ಈ ಹಿಂದೆ ಮಮತಾ ಬ್ಯಾನರ್ಜಿ ಇವರಿಂದ ಹಂಚಿಕೆಗೆ ವಿರೋಧವಿತ್ತು

ಢಾಕಾ – ಬಾಂಗ್ಲಾದೇಶ ಬೇಗನೆ ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಭಾರತದ ಜೊತೆಗೆ ಚರ್ಚಿಸಲು ಯೋಚಿಸುತ್ತಿದೆ, ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಜಲ ಸಂಪನ್ಮೂಲ ಇಲಾಖೆಯ ಸಲಹೆಗಾರ ಸಯಿದಾ ರಿಜವಾನ್ ಹಸನ್ ಇವರು ಮಾಹಿತಿ ನೀಡಿದರು. ‘ಸಾಮೂಹಿಕ ನದಿಯ ನೀರಿನಲ್ಲಿ ಬಾಂಗ್ಲಾದೇಶದ ಪಾಲು’ ಈ ವಿಷಯದ ಕುರಿತು ಸಂವಾದದಲ್ಲಿ ಹಸನ್ ಮಾತನಾಡುತ್ತಿದ್ದರು.
೨೦೧೧ ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ ಇವರ ಢಾಕಾ ಪ್ರವಾಸದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಇವರಲ್ಲಿ ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಒಪ್ಪಂದ ಆಗುವುದಿತ್ತು; ಆದರೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ‘ತೀಸ್ತಾ ನದಿಯ ನೀರು ಹಂಚಿಕೆಯಿಂದ ಬಂಗಾಲ ರಾಜ್ಯದಲ್ಲಿ ನೀರಿನ ಕೊರತೆ ನಿರ್ಮಾಣವಾಗುವುದು’, ಎಂದು ಹೇಳುತ್ತಾ ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಬಾಂಗ್ಲಾದೇಶದ ಬೇಡಿಕೆಗಳು ಸ್ಪಷ್ಟ ಮತ್ತು ದೃಢವಾಗಿ ಮಂಡಿಸಲಾಗುವುದು !
ಸಯಿದಾ ರಿಜವಾನ ಹಸನ್ ಮಾತು ಮುಂದುವರೆಸಿ, ಅಂತರಾಷ್ಟ್ರೀಯ ನದಿಗಳ ನೀರು ಹಂಚಿಕೆಯ ಪ್ರಶ್ನೆ ಜಟಿಲವಾಗಿದೆ; ಆದರೆ ಅಗತ್ಯ ಮಾಹಿತಿಯ ಕೊಡು ಕೊಳ್ಳುವಿಕೆ ರಾಜಕೀಯ ಆಗಬಾರದು. ಯಾವುದಾದರೂ ದೇಶಕ್ಕೆ ಮಳೆಯ ಅಂಕಿ ಸಂಖ್ಯೆ ತಿಳಿದಿರುವುದು ಅಗತ್ಯವಾಗಿದೆ. ಯಾವುದೇ ದೇಶ ಈ ಅಂಶದ ಕುರಿತು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಒಂದರ ಪರವಾಗಿ ಹೋಗುಲು ಸಾಧ್ಯವಿಲ್ಲ. ಬಾಂಗ್ಲಾದೇಶದ ಬೇಡಿಕೆಗಳು ಸ್ಪಷ್ಟ ಮತ್ತು ದೃಢವಾಗಿ ಮಂಡಿಸಲಾಗುವುದು. ದೇಶದ ಆಂತರಿಕ ಒಟ್ಟಾಗಿ ನದಿಗಳ ಸಂರಕ್ಷಣೆ ಮಾಡುವುದು ಕೂಡ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪ್ರಮುಖ ಮಹಮ್ಮದ್ ಯುನೂಸ್ ಇವರು, ಅವರ ಸರಕಾರ ದೀರ್ಘಕಾಲದಿಂದ ಬಾಕಿ ಉಳಿದಿರುವ ತೀಸ್ತಾ ನೀರು ಹಂಚಿಕೆ ಒಪ್ಪಂದದ ಕುರಿತು ಭಾರತದ ಜೊತೆಗೆ ಇರುವ ಭಿನ್ನಾಭಿಪ್ರಾಯ ಪರಿಹರಿಸಲು ಪ್ರಯತ್ನ ಮಾಡುವುದು ಎಂದು ಹೇಳಿದರು.
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ! : Trump Vs Lula
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದದ ಮಧ್ಯವರ್ತಿಯಾಗಿ ಶ್ರೇಯಸ್ಸು ಪಡೆದ ಪಾಕಿಸ್ತಾನ ! : US Iran Peace Deal
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಅಮೆರಿಕ-ಇರಾನ್ ನಡುವೆ ಅಂತಿಮವಾಗಿ ಕದನ ವಿರಾಮ ಒಪ್ಪಂದ! : US-Iran Peace Deal
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗಬೇಕು! – ಫ್ರಾನ್ಸ್
ಪಾಕಿಸ್ತಾನದ ಗುರುದ್ವಾರಕ್ಕೆ ನುಗ್ಗಿ ಸಿಖ್ ಸೇವಕ ದಂಪತಿಯ ಹತ್ಯೆ