ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಧರ್ಮದ್ರೋಹಿ ಬುದ್ಧಿವಾದಿಗಳ ಇಬ್ಬಗೆ ವರ್ತನೆ !

‘ವಿಜ್ಞಾನವು ಸಿಗರೇಟ್, ಸಾರಾಯಿ ಮುಂತಾದವುಗಳ ದುಷ್ಪರಿಣಾಮಗಳನ್ನು ಸಾಬೀತು ಪಡಿಸಿದ್ದರೂ ಧರ್ಮದ್ರೋಹಿ ಬುದ್ಧಿವಾದಿಗಳು ಅವುಗಳಿಗೆ ಸಂಬಂಧಿಸಿದಂತೆ ಅಭಿಯಾನ ನಡೆಸುವುದಿಲ್ಲ.  ಜೂಜು, ಲಾಟರಿ ಇವುಗಳ ವಿಷಯಗಳಲ್ಲಿಯೂ ಅಭಿಯಾನ ನಡೆಸದೇ ಕೇವಲ ಹಿಂದೂ ಧರ್ಮದ ವಿರುದ್ಧ ಅಭಿಯಾನ ನಡೆಸಿ ತಮ್ಮನ್ನು ‘ಆಧುನಿಕತಾವಾದಿ’ ಎಂದೆ ತಿಳಿಯುತ್ತಾರೆ ಎಂಬುದನ್ನು ಗಮನದಲ್ಲಿಡಿ.’

ಕ್ರೌರ್ಯದ ಇತಿಹಾಸವಿಲ್ಲದ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮ !

‘ಧರ್ಮ ಇರುವುದು ಒಂದೇ ಮತ್ತು ಅದುವೇ ಹಿಂದೂ ಧರ್ಮ. ಇತರ ಎಲ್ಲವೂ ಪಂಥಗಳಾಗಿವೆ. ಹಿಂದೂ ಧರ್ಮವನ್ನು ಬಿಟ್ಟು ಉಳಿದ ಧರ್ಮಗಳ (ಪಂಥಗಳ) ಇತಿಹಾಸವನ್ನು ನೋಡಿದರೆ, ಅದರಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಲಕ್ಷಾಂತರ ಹತ್ಯೆಗಳ, ಕ್ರೌರ್ಯದ, ಬಲಾತ್ಕಾರಗಳ, ಗೆದ್ದ ಪ್ರದೇಶಗಳಲ್ಲಿರುವ ಸ್ತ್ರೀ-ಪುರುಷರನ್ನು ಗುಲಾಮರನ್ನಾಗಿಸಿ ಮಾರಾಟ ಮಾಡಿರುವ ಸಾವಿರಾರು ಉಲ್ಲೇಖಗಳಿವೆ. ಅನಾದಿ ಕಾಲದಿಂದ ಅಸ್ತಿತ್ವದಲ್ಲಿರುವ ಹಿಂದೂ ಧರ್ಮದ ಇತಿಹಾಸದಲ್ಲಿ ಮಾತ್ರ ಇಂತಹ ಒಂದೇ ಒಂದು ಉದಾಹರಣೆಯೂ ಇಲ್ಲ !

ದಿಶಾಹೀನ ಬುದ್ಧಿವಾದಿಗಳು ಮತ್ತು ಆಧುನಿಕತಾವಾದಿಗಳು !

‘ನನ್ನ ಹಿಂದೆ ಬನ್ನಿ’ ಎಂಬ ಅಂಧನ ಮಾತನ್ನು ಕೇಳುವವರು ಹೇಗೆ ಹಳ್ಳಕ್ಕೆ ಬೀಳುತ್ತಾರೆಯೋ ಅಂತಹ ಸ್ಥಿತಿಯೇ ಬುದ್ಧಿವಾದಿಗಳು ಮತ್ತು ಆಧುನಿಕತಾವಾದಿಗಳದ್ದಾಗಿದೆ. ದಿಶಾಹೀನರಾಗಿರುವ ಕಾರಣ ಅವರು ಸ್ವತಃ ಹಳ್ಳಕ್ಕೆ ಬೀಳುತ್ತಾರೆ ಮತ್ತು ಅವರ ಹಿಂದೆ  ಹೋಗುವವರು ಸಹ ಹಳ್ಳಕ್ಕೆ ಬೀಳುತ್ತಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ