ್ಯಕ್ತಿತ್ವವಾಗಿದೆ. ನಿರ್ಭಯ ಹಾಗೂ ಸ್ಪಷ್ಟ ಮಾತು, ಯಾವುದೇ ರಾಜಿಯಿಲ್ಲದೆ ಹಿಂದುತ್ವವನ್ನು ಬೆಂಬಲಿಸುತ್ತಿದ್ದರಿಂದ ಅವರು ಕರ್ನಾಟಕದಲ್ಲಿ ಪ್ರಸಿದ್ಧರಾದರು. ಹಿಂದುತ್ವಕ್ಕೆ ಎಲ್ಲಿಯೇ ಆಘಾತವಾದರೆ ಅಥವಾ ಅಪಪ್ರಚಾರವಾದರೆ, ಶ್ರೀ. ಮುತಾಲಿಕರು ಮತ್ತು ಅವರ ಶ್ರೀರಾಮ ಸೇನೆಯ ಕಾರ್ಯಕರ್ತರು ಜೀವದ ಪರಿವೆ ಇಲ್ಲದೆ, ಯಾವುದೇ ಸಂಘಟನೆ, ಜಾತಿ, ಯಾವುದೇ ಪಕ್ಷದ ವಿಚಾರ ಮಾಡದೆ ಅವರ ರಕ್ಷಣೆ ಮಾಡಲು ತಕ್ಷಣ ಹೊರಡುವ ಏಕೈಕ ಹಿಂದೂ ನಾಯಕರಾಗಿದ್ದಾರೆ.
ಅವರು ಕೇವಲ ಒಂದು ವ್ಯಕ್ತಿಯಾಗಿರದೆ ಅವರು ಹಿಂದೂ ಸಮಾಜದ ಶಕ್ತಿಯಾಗಿದ್ದಾರೆ. ಇಂದು ಕೂಡ ಶ್ರೀ. ಮುತಾಲಿಕರನ್ನು ಮನ್ನಿಸುವ ಅನೇಕ ಜನರಿದ್ದಾರೆ. ಹಿಂದೂ ಸಮಾಜ ಅವರ ಬೆಂಬಲಕ್ಕೆ ನಿಲ್ಲುವ ಅವಶ್ಯಕತೆಯಿದೆ. ಅವರ ಸಂಘರ್ಷಯುಕ್ತ ಜೀವನದಿಂದಾಗಿ ಅವರು ಹಿಂದೂ ಯುವಕರಲ್ಲಿ ಧೈರ್ಯ, ಶೌರ್ಯ ಹಾಗೂ ಹೋರಾಡುವ ವೃತ್ತಿ ನಿರ್ಮಾಣ ಮಾಡಿದ್ದಾರೆ. ಇಂದು ಮುತಾಲಿಕರು ತಮ್ಮ ೬೨ ನೇ ವಯಸ್ಸಿನಲ್ಲಿಯೂ ಹಿಂದೂ ರಾಷ್ಟ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ‘ಹಿಂದೂ ಧರ್ಮ ರಕ್ಷಣೆಯ ಕಾರ್ಯ ಮಾಡುವ ಶ್ರೀ. ಪ್ರಮೋದ ಮುತಾಲಿಕರಿಗೆ ಶಕ್ತಿ ಹಾಗೂ ಚೈತನ್ಯ ಸಿಗಲಿ’, ಎಂದು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !
ದೇಶದಾದ್ಯಂತ ಹಿಂದುತ್ವದ ಸಂಘರ್ಷದಲ್ಲಿ ಅತೀ ಹೆಚ್ಚು ಖಟ್ಲೆ ಹಾಗೂ ಗಡಿಪಾರನ್ನು ಎದುರಿಸುತ್ತಿರುವ ನಾಯಕ ಶ್ರೀ. ಪ್ರಮೋದ ಮುತಾಲಿಕರಾಗಿದ್ದಾರೆ.’ – ಡಾ. ಪ್ರವೀಣ ತೊಗಾಡಿಯಾ, ಅಧ್ಯಕ್ಷ ಅಂತರರಾಷ್ಟ್ರೀಯ ಹಿಂದೂ ಪರಿಷತ್ತು
ಸಂಪಾದಕೀಯ ನಿಲುವುಸಮಾಜದಲ್ಲಿನ ಯಾವ ಹಿಂದೂವಿಗೂ ಅನ್ಯಾಯವಾದರೆ ಪಕ್ಷ, ಸಂಘಟನೆ, ಜಾತಿಮತವನ್ನು ಮರೆತು ಹಿಂದುತ್ವದ ರಕ್ಷಣೆಯ ಕಾರ್ಯ ಮಾಡುವ ಶ್ರೀ. ಪ್ರಮೋದ ಮುತಾಲಿಕರ ಆದರ್ಶವನ್ನು ಪಡೆಯಿರಿ ! |