ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮತ್ತು ಮೃತಪಟ್ಟವರ ಸಂಬಂಧಿಕರಿಗೆ ಬೇಗನೆ ಪರಿಹಾರ ಸಿಗಲು ಮೋಟಾರ್ ವಾಹನ ಕಾನೂನಿನಲ್ಲಾದ ಬದಲಾವಣೆ !

೧. ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಹಾಗೂ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ನೀಡುವ ಸೌಲಭ್ಯ ಮೋಟಾರ್ ವಾಹನ ಕಾನೂನಿನಲ್ಲಿದೆ

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

‘ಕೇಂದ್ರೀಯ ಮೋಟಾರ್ ವಾಹನ ಕಾನೂನು ೧೯೮೮ ರ ಕಲಮ್ ೬೧ ರಿಂದ ೬೫ ರಲ್ಲಿ ವಿವಿಧ ನಿಯಮಗಳ ಸಮಾವೇಶವಿದೆ. ಈ ಕಲಮ್‌ಗಳಲ್ಲಿ ‘ಹಿಟ್ ಎಂಡ್ ರನ್ (ಅಪಘಾತ ಮಾಡಿ ಪಲಾಯನಗೈಯುವುದು) ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ಹಣ ಸಿಗಬೇಕು ಹಾಗೂ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಗೆ ಪರಿಹಾರ ಸಿಗಬೇಕೆಂದು ಕೆಲವು ಸೌಲಭ್ಯಗಳಿವೆ. ನ್ಯಾಯಾಲಯಕ್ಕೆ ಹೋಗಿ ವಕೀಲರಿಗೆ ಹಣ ಖರ್ಚು ಮಾಡುವುದು, ನ್ಯಾಯಾಲಯದ ಶುಲ್ಕ ತುಂಬಿಸುವುದು ಹಾಗೂ ನ್ಯಾಯಕ್ಕಾಗಿ ಅನೇಕ ವರ್ಷ ನಿರೀಕ್ಷೆ ಮಾಡುವುದು ಇತ್ಯಾದಿಗಳನ್ನು ತಪ್ಪಿಸಲು ಮೇಲಿನ ಸೌಲಭ್ಯಗಳನ್ನು ಮಾಡಲಾಗಿದೆ.
ಈ ಕಲಮ್ ಅಪಘಾತದ ನಂತರದ ವೈದ್ಯಕೀಯ ಖರ್ಚು ಅಥವಾ ಪರಿಹಾರಕ್ಕೆ ಸಂಬಂಧಿಸಿದೆ. ಮೋಟಾರ್ ವಾಹನ ಕಾನೂನಿನಲ್ಲಿ ಅಪಘಾತಕ್ಕೀಡಾದವರಿಗೆ ಪರಿಹಾರ ಹಾಗೂ ವೈದ್ಯಕೀಯ ಖರ್ಚಿಗೆ ಸಂಬಂಧಿಸಿದ ಇತರ ಸೌಲಭ್ಯಗಳ ಸಮಾವೇಶವಿದೆ. ಉದಾಹರಣೆಗೆ ಈ ಕಾನೂನಿನಲ್ಲಿ ‘ಗೋಲ್ಡನ್ ಅವರ್ (ಅಪಘಾತದ ನಂತರ ಮೊದಲ ಕೆಲವು ಗಂಟೆಗಳಲ್ಲಿ ತುರ್ತು ವೈದ್ಯಕೀಯ ಸಹಾಯ) ಅಂತರ್ಗತ ಸಹಾಯ ಸಿಗಬೇಕೆಂದು ಹಾಗೂ ‘ಹಿಟ್ ಎಂಡ್ ರನ್ ಪ್ರಕರಣಗಳಲ್ಲಿ ಸಿಗುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಈ ಸುಧಾರಣೆಯನ್ನು ಮಾಡಲಾಗಿದೆ.

೨. ‘ಮಹಾರಾಷ್ಟ್ರ ಮೋಟಾರ್ ವಾಹನ ಕಾನೂನು ೧೯೮೮ರ ಕಲಮ್ ೧೬೧ ರಲ್ಲಿ ‘ಹಿಟ್ ಎಂಡ್ ರನ್ ಪ್ರಕರಣದಲ್ಲಿ ಮರಣ ಹೊಂದಿದವರ ವಾರಸುದಾರರಿಗೆ ೨ ಲಕ್ಷ ರೂಪಾಯಿ ನೀಡುವ ಸೌಲಭ್ಯವಿದೆ

ಮೋಟಾರ್ ವಾಹನ ಕಾನೂನಿನಲ್ಲಿ ಮಾಡಿದ ಸುಧಾರಣೆ ಈ ‘ಬೆನಿಫಿಶಲ್ ಲೆಜಿಸ್ಲೇಶನ್ (ಲಾಭದಾಯಕ ಕಾನೂನು) ಇದೆ. ಮೋಟಾರ್ ವಾಹನ ಕಾನೂನಿನಲ್ಲಿ ಪದೇ ಪದೇ ಸುಧಾರಣೆಗಳನ್ನು ಮಾಡಲಾಗುತ್ತದೆ. ಅದರಿಂದ ಅಪಘಾತಕ್ಕೀಡಾದವರಿಗೆ ಉತ್ತಮ ವೈದ್ಯಕೀಯ ಸಹಾಯ ಹಾಗೂ ಪರಿಹಾರ ಸಿಗಬಹುದು. ಇದರಲ್ಲಿ ವೈದ್ಯಕೀಯ ಖರ್ಚು ಪರಿಹಾರದ ಮೊತ್ತ ಹಾಗೂ ಅದಕ್ಕೆ ಸಂಬಂಧಿಸಿದ ಇತರ ನಿಯಮಾವಳಿಯ ಸಮಾವೇಶವಿದೆ. ‘ಮಹಾರಾಷ್ಟ್ರ ಮೋಟಾರ್ ವಾಹನ ಕಾನೂನು ೧೯೮೮ರ ಕಲಮ್ ೧೬೧ ರಲ್ಲಿ ಇತ್ತೀಚೆಗೆ ಒಂದು ಸುಧಾರಣೆ ಮಾಡ ಲಾಗಿದೆ. ಅದಕ್ಕನುಸಾರ ‘ಹಿಟ್ ಎಂಡ್ ರನ್ ಅಪಘಾತದ ಪ್ರಕರಣದಲ್ಲಿನ ಮರಣ ಹೊಂದಿದವರ ವಾರಸುದಾರರಿಗೆ ೨ ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ೫೦ ಸಾವಿರ ರೂಪಾಯಿ ನಗದು ಸಿಗಬೇಕೆಂಬ ವ್ಯವಸ್ಥೆಯಿದೆ. ಅದಕ್ಕನುಸಾರ ಕೇಂದ್ರ ಸರಕಾರ ಹಣಕೊಡಬೇಕು, ಎಂಬುದು ಇದರ ಅರ್ಥ. ಈ ವಿಷಯದಲ್ಲಿ ಒಂದು ಯೋಜನೆಯನ್ನೂ ಸಿದ್ಧಪಡಿಸಲು ಹೇಳಲಾಗಿದೆ. ಈ ಹೇಳಿಕೆಯನ್ನು ಸಾರಿಗೆ ಸಚಿವ ನಿತಿನ್ ಗಡ್ಕರಿ ಇವರು ನೀಡಿದ್ದರು. ಅಪಘಾತದಲ್ಲಿ ಆಗುವ ವಾಹನದಾರರ ಮರಣದ ವಿಷಯದಲ್ಲಿ ಗಡ್ಕರಿ ಇವರು ಯಾವಾಗಲೂ ಸಂವೇದನಾಶೀಲರಾಗಿರುತ್ತಾರೆ.

೩. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶ

‘ಎಸ್. ರಾಜಶೇಖರನ್ ವಿರುದ್ಧ ಭಾರತ ಸರಕಾರ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸ್ಪಷ್ಟ ಆದೇಶ ನೀಡಿದೆ. ಜನವರಿ ೨೦೨೫ ರ ಆದೇಶದ ಮೂಲಕ ತಕ್ಷಣ ಯೋಜನೆ ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಹೇಳಿದೆ. ಜನವರಿ ೨೦೨೫ ರಲ್ಲಿ ಎಸ್. ರಾಜಶೇಖರನ್ ಇವರು ಕೇಂದ್ರ ಸರಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪುನರ್ವಿಚಾರ ಅರ್ಜಿಯನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಮೇಲಿನ ಯೋಜನೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸ್ಪಷ್ಟವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಕ್ಕೆ (ಜನರಲ್ ಇನ್ಶೂರೆನ್ಸ್ ಕೌನ್ಸಿಲ್) ಆದೇಶ ನೀಡಿದೆ. ಹೀಗಿರುವಾಗ ಡಿಕ್ಕಿ ಹೊಡೆದು ಓಡಿ ಹೋಗಿರುವ ‘ಹಿಟ್ ಎಂಡ್ ರನ್ ಅಪಘಾತ ಪ್ರಕರಣದಲ್ಲಿ ಸಂತ್ರಸ್ತರಿಗೆ ಇದುವರೆಗೆ ಈ ಸೌಲಭ್ಯದ ಲಾಭ ಸಿಕ್ಕಿಲ್ಲ. ಆದ್ದರಿಂದ ಮುಂಬಯಿ ಉಚ್ಚ ನ್ಯಾಯಾಲಯದ ಸಂಭಾಜಿನಗರ ವಿಭಾಗೀಯ ಪೀಠದಲ್ಲಿ ೪ ಪುನರ್ವಿಚಾರ ಅರ್ಜಿಗಳು ದಾಖಲಾಗಿವೆ. ಅದರಲ್ಲಿ ನ್ಯಾಯಾಲಯ ಕೇಂದ್ರ ಸರಕಾರ, ರಾಜ್ಯ ಸರಕಾರ, ‘ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಮತ್ತು ಸಂಭಾಜಿನಗರ ಜಿಲ್ಲೆಯ ೩ ಸ್ಥಳಗಳ ಉಪವಿಭಾಗೀಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸು ಜಾರಿ ಮಾಡಿದೆ.

೪. ಅಪಘಾತಕ್ಕೀಡಾದ ಗಾಯಾಳುಗಳ ಚಿಕಿತ್ಸೆಗಾಗಿ ತಕ್ಷಣ ೫೦ ಸಾವಿರ ರೂಪಾಯಿ ನಗದು ನೀಡುವ ವ್ಯವಸ್ಥೆ

ಪೊಲೀಸರ ಭಯ, ಕಾನೂನುಗಳ ಅಜ್ಞಾನ, ಅಮಾಯಕರನ್ನು ಬಲಿಪಶು ಮಾಡುವ ವೃತ್ತಿ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಮಯ ವ್ಯರ್ಥವಾಗುವ ಭಯದಿಂದ ಅನೇಕ ಜನರು ಅಪಘಾತದಲ್ಲಿನ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ನಂತರ ಅವರ ಚಿಕಿತ್ಸೆಯ ಖರ್ಚನ್ನು ಯಾರು ನೋಡಬೇಕು ? ಎಂಬುದು ಕೂಡ ಮಹತ್ವದ ಒಂದು ಕಾರಣವಾಗಿದೆ. ಗಾಯ ಗೊಂಡ ಅನೇಕ ಜನರನ್ನು ತಕ್ಷಣ ಆಸ್ಪತ್ರೆಗೆ ಸೇರಿಸದ ಕಾರಣ ಅವರ ಪ್ರಾಣ ಹೋಗುತ್ತದೆ. ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ೫೦ ಸಾವಿರ ರೂಪಾಯಿ ನಗದು ನೀಡಬೇಕು, ಎಂಬುದು ಕಾನೂನಿನಲ್ಲಿದೆ.

ಇದರ ಅರ್ಥವೇನೆಂದರೆ, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರೆ ಹಾಗೂ ಅವರಿಗೆ ತಕ್ಷಣ ಚಿಕಿತ್ಸೆ ನೀಡಿದರೆ ಅವರ ಪ್ರಾಣ ಉಳಿಯಬಹುದು ಅದೇ ರೀತಿ ಅವರನ್ನು ಆಸ್ಪತ್ರೆಗೆ ಸೇರಿಸುವ ವ್ಯಕ್ತಿ ಯಾವುದೇ ಹಣ ಕೊಡುವ ಅವಶ್ಯಕತೆಯಿಲ್ಲ. ಇದರ ಜೊತೆಗೆ ಮರಣಹೊಂದಿದ ವ್ಯಕ್ತಿಯ ವಾರಸುದಾರರು ನ್ಯಾಯಾಂಗ ಪ್ರಕ್ರಿಯೆ ಮಾಡಬೇಕಾಗುತ್ತದೆ ಹಾಗೂ ವಕೀಲರಿಗೆ ಮಿತಿಮೀರಿದ ಶುಲ್ಕ ತೆರಬೇಕಾಗುತ್ತದೆ. ಈ ರೀತಿಯ ಅಡಚಣೆಗಳನ್ನು ತಪ್ಪಿಸಲು ಅವರಿಗೆ ತಕ್ಷಣ ೨ ಲಕ್ಷ ರೂಪಾಯಿಗಳನ್ನು ಕೊಡಬೇಕು, ಎನ್ನುವ ಸುಧಾರಣೆ ಕಾನೂನಿನಲ್ಲಿ ಮಾಡಲಾಗಿದೆ. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಕೆಂಪು ಪಟ್ಟಿಯ ವ್ಯವಹಾರದಲ್ಲಿ ಅನೇಕ ಒಳ್ಳೆಯ ಯೋಜನೆಗಳು ಸಿಲುಕಿರುವುದು ನೋಡಲು ಸಿಗುತ್ತವೆ.

೫. ಆಡಳಿತ ಯೋಜನೆಯನ್ನು ತಕ್ಷಣ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ !

ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಆಧಾರದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ ಸಂಭಾಜಿನಗರ ವಿಭಾಗೀಯ ಪೀಠವು ದೋಷಿ ವಕೀಲರಿಗೆ ಗದರಿಸಬೇಕು. ಇದರ ಜೊತೆಗೆ ಕಾನೂನಿನಲ್ಲಿ ಮಾಡಿದ ಸಂವಿಧಾನಾತ್ಮಕ ಸುಧಾರಣೆ, ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ಣಯಪತ್ರ, ಅದಕ್ಕೆ ನಾವು ‘ಬೆನಿಫಿಶಿಯಲ್ ಲೆಜಿಸ್ಲೇಶನ್ ಕಾನೂನು (ಲಾಭದಾಯಕ ಕಾನೂನು) ಎಂದು ಹೇಳಬಹುದು, ಅದರ ಲಾಭ ಜನರಿಗೆ ಆಗಬೇಕು. ಆದ್ದರಿಂದ ಇಂತಹ ವಿಷಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಾಹಿತಿ ಹಾಗೂ ಪ್ರಸಿದ್ಧಿ ವಿಭಾಗವು ಯೋಗ್ಯ ರೀತಿಯಲ್ಲಿ ಪ್ರಸಿದ್ಧಿ ನೀಡುವುದು ಆವಶ್ಯಕವಾಗಿದೆ. ಕಾನೂನಿನಲ್ಲಿ ಮಾಡಿದ ಸುಧಾರಣೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ಉದ್ದೇಶವನ್ನು ಗಮನದಲ್ಲಿಟ್ಟು ಸರಕಾರಿ ಸಿಬ್ಬಂದಿಗಳು ಅಪೇಕ್ಷಿತರಿಗೆ ತಕ್ಷಣ ಸಹಾಯ ಮಾಡಬೇಕು. ಆದ್ದರಿಂದ ಅಪಘಾತದಲ್ಲಿನ ಗಾಯಾಳುಗಳು ಮತ್ತು ಮೃತಪಟ್ಟಿರುವವರ ಕುಟುಂಬದವರಿಗೆ ತಕ್ಷಣ ಆರ್ಥಿಕ ಸಹಾಯ ಸಿಗಬಹುದು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೧.೩.೨೦೨೫)