
‘ಹಿಂದೊಮ್ಮೆ ಒಂದು ಕ್ಷೇತ್ರದ ಕೆಲವು ಗಣ್ಯ ವ್ಯಕ್ತಿಗಳು ಪ.ಪೂ. ಡಾಕ್ಟರರನ್ನು ಭೇಟಿಯಾಗಲು ಬರುವವರಿದ್ದರು.’ ಅವರನ್ನು ಭೇಟಿಯಾಗುವಾಗ ಏನು ವಿಷಯ ಹೇಳಬೇಕು ?’, ಇದರ ಬಗ್ಗೆ ಪ.ಪೂ. ಡಾಕ್ಟರರು ಗಣಕೀಯ ಕಡತದಲ್ಲಿ (ಕಂಪ್ಯೂಟರ್ನಲ್ಲಿ) ಬೆರಳಚ್ಚು ಮಾಡಿದ್ದರು. ಪ.ಪೂ ಡಾಕ್ಟರರು ಹೇಳಿದ ತಿದ್ದುಪಡಿಯನ್ನು ನಾನು ಕಡತದಲ್ಲಿ ಮಾಡುತ್ತಿದ್ದೆ. ಆ ಕಡತವು ಅರ್ಥವಾಗಲು ತುಂಬಾ ಕಠಿಣವಾಗಿತ್ತು. ೨ – ೩ ದಿನ ಈ ಸೇವೆ ನಡೆಯುತ್ತಿತ್ತು. ಈ ಸೇವೆ ಮಾಡುವಾಗ ನನಗೆ ತುಂಬಾ ಆಧ್ಯಾತ್ಮಿಕ ತೊಂದರೆಯಾಗುತ್ತಿತ್ತು. ನಾನು ಅದರಲ್ಲಿ ಏನು ತಿದ್ದುಪಡಿ ಮಾಡುತ್ತಿದ್ದೇನೆ, ಇದು ಸಹ ನನಗೆ ಸರಿಯಾಗಿ ತಿಳಿಯುತ್ತಿರಲಿಲ್ಲ ನನಗೆ ಆಗುತ್ತಿರುವ ತೊಂದರೆಯ ಬಗ್ಗೆ ನಾನು ಪ.ಪೂ.ಡಾಕ್ಟರರಿಗೆ ತಿಳಿಸಿದ ನಂತರ ಅವರು, ‘ಹಾಂ ! ತೊಂದರೆಯು ತುಂಬ ಹೆಚ್ಚಾಗಿದೆ. ನನಗೂ ತುಂಬ ತೊಂದರೆಯಾಗುತ್ತಿದೆ’ ಎಂದು ಹೇಳಿದರು.
ಅನಂತರ ಒಬ್ಬ ಸಾಧಕರು ‘ಇವತ್ತಿನ ಭೇಟಿ ರದ್ದಾಗಿದೆ. ಇವತ್ತಿನ ಬದಲು ನಾಡಿದ್ದು ಭೇಟಿ ಇದೆ’, ಎಂದು ಸಂದೇಶ ನೀಡಿದರು. ಆಗ ಪ.ಪೂ. ಡಾಕ್ಟರರು ಹೇಳಿದರು, ‘ಇವತ್ತಿನ ಸತ್ಸಂಗ ರದ್ದಾಯಿತು. ನಮ್ಮ ಸೇವೆ ಪೂರ್ಣವಾಗಲಿಲ್ಲವೆಂದು ದೇವರೇ ನಮ್ಮ ಕಾಳಜಿಯನ್ನು ತೆಗೆದುಕೊಂಡರು. ನಮಗೆ ಎರಡು ದಿನ ಹೆಚ್ಚಿಗೆ ಕೊಟ್ಟರು; ಆದರೆ ನಾವು ಮಾತ್ರ ಸೇವೆ ಪೂರ್ಣ ಮಾಡಲು ಕಡಿಮೆ ಬಿದ್ದೆವು’. ಸ್ವಲ್ಪ ಸಮಯದ ನಂತರ ಅವರು ಹೇಳಿದರು ‘ಇದು ಮಾತ್ರ ದೇವರ ಲೀಲೆಯೇ ಇದೆ’ ! ಎಂದರು. ನಂತರ ನನಗೆ ‘ದೇವರು ಈ ತಪ್ಪಿನಿಂದ ನನ್ನನ್ನು ಕಾಪಾಡಿದ ಬಗ್ಗೆ ನನ್ನ ಮನಸ್ಸಿನಲ್ಲಿ ಕೃತಜ್ಞತೆ ಮೂಡಿತು.’
– ಕು. ತೃಪ್ತಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೫.೮.೨೦೨೩)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !