ಶ್ರೀಕೃಷ್ಣನ ಆತ್ಮತತ್ತ್ವ ಜಗನ್ನಾಥಪುರಿಯಲ್ಲಿ !

ಶ್ರೀಕೃಷ್ಣನ ಆತ್ಮತತ್ತ್ವದ ಭಾಗ ಜಗನ್ನಾಥಪುರಿಯ ಶ್ರೀಕೃಷ್ಣನ ಮೂರ್ತಿಯಲ್ಲಿದೆ !

ಯಾದವಕುಲದ ನಾಶವನ್ನು ನೋಡಿದ ನಂತರವೇ ಶ್ರೀಕೃಷ್ಣನು ಅವತಾರವನ್ನು ಸಮಾಪ್ತಗೊಳಿಸಿದನು. ಪಾಂಡವರು ಅವನ ಪಾರ್ಥಿವವನ್ನು ಹುಡುಕಿ ತೆಗೆದು ಅಗ್ನಿಸಂಸ್ಕಾರವನ್ನು ಮಾಡಿದರು; ಆದರೆ ಅದರಲ್ಲಿ ಸುಡದ ಭಾಗವನ್ನು ಅವರು ಸಮುದ್ರದಲ್ಲಿ ವಿಸರ್ಜಿಸಿದರು. ಆ ಆತ್ಮತತ್ತ್ವದ ಭಾಗ ಮುಂದೆ ಜಗನ್ನಾಥಪುರಿಯ ರಾಜರಿಗೆ ದೊರಕಿತು ಮತ್ತು ಅದು ಅಲ್ಲಿನ ಶ್ರೀಕೃಷ್ಣನ ಮೂರ್ತಿಯಲ್ಲಿದೆ, ಎಂದು ಹೇಳುತ್ತಾರೆ; ಏಕೆಂದರೆ ಅದು ಅಮರ ಅಕ್ಷಯ ಈಶತತ್ತ್ವವಾಗಿದೆ !’