ದೇವಸ್ಥಾನದ ಬಳಿ ₹472 ಕೋಟಿ FD, ₹300 ಕೋಟಿ ಚಿನ್ನ-ಬೆಳ್ಳಿ : Sri Mahakaleshwar Temple

ಉಜೈನಿ: ಶ್ರೀ ಮಹಾಕಾಳೇಶ್ವರ ದೇವಸ್ಥಾನದ ಚರಾಸ್ತಿ-ಸ್ಥಿರಾಸ್ತಿಗಳ ವಿವರ ಘೋಷಣೆ.

ಶ್ರೀ ಮಹಾಕಾಳೇಶ್ವರ ದೇವಾಲಯ

ಉಜೈನಿ (ಮಧ್ಯಪ್ರದೇಶ) – ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಇಲ್ಲಿನ ಶ್ರೀ ಮಹಾಕಾಳೇಶ್ವರ ದೇವಸ್ಥಾನದ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಸವಿಸ್ತಾರವಾದ ವಿವರಗಳನ್ನು ಮೊದಲ ಬಾರಿಗೆ ಸಾರ್ವಜನಿಕಗೊಳಿಸಲಾಗಿದೆ. ಇಲ್ಲಿಯವರೆಗೆ ದೇವಸ್ಥಾನದ ಸಮಿತಿಯು ಕೇವಲ ನಗದು ಮತ್ತು ಆನ್‌ಲೈನ್ ದೇಣಿಗೆಗಳ ಮಾಹಿತಿ ಮಾತ್ರ ಹಂಚಿಕೊಳ್ಳುತ್ತಿತ್ತು; ಆದರೆ ಈ ಬಾರಿ ದೇವಸ್ಥಾನದ ಒಟ್ಟು ಆರ್ಥಿಕ ಆಸ್ತಿ, ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿ, ಜಮೀನು ಹಾಗೂ ಚಿನ್ನ –  ಬೆಳ್ಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಮುನ್ನೆಲೆಗೆ ಬಂದಿವೆ.

ದೇವಸ್ಥಾನದ ಸಮಿತಿ ನೀಡಿದ ಮಾಹಿತಿಯ ಪ್ರಕಾರ, ವಿವಿಧ ಬ್ಯಾಂಕುಗಳಲ್ಲಿ ₹೪೭೨ ಕೋಟಿ ರೂಪಾಯಿಗಳ ನಿಶ್ಚಿತ ಠೇವಣಿ (ಫಿಕ್ಸ್ಡ್ ಡೆಪಾಸಿಟ್), ₹೧೬ ಕೋಟಿ ರೂಪಾಯಿ ನಗದು ಮತ್ತು ಸುಮಾರು ೯೦ ಎಕರೆ ಭೂಮಿ ಇದೆ. ಹಾಗೆಯೇ, ಅನೇಕ ವರ್ಷಗಳಿಂದ ಭಕ್ತರು ಅರ್ಪಿಸಿದ ಚಿನ್ನ ಮತ್ತು ಬೆಳ್ಳಿ ಒಡವೆಗಳ ಅಂದಾಜು ಮೌಲ್ಯ ₹೩೦೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಆದರೆ, ಭದ್ರತೆಯ ಕಾರಣಗಳನ್ನು ಹೇಳಿ  ಚಿನ್ನ ಮತ್ತು ಬೆಳ್ಳಿಯ ಸಂಪೂರ್ಣ ಅಧಿಕೃತ ವಿವರಗಳನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ.

೧೧ ಅಕ್ಟೋಬರ್ ೨೦೨೨ ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ‘ಶ್ರೀ ಮಹಾಕಾಲ ಲೋಕ’ ಲೋಕಾರ್ಪಣೆಗೊಂಡ ನಂತರ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿದಿನ ೪೦ ರಿಂದ ೫೦ ಸಾವಿರ ಭಕ್ತರು ದರ್ಶನಕ್ಕೆ ಬರುತ್ತಿದ್ದಲ್ಲಿ, ಈಗ ಈ ಸಂಖ್ಯೆ ಹೆಚ್ಚಾಗಿ ಪ್ರತಿದಿನ ಒಂದೂವರೆಯಿಂದ ಎರಡು ಲಕ್ಷಕ್ಕೆ ತಲುಪಿದೆ. ಆರ್ಥಿಕ ವರ್ಷ ೨೦೨೫-೨೬ ರಲ್ಲಿ ದೇವಸ್ಥಾನಕ್ಕೆ ₹೧೪೨ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ದೇಣಿಗೆ ಹರಿದುಬಂದಿದೆ.

ನೌಕರರ ವೇತನ, ಭದ್ರತೆ, ಸ್ವಚ್ಛತೆ, ನಿರ್ವಹಣೆ, ನಿರ್ಮಾಣ ಕಾರ್ಯ, ಅನ್ನದಾಸೋಹ , ಗೋಶಾಲೆ, ಮಹಾಕಾಳೇಶ್ವರ ವೈದಿಕ ಸಂಶೋಧನಾ ಸಂಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಬ್ಬ-ಹರಿದಿನಗಳ ವ್ಯವಸ್ಥೆಗಾಗಿ ಪ್ರತಿವರ್ಷ ₹೧೩೫ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.

ಸಂಪಾದಕೀಯ ನಿಲುವು

  • ಹಿಂದೂಗಳ ದೇವಸ್ಥಾನಗಳಲ್ಲಿ ಶತಕೋಟಿ ರೂಪಾಯಿಗಳು ದೇಣಿಗೆಯಾಗಿ ಸಂಗ್ರಹವಾಗುತ್ತಿದ್ದರೂ, ಅದರ ಬಳಕೆ ಹಿಂದೂ ಧರ್ಮದ ರಕ್ಷಣೆ, ಶಿಕ್ಷಣ, ಧರ್ಮ ಪ್ರಸಾರ ಮತ್ತು ಮತಾಂತರ ಹೊಂದಿದವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಆಗುತ್ತಿಲ್ಲ ಎಂಬುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
  • ಮಸೀದಿಗಳು, ಮದರಸಾಗಳು ಮತ್ತು ಚರ್ಚ್‌ಗಳಿಗೆ ಬರುವ ಹಣವನ್ನು ಹಿಂದೂಗಳ ಮೇಲೆ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಲು, ಹಿಂದೂಗಳನ್ನು ಮತಾಂತರಗೊಳಿಸಲು ಬಳಸಲಾಗುತ್ತಿದೆ. ದೇವಸ್ಥಾನಗಳ ಹಣ ಹಿಂದೂಗಳ ಕೆಲಸಕ್ಕೆ ಬಾರದಿದ್ದರೆ ಅದರ ಉಪಯೋಗವಾದರೂ ಏನು?
  • ಹಿಂದೂಗಳ ಮತಗಳಿಂದ ಅಧಿಕಾರಕ್ಕೆ ಬರುವ ಎಲ್ಲಾ ಪಕ್ಷಗಳ ಆಡಳಿತಗಾರರು ಹಿಂದೂಗಳ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸುತ್ತಿಲ್ಲ ಮತ್ತು ಹಿಂದೂಗಳೂ ಕೂಡ ಅಂತಹ ನಾಯಕರನ್ನು ಪ್ರಶ್ನಿಸುತ್ತಿಲ್ಲ, ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೇನಿದೆ?