ನವರಾತ್ರಿಯ ಕಾಲಾವಧಿಯಲ್ಲಿ ನಡೆಯುವ ಧರ್ಮಹಾನಿಯನ್ನು ತಡೆಗಟ್ಟಿ ಮತ್ತು’ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಯನ್ನು ಸಂಪಾದಿಸಿ !

ಸಾಧಕರಿಗೆ ಸೂಚನೆ ಮತ್ತು ಧರ್ಮಪ್ರೇಮಿ ಮತ್ತು ಹಿಂದುತ್ವನಿಷ್ಠರಿಗೆ ವಿನಂತಿ !

‘೩.೧೦.೨೦೨೪ ರಿಂದ ನವರಾತ್ರ್ಯುತ್ಸವವು ಆರಂಭವಾಗುತ್ತಿದೆ. ದೇಶದಾದ್ಯಂತ ಈ ಉತ್ಸವವನ್ನು ಬಹಳ ಉತ್ಸಾಹದಿಂದ ಮತ್ತು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ದೇವಿತತ್ತ್ವವು ಎಂದಿಗಿಂತಲೂ ೧ ಸಾವಿರ ಪಟ್ಟುಗಳಲ್ಲಿ ಕಾರ್ಯನಿರತವಾಗಿರುತ್ತದೆ. ನವರಾತ್ರಿಯ ನಿಮಿತ್ತ ವ್ಯಾಪಕ ಧರ್ಮಪ್ರಸಾರವಾಗಲು ಮುಂದಿನ ಪ್ರಯತ್ನ ಮಾಡಿ ದೇವಿಯ ಕೃಪೆಯನ್ನು ಸಂಪಾದಿಸಿ.

೧. ದೇವಸ್ಥಾನಗಳ ವಿಶ್ವಸ್ಥರು ಮತ್ತು ಅರ್ಚಕರ ಭೇಟಿ

ಅ. ದೇವಸ್ಥಾನಗಳ ವಿಶ್ವಸ್ಥರು ಮತ್ತು ಅರ್ಚಕರನ್ನು ಭೇಟಿಯಾಗಿ ಕುಲ ದೇವಿಯ ನಾಮಜಪದ ಪಟ್ಟಿಗಳ ಪ್ರಾಯೋಜಕತ್ವ ಮಾಡಿಸುವುದು.

ಆ. ದೇವಿಗೆ ಕುಂಕುಮಾರ್ಚನೆಗೆ ಸನಾತನದ ಕುಂಕುಮವನ್ನು ಬಳಸಲು ಆರ್ಚಕರನ್ನು ಪ್ರೋತ್ಸಾಹಿಸಬೇಕು.

ಇ. ದೇವಿಯ ದೇವಸ್ಥಾನಗಳ ಬಳಿ ಸನಾತನವು ಪ್ರಕಾಶಿಸಿದ ಗ್ರಂಥಗಳು, ಕಿರುಗ್ರಂಥಗಳು, ಸಾತ್ತ್ವಿಕ ಉತ್ಪಾದನೆಗಳು ಮತ್ತು ಪಂಚಾಂಗಗಳ ಪ್ರದರ್ಶನವನ್ನು ಏರ್ಪಡಿಸಬೇಕು.

ಈ. ‘ಶಾಸ್ತ್ರೋಕ್ತ ಪದ್ಧತಿಯಲ್ಲಿ ದೇವಿಯನ್ನು ಹೇಗೆ ಪೂಜಿಸಬೇಕು ?’. ಎಂಬ ಅಮೂಲ್ಯ ಜ್ಞಾನ ಮತ್ತು ಧರ್ಮಶಿಕ್ಷಣದ ಬಗ್ಗೆ ತಿಳಿಸುವ ಫ್ಲೆಕ್ಸ್‌ಗಳನ್ನೂ ದೇವಸ್ಥಾನದಲ್ಲಿ ಹಾಕಬಹುದು.

೨. ನವರಾತ್ರ್ಯುತ್ಸವ ಮಂಡಳಿಗಳ ಪ್ರಮುಖರ ಭೇಟಿ

ಅ. ಧರ್ಮಶಾಸ್ತ್ರಕ್ಕನುಸಾರ ಈ ಉತ್ಸವವನ್ನು ಆಚರಿಸಲು, ಹಾಗೆಯೇ ವ್ಯಾಪಕ ಧರ್ಮಪ್ರಸಾರವಾಗಲು ನವರಾತ್ರ್ಯುತ್ಸವ ಮಂಡಳಿಗಳ ಪ್ರಮುಖರಿಗೆ ಕರೆ ನೀಡಬಹುದು. ಇದಕ್ಕಾಗಿ ಧರ್ಮಶಿಕ್ಷಣ ವರ್ಗಗಳಲ್ಲಿನ ಧರ್ಮಪ್ರೇಮಿ ಮತ್ತು ಹಿಂದುತ್ವನಿಷ್ಠರ ಸಹಾಯ ಪಡೆಯಬಹುದು.

ಆ. ಹೆಚ್ಚಿನ ಮಂಡಳಿಗಳು ದೇವಿಯ ಅಸಾತ್ತ್ವಿಕ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತಾರೆ. ಅವರಿಗೆ ಧರ್ಮಶಾಸ್ತ್ರಾನುಸಾರ ಯೋಗ್ಯ ಮೂರ್ತಿಯ ಪ್ರತಿಷ್ಠಾಪನೆ ಮಾಡಲು ಪ್ರೋತ್ಸಾಹಿಸಬೇಕು.

ಇ. ಮಂಡಳಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆÉ. ಅದರಲ್ಲಿ ‘ಶಕ್ತಿಯ ಉಪಾಸನೆಯ ಮಹತ್ವ’, ‘ಸಾಧನೆ’, ‘ಹಿಂದೂ ರಾಷ್ಟ್ರ ಏಕೆ ಬೇಕು ?’ ಮುಂತಾದ ವಿಷಯ ಗಳ ಪ್ರವಚನಗಳನ್ನು ಆಯೋಜಿಸಬಹುದು. ‘ಹಿಂದೂ ಯುವಕ -ಯುವತಿಯರಿಗೆ ಸ್ವರಕ್ಷಣೆ ತರಬೇತಿಯ ಆವಶ್ಯಕತೆ’, ಈ ವಿಷಯ ಮಂಡಿಸಿ ಅದರ ಪ್ರಾತ್ಯಕ್ಷಿಕೆಯನ್ನೂ ತೋರಿಸಬಹುದು.

ಈ. ಮಂಡಳಿಗಳಲ್ಲಿ ಆಯೋಜಿಸಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವೆಂದು, ಹಾಗೆಯೇ ಕಾರ್ಯಕ್ರಮಗಳಿಗಾಗಿ ಮಂಡಳಿ ಗಳಿಗೆ ಭೇಟಿ ನೀಡುವ ಅತಿಥಿಗಳಿಗೆ ಉಡುಗೊರೆಯೆಂದು ಸನಾತನದ ಗ್ರಂಥಗಳು, ಕಿರುಗ್ರಂಥಗಳು, ಹಾಗೆಯೇ ಇತರ ಉತ್ಪಾದನೆಗಳನ್ನು ನೀಡಲು ಸೂಚಿಸಬೇಕು.

ಉ. ದೇವಿಪೂಜೆಗಾಗಿ ಊದುಬತ್ತಿ, ಕರ್ಪೂರ, ಕುಂಕುಮ, ಅಷ್ಟಗಂಧ ಮುಂತಾದ ಸನಾತನ-ನಿರ್ಮಿತ ಸಾತ್ತ್ವಿಕ ಉತ್ಪಾದನೆ ಗಳನ್ನು ಬಳಸಲು ವಿನಂತಿಸಬೇಕು.

೩. ಜನಸಾಮಾನ್ಯರಿಗೆ ಪ್ರಬೋಧನೆ ಮತ್ತು ಸಂಘಟನೆ

ಅ. ದೇವಿತತ್ತ್ವದ ಹೆಚ್ಚೆಚ್ಚು ಲಾಭವಾಗಲು ದೇವಿಭಕ್ತರ ಸಹಾಯದಿಂದ ‘ಶ್ರೀ ದುರ್ಗಾದೇವ್ಯೈ ನಮಃ |’ ಈ ನಾಮಜಪವನ್ನು ಸಾಮೂಹಿಕವಾಗಿ ಮಾಡಲು ಆಯೋಜಿಸಬೇಕು.

ಆ. ಹೆಚ್ಚಿನ ಜನರು ನವರಾತ್ರಿಯಲ್ಲಿ ಪ್ರತಿದಿನ ಕುಮಾರಿ ಪೂಜೆ ಮಾಡಿ ಅವಳಿಗೆ ಭೋಜನ ಮತ್ತು ಉಡುಗೊರೆ ನೀಡುತ್ತಾರೆ. ಸನಾತನದ ‘ಬಾಲಸಂಸ್ಕಾರ’ ಮಾಲಿಕೆಯಲ್ಲಿ ‘ನೀತಿಕಥೆಗಳು’, ‘ಅಧ್ಯಯನ ಹೇಗೆ ಮಾಡಬೇಕು ?’, ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು’ ಮುಂತಾದ ಗ್ರಂಥಗಳನ್ನು ಕುಮಾರಿಕೆಗೆ ಉಡುಗೊರೆಯೆಂದು ನೀಡಬಹುದು.

ಇ. ದಾಂಡಿಯಾ, ಗರಬಾ ಮುಂತಾದ ಮಾಧ್ಯಮಗಳಿಂದ ಅಶ್ಲೀಲ ನೃತ್ಯ, ಅಶ್ಲೀಲ ಅಂಗಪ್ರದರ್ಶನ ಮುಂತಾದ ತಪ್ಪು ಆಚರಣೆಗಳು ನಡೆಯುತ್ತಿವೆ, ಹಾಗೆಯೇ ‘ಲವ್‌ ಜಿಹಾದ್‌’ನಂತಹ ಘಟನೆಗಳ ಪ್ರಮಾಣ ಹೆಚ್ಚಾಗಿದೆ. ಆದುದರಿಂದ ಪವಿತ್ರವಾದ ಈ ನೃತ್ಯೋಪಾಸನೆಗೆ ವಿಕೃತ ಸ್ವರೂಪ ಬಂದಿದೆ. ಆ ಬಗ್ಗೆ ಯುವಕ-ಯುವತಿಯರಿಗೆ ಪ್ರಬೋಧನೆ ನೀಡಬೇಕು.

ನವರಾತ್ರ್ಯುತ್ಸವದಲ್ಲಿ ನಡೆಯುವ ಧರ್ಮಹಾನಿಯನ್ನು ತಡೆಗಟ್ಟಲು ಕಾನೂನುಬದ್ಧ ಮಾರ್ಗದಿಂದ ಪ್ರಯತ್ನಿಸಿ ಉತ್ಸವದ ಪಾವಿತ್ರ್ಯವನ್ನು ಕಾಪಾಡುವುದು, ಇದು ಪ್ರತಿಯೊಬ್ಬ ದೇವಿಭಕ್ತನ ಆದ್ಯ ಕರ್ತವ್ಯವಾಗಿದೆ. ಈ ತಪ್ಪು ಆಚರಣೆಯನ್ನು ತಡೆಗಟ್ಟಲು ‘ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸುವುದು ಮತ್ತು ಇತರರನ್ನೂ ಅದಕ್ಕಾಗಿ ಪ್ರೋತ್ಸಾಹಿಸುವುದು, ಇದು ದೇವಿಯ ಅತ್ಯುತ್ತಮ ಆರಾಧನೆಯಾಗುತ್ತದೆ !’