ಧರ್ಮಶಾಸ್ತ್ರದ ಪ್ರಕಾರ ನವಜಾತ ಶಿಶುವಿನ ಹೆಸರನ್ನು ಇಡಿ !

‘ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ. ‘ಮಗುವಿನಲ್ಲಿನ ಬೀಜದೋಷ ಮತ್ತು ಜನ್ಮದಿಂದ ಬಂದಿರುವ ದೋಷಗಳು ನಾಶವಾಗಬೇಕು, ಮಗುವಿನ ಆಯುಷ್ಯ ಹೆಚ್ಚಾಗಬೇಕು ಮತ್ತು ಮಗುವಿಗೆ ಜಗತ್ತಿನಲ್ಲಿ ವ್ಯವಹಾರ ಮಾಡಲು ಸುಲಭವಾಗಬೇಕು’, ಎಂದು ನಾಮಕರಣ ಸಂಸ್ಕಾರವನ್ನು ಮಾಡಲಾಗುತ್ತದೆ. ಧರ್ಮಶಾಸ್ತ್ರದಲ್ಲಿ ಹೇಳಿದ ನವಜಾತ ಶಿಶುವಿನ ಹೆಸರನ್ನಿಡುವ ವಿಧ (ಪ್ರಕಾರ) ಮತ್ತು ಅದರ ಮಹತ್ವವನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.

ಶ್ರೀ. ರಾಜ ಕರ್ವೆ

೧. ನವಜಾತ ಶಿಶುವಿನ ಹೆಸರಿಡುವ ವಿಧ 

ಧರ್ಮಶಾಸ್ತ್ರದಲ್ಲಿ ನವಜಾತ ಶಿಶುವಿನ ಹೆಸರನ್ನಿಡುವ ೪ ವಿಧಗಳನ್ನು ಹೇಳಲಾಗಿದೆ. ದೇವತೆಗಳು, ಮಾಸಗಳು (ತಿಂಗಳುಗಳು), ನಕ್ಷತ್ರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಹೀಗೆ ೪ ವಿಧಗಳಿವೆ. ಅವುಗಳ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

೧ ಅ. ದೇವತೆಗಳಿಗೆ ಸಂಬಂಧಿಸಿದ ಹೆಸರು : ಈ ಹೆಸರನ್ನಿಡು ವಾಗ ಮನೆತನದ (ಕುಟುಂಬದ) ಯಾವ ಕುಲದೇವತೆ ಇರುತ್ತಾಳೆಯೂ, ಅವಳ ಹೆಸರಿನ ಮುಂದೆ ದಾಸ, ಶರಣ ಇತ್ಯಾದಿ ಉಪಪದವಿಗಳನ್ನು ಜೋಡಿಸಿ ಆ ದೇವತೆಯ ಹೆಸರನ್ನಿಡುತ್ತಾರೆ, ಉದಾ. ದುರ್ಗಾದಾಸ, ಅಂಬಾದಾಸ ಇತ್ಯಾದಿ.

೧ ಆ. ಮಾಸಗಳಿಗೆ ಸಂಬಂಧಿಸಿದ ಹೆಸರು : ಯಾವ ಚಂದ್ರಮಾಸದಲ್ಲಿ ಶಿಶುವಿನ ಜನ್ಮವಾಗುತ್ತದೆಯೋ, ಆ ಮಾಸಕ್ಕೆ (ತಿಂಗಳಿಗೆ) ಸಂಬಂಧಿಸಿದ ಹೆಸರುಗಳನ್ನು ಇಡಲಾಗುತ್ತದೆ. ಚೈತ್ರಾದಿ ೧೨ ಮಾಸಗಳು ಮತ್ತು ಅವುಗಳಿಗೆ ಸಂಬಂಧಿಸಿದ ಹುಡುಗರ ಮತ್ತು ಹುಡುಗಿಯರ ಹೆಸರುಗಳನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ –

೧ ಇ. ನಕ್ಷತ್ರಗಳಿಗೆ ಸಂಬಂಧಿಸಿದ ಹೆಸರುಗಳು : ಯಾವ ನಕ್ಷತ್ರದಲ್ಲಿ ಶಿಶುವಿನ ಜನ್ಮವಾಗಿರುತ್ತದೆಯೋ, ಆ ನಕ್ಷತ್ರಕ್ಕೆ ಸಂಬಂಧಿಸಿದ ಹೆಸರನ್ನು ಇಡಲಾಗುತ್ತದೆ. ನಕ್ಷತ್ರಗಳ ಆಧಾರದಲ್ಲಿ ಹೆಸರುಗಳನ್ನು ಇಡುವ ೨ ವಿಧಗಳು ಮುಂದಿನಂತಿವೆ –

೧ ಇ ೧. ನಕ್ಷತ್ರದ ಹೆಸರಿಗೆ ಪ್ರತ್ಯಯವನ್ನು ಸೇರಿಸಿ ಹೆಸರಿಡುವುದು : ನಕ್ಷತ್ರದ ಹೆಸರಿಗೆ ಸಂಸ್ಕೃತ ಭಾಷೆಗನುಸಾರ ‘ಜಾತಃ (ಜನಿಸಿದ) ಈ ಅರ್ಥದಲ್ಲಿ ತದ್ವಿತ್ ಪ್ರತ್ಯಯವನ್ನು ಸೇರಿಸಿ ನಕ್ಷತ್ರನಾಮವನ್ನು ಇಡಲಾಗುತ್ತದೆ, ಉದಾ. ಕೃತ್ತಿಕಾದಿಂದ ಕಾರ್ತಿಕ, ರೋಹಿಣಿಯಿಂದ ರೌಹಿಣ ಇತ್ಯಾದಿ. ಕನ್ಯೆಯ ನಕ್ಷತ್ರನಾಮವನ್ನು ಇಡುವಾಗ ನಕ್ಷತ್ರದ ಹೆಸರು ಹೇಗೆ ಇರುತ್ತದೆಯೋ, ಹಾಗೆಯೇ ಇಡುತ್ತಾರೆ. ಉದಾ. ಕೃತ್ತಿಕಾ, ರೋಹಿಣಿ ಇತ್ಯಾದಿ.

೧ ಇ ೨. ನಕ್ಷತ್ರದ ಚರಣಾಕ್ಷರದಿಂದ ಹೆಸರಿಡುವುದು : ಪ್ರತಿಯೊಂದು ನಕ್ಷತ್ರದ ೪ ಪಾದ ಅಂದರೆ ೪ ಚರಣಗಳಿವೆ. ನಕ್ಷತ್ರದ ಪ್ರತಿಯೊಂದು ಚರಣಕ್ಕೆ ಒಂದು ವಿಶಿಷ್ಟ ಅಕ್ಷರವನ್ನು ಕೊಡಲಾಗಿದೆ, ಉದಾ. ಅಶ್ವಿನಿ ನಕ್ಷತ್ರದ ೪ ಚರಣಗಳಿಗೆ ಕ್ರಮವಾಗಿ ‘ಚೂ, ಚೆ, ಚೋ, ಲಾ ಈ ಅಕ್ಷರಗಳಿವೆ. ಮಗುವಿನ ಜನ್ಮವು ನಕ್ಷತ್ರದ ಯಾವ ಚರಣದಲ್ಲಿ ಆಗಿರುತ್ತದೆಯೋ, ಆ ಚರಣದ ಅಕ್ಷರದ ಮೇಲಿನಿಂದ ನಕ್ಷತ್ರನಾಮವನ್ನು ಇಡಲಾಗುತ್ತದೆ, ಉದಾ. ಅಶ್ವಿನಿ ನಕ್ಷತ್ರದ ಮೊದಲು ಚರಣದ ಮೇಲೆ ಜನ್ಮವಾಗಿದ್ದರೆ ‘ಚೂ ಅಕ್ಷರದಿಂದ ಚೂಡೇಶ್ವರ, ಚೂಡಾಮಣಿ ಇತ್ಯಾದಿ ಹೆಸರುಗಳನ್ನು ಇಡಲಾಗುತ್ತದೆ.

೧ ಈ. ವ್ಯವಹಾರಕ್ಕೆ ಸಂಬಂಧಿಸಿದ ಹೆಸರುಗಳು : ಈ ಹೆಸರುಗಳನ್ನು ವ್ಯವಹಾರದಲ್ಲಿ ಉಪಯೋಗಿಸಲು ಇಡಲಾಗುತ್ತದೆ. ಈ ಕುರಿತು ಶಾಸ್ತ್ರವು ಮುಂದಿನ ನಿಯಮಗಳನ್ನು ಹೇಳಿದೆ – ‘ವ್ಯವಹಾರಿಕ ಹೆಸರುಗಳಲ್ಲಿ ಕವರ್ಗ, ಚವರ್ಗ, ಟವರ್ಗ, ತವರ್ಗ ಮತ್ತು ಪವರ್ಗ ಇವುಗಳಲ್ಲಿನ ಮೂರನೇಯ, ನಾಲ್ಕನೇಯ ಮತ್ತು ಐದನೇ ವರ್ಣ (ಗ, ಘ, ಙ, ಜ, ಝ, ಞ, ಡ, ಢ, ಣ, ದ, ಧ, ನ, ಬ, ಭ, ಮ) ಮತ್ತು ‘ಹ ಇವುಗಳಲ್ಲಿ ಯಾವುದೇ ವರ್ಣವು ಹೆಸರಿನ ಮೊದಲ ಅಕ್ಷರವಿರಬೇಕು. ಹೆಸರಿನ ಮಧ್ಯಭಾಗದಲ್ಲಿ ಅಂತಸ್ಥ ವರ್ಣ (ಯ, ರ, ಲ ಅಥವಾ ವ) ಇರಬೇಕು. ಪುತ್ರನ ಹೆಸರಿನಲ್ಲಿನ ಅಕ್ಷರಗಳ ಸಂಖ್ಯೆಗಳು ಸಮ (೨, ೪ ಇತ್ಯಾದಿ) ಇರಬೇಕು ಮತ್ತು ಹೆಸರು ಅಕಾರಾಂತವಾಗಿರಬೇಕು, ಉದಾ. ಜಯ, ನೀಲಕಂಠ, ದೇವವ್ರತ, ಭಾಲಚಂದ್ರ, ಗಿರಿಧರ ಇತ್ಯಾದಿ. ಕನ್ಯೆಯ ಹೆಸರಿನಲ್ಲಿನ ಅಕ್ಷರಗಳ ಸಂಖ್ಯೆಗಳು ವಿಷಮ (೩, ೫ ಇತ್ಯಾದಿ) ಇರಬೇಕು ಮತ್ತು ಹೆಸರು ಆಕಾರಾಂತ ಅಥವಾ ಈ ಕಾರಾಂತವಾಗಿರಬೇಕು, ಉದಾ. ಗಾಯತ್ರಿ, ನಳಿನಿ, ಜಾಹ್ನವಿ, ದೇವಶ್ರೀ ಇತ್ಯಾದಿ. (ಆಧಾರ : ‘ಧರ್ಮಸಿಂಧು)

೧ ಈ ೧. ವ್ಯವಹಾರಕ್ಕೆ ಸಂಬಂಧಿಸಿದ ಹೆಸರುಗಳನ್ನಿಡಲು ಹೇಳಿದ ನಿಯಮಗಳ ಹಿಂದಿನ ಶಾಸ್ತ್ರ : ‘ಕವರ್ಗ, ಚವರ್ಗ, ಟವರ್ಗ, ತವರ್ಗ ಮತ್ತು ಪವರ್ಗ ಇವುಗಳಲ್ಲಿನ ಮೊದಲನೇಯ ಮತ್ತು ಎರಡನೇಯ ವರ್ಣ (ಕ, ಖ, ಚ, ಛ, ಟ, ಠ, ತ, ಥ, ಪ, ಫ) ಇವು ಪೃಥ್ವಿ, ಹಾಗೆಯೇ ಆಪ ತತ್ತ್ವಪ್ರಧಾನವಾಗಿರುವುದರಿಂದ ತಮೋಗುಣಿಯಾಗಿವೆ. ಆದ್ದರಿಂದ ಈ ವರ್ಣಗಳು ಹೆಸರಿನ ಮೊದಲು ಇರಬಾರದು. ಪುತ್ರನ ಹೆಸರು ಸಮ ಮತ್ತು ಕನ್ಯೆಯ ಹೆಸರು ವಿಷಮ ಅಕ್ಷರಸಂಖ್ಯೆಯಲ್ಲಿರಬೇಕು; ಏಕೆಂದರೆ ಸಮ ಸಂಖ್ಯೆಯು ಶಿವಪ್ರಧಾನ ಮತ್ತು ವಿಷಮ ಸಂಖ್ಯೆಯು ಶಕ್ತಿಪ್ರಧಾನವಾಗಿದೆ.

(ಆಧಾರ : ಸನಾತನದ ಗ್ರಂಥ ‘ಹದಿನಾರು ಸಂಸ್ಕಾರಗಳು)

೩. ಹೆಸರುಗಳು ಅರ್ಥಪೂರ್ಣ ಮತ್ತು ಸಾತ್ತ್ವಿಕವಾಗಿರಬೇಕು

ವ್ಯವಹಾರಿಕ ಹೆಸರುಗಳನ್ನಿಡುವಾಗ ಅವು ಅರ್ಥಪೂರ್ಣ, ಸಾತ್ತ್ವಿಕ ಮತ್ತು ಉಚ್ಚರಿಸಲು ಸುಲಭವಾಗಿರಬೇಕು. ದೇವತೆಗಳು, ಪೌರಾಣಿಕ ವ್ಯಕ್ತಿಗಳು, ಧರ್ಮಪರಾಯಣ ರಾಜರು, ನಕ್ಷತ್ರಗಳು, ನಿಸರ್ಗ, ವಿದ್ಯಾ, ಬುದ್ಧಿ, ತೇಜ, ಸೌಂದರ್ಯ, ಬಲ, ವೃದ್ಧಿ ಇತ್ಯಾದಿಗಳಿಗೆ ಸಂಬಂಧಿಸಿದ ಹೆಸರುಗಳನ್ನಿಡಬೇಕು, ಉದಾ. ನಾರಾಯಣ, ಸತ್ಯವಾನ, ದಶರಥ, ದಯಾನಂದ, ಜ್ಞಾನೇಶ್ವರ, ಅಶ್ವಿನಿ, ಉತ್ತರಾ, ಗಿರಿಜಾ, ಮಂಜಿರಿ, ಮೈಥಿಲಿ ಇತ್ಯಾದಿ. ಅರ್ಥಹೀನ ಹೆಸರುಗಳನ್ನು (ಉದಾ. ಬಂಡು, ಪಿಂಟು, ಮೋನು ಇತ್ಯಾದಿ) ಮತ್ತು ವಿದೇಶಿ ಭಾಷೆಯಲ್ಲಿನ ಹೆಸರುಗಳನ್ನು (ಪಿಂಕಿ, ಬೇಬಿ, ಡಾಲಿ ಇತ್ಯಾದಿ) ಇಡಬಾರದು. ಸಂಸ್ಕೃತ ಭಾಷೆಯು ದೇವವಾಣಿ ಆಗಿರುವುದರಿಂದ ಸಾತ್ತ್ವಿಕತೆಯ ಲಾಭವಾಗಲು ಸಂಸ್ಕೃತ ಹೆಸರುಗಳನ್ನಿಡಬೇಕು.

೫. ಧರ್ಮಶಾಸ್ತ್ರದಲ್ಲಿ ಹೇಳಿದ ಹೆಸರುಗಳನ್ನೇಕೆ ಇಡಬೇಕು ?

ಧರ್ಮವು ಮನುಷ್ಯನ ಸರ್ವತೋಮುಖ, ಅಂದರೆ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಉನ್ನತಿಯ ವಿಚಾರವನ್ನು ಮಾಡಿ ಅವನಿಗೆ ಒಂದು ಜೀವನಪದ್ಧತಿಯನ್ನು ನೀಡಿದೆ. ತದ್ವಿರುದ್ಧ ಆಧುನಿಕ ವಿಜ್ಞಾನವು ಕೇವಲ ಆಧಿಭೌತಿಕ ಬದಿಯ ವಿಚಾರವನ್ನು ಮಾಡುತ್ತದೆ. ವ್ಯಕ್ತಿಗೆ ಇಟ್ಟಿರುವ ಹೆಸರಿನ ಉಪಯೋಗವು ಕೇವಲ ವ್ಯವಹಾರವನ್ನು ಮಾಡಲು ಸುಲಭವಾಗಬೇಕು ಇಷ್ಟಕ್ಕೇ ಸೀಮಿತವಾಗಿಲ್ಲ. ಪ್ರತಿಯೊಂದು ಅಕ್ಷರದಲ್ಲಿ ವಿಶಿಷ್ಟ ಶಕ್ತಿ ಬೀಜರೂಪದಲ್ಲಿರುತ್ತದೆ. ವ್ಯಕ್ತಿಯ ಹೆಸರಿನಿಂದ ಅವನ ಮೇಲೆ ಆಧಿದೈವಿಕ ಸ್ತರದಲ್ಲಿ (ಸೂಕ್ಷ್ಮ-ಊರ್ಜೆಯ ಸ್ತರದಲ್ಲಿ) ಮತ್ತು ಆಧ್ಯಾತ್ಮಿಕ ಸ್ತರದಲ್ಲಿ (ಜೀವಾತ್ಮದ ಸ್ತರದಲ್ಲಿ) ಪರಿಣಾಮವಾಗುತ್ತದೆ. ಆದ್ದರಿಂದ ‘ಯಾವ ಅಕ್ಷರ ಹೆಸರಿನ ಆರಂಭದಲ್ಲಿರಬೇಕು, ಮಧ್ಯದಲ್ಲಿರಬೇಕು ಅಥವಾ ಯಾವ ಅಕ್ಷರಗಳು ಹೆಸರಿನಲ್ಲಿ ಇರಬಾರದು, ಸ್ತ್ರೀಯರ ಮತ್ತು ಪುರುಷರ ಹೆಸರಿನಲ್ಲಿ ಎಷ್ಟು ಅಕ್ಷರಗಳಿರಬೇಕು ?, ಇತ್ಯಾದಿಗಳ ಆಳವಾದ ವಿಚಾರವನ್ನು ಧರ್ಮಶಾಸ್ತ್ರದಲ್ಲಿ ಮಾಡಲಾಗಿದೆ. ಇದರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಪಾಲಕರು ತಮ್ಮ ಮಕ್ಕಳ ಹೆಸರುಗಳನ್ನು ಧರ್ಮಶಾಸ್ತ್ರಕ್ಕನುಸಾರ ಇಡಲು ಪ್ರಯತ್ನಿಸಬೇಕು.

– ಶ್ರೀ. ರಾಜ ಕರ್ವೆ, ಜೋತಿಷ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೧೦.೨೦೨೨)

  • ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚ ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಸಾಮಾನ್ಯವಾಗಿ ಕಣ್ಣಿಗೆ ಕಾಣದಂತಹವುಗಳು ಅವರಿಗೆ ಸೂಕ್ಷ್ಮದಲ್ಲಿ ಗೋಚರಿಸುತ್ತವೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.

  • ಈ ಸಂಚಿಕೆಯಲ್ಲಿನ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರ ವೈಯಕ್ತಿಕ ಅನುಭೂತಿಯಿದ್ದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು