ಸಾಧಕರು ಪಡೆಯುವರು ಅನುಭೂತಿ | ಅವರಲ್ಲಿ ನೀವು ಮೂಡಿಸಿದಿರಿ ಭಾವಭಕ್ತಿ ||

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಸಾಧಕರು ಪಡೆಯುವರು ಅನುಭೂತಿ | ಅವರಲ್ಲಿ ನೀವು ಮೂಡಿಸಿದಿರಿ ಭಾವಭಕ್ತಿ ||

ವಾತ್ಸಲ್ಯ ಭಾವದಿಂದ ರೂಪಿಸುವಿರಿ ಸಾಧಕರನ್ನು |
ಹೇಗೆ ವರ್ಣಿಸಲಿ ಗುಣ ಅಲೌಕಿಕತೆಯನ್ನು ||

ಕು. ಶ್ರೀನಿವಾಸ (ವಯಸ್ಸು ೧೨ ವರ್ಷ) ಇವನು ಶೇ. ೬೨ ಆಧ್ಯಾತ್ಮಿಕ ಮಟ್ಟ ತಲುಪಿದಾಗ ಅವನನ್ನು ಮಮತೆಯಿಂದ ಶ್ಲಾಘಿಸುತ್ತಿರುವ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ (ವರ್ಷ ೨೦೨೧)

 

ಗುರುಗಳು ನುಡಿವರು ನಿಮ್ಮ ಗುಣ ವರ್ಣನಾತೀತ |
ಅದರಲ್ಲೊಂದು ವಾತ್ಸಲ್ಯಭಾವವಿದೆ ತುಂಬಿ ತುಳುಕುತ |
ಪ್ರೀತಿಯ ಸೆಳೆತ ಸಾಧಕರತ್ತ ಸೀಮಾತೀತ |
ಬಾಲಕ, ಯುವ ಮತ್ತು ವೃದ್ಧ ಹೀಗೆ ಎಲ್ಲರತ್ತ |
ಎಲ್ಲ ಮಕ್ಕಳನ್ನು ಸಮಾನವಾಗಿ ಪ್ರೀತಿಸುವರು ಮಾತೆ |
ಸಾಧಕರು ನಾವು ಅನುಭವಿಸುವರು ಆ ಮಮತೆ ||

 ಮಂಗಳೂರಿನ ಪೂ.(ಶ್ರೀಮತಿ) ರಾಧಾ ಪ್ರಭು (ವಯಸ್ಸು ೮೬ ವರ್ಷ) ಇವರನ್ನು ತಮ್ಮ ತಾಯಿಯಂತೆ ಆತ್ಮೀಯತೆಯಿಂದ ವಿಚಾರಿಸಿಕೊಳ್ಳುತ್ತಿರುವ ಶ್ರೀಸತ್ಶಕ್ತಿ (ವರ್ಷ ೨೦೧೯)

ನಿರಪೇಕ್ಷ ಪ್ರೀತಿಯ ಸಾಗರ |
ಸಾಧಕರ ಪ್ರಗತಿಯ ಧ್ಯೇಯ ನಿರಂತರ |

ಸಾಧಕರ ಸಾಧನೆಗಾಗಿ ಪಡುತ್ತೀರಿ ಪರಿಶ್ರಮ |
ಮಾಡುತ್ತೀರಿ ಸಹಾಯ ಪಡೆಯದೇ ವಿಶ್ರಾಮ |
ನೋಡಿದಾಕ್ಷಣ ಸಾಧಕರ ಸ್ಥಿತಿ ತಿಳಿಯುತ |
ಯೋಗ್ಯ ಮಾರ್ಗದರ್ಶನದಿಂದ ಬದಲಾವಣೆ ತರುತ |
ಹೆಜ್ಜೆ ಹೆಜ್ಜೆಗೂ ಅನುಭವಿಸುತ ಪ್ರೀತಿ |
ಕೋಟಿ ಕೋಟಿ ನಮನ ಶ್ರೀಸತ್ಶಕ್ತಿ ||

 ಶ್ರೀಸತ್ಶಕ್ತಿ (ಸೌ.) ಬಿಂದಾಅಕ್ಕನವರ ಕಂಕುಳದಲ್ಲಿ ಚಿ. ಸಾತ್ತ್ವಿಕ ವಾಡಕರ ಮತ್ತು ಸಾಧಕಿ ಸೌ. ಗೌರಿ ನಾಯಕ ಇವರ ಕಂಕುಳದಲ್ಲಿ ನಮಸ್ಕಾರ ಮುದ್ರೆಯಲ್ಲಿ ಚಿ. ಸ್ವೊಜಸ ನಾಯಕ (ವರ್ಷ ೨೦೨೩)