ಪ್ರಭು ಶ್ರೀರಾಮಚಂದ್ರನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !

ರಾಮಾಯಣವು ಭಾರತದ ಇತಿಹಾಸದ ಅವಿಭಾಜ್ಯ ಅಂಗ. ಪ್ರಗತಿಪರರು ರಾಮಾಯಣದ ಅಸ್ತಿತ್ವವನ್ನು ಅಲ್ಲಗಳೆಯಲು ಎಷ್ಟೇ ಪ್ರಯತ್ನಪಟ್ಟರೂ, ರಾಮಾಯಣ ಕಾಲದ ಅನೇಕ ಕುರುಹುಗಳು ಇಂದಿಗೂ ನಮಗೆ ಆಯಾ ಸಮಯದ ಸಾಕ್ಷ್ಯವನ್ನು ನೀಡುತ್ತವೆ. ರಾಮಾಯಣವು ತ್ರೇತಾಯುಗದಲ್ಲಿ ಆಗಿಹೋಗಿದ್ದರೂ ಅದರಿಂದ ಹಿಂದೂ ಸಂಸ್ಕೃತಿಯ ಮಹಿಮೆ, ಪ್ರಾಚೀನತೆ ನಮ್ಮ ಗಮನಕ್ಕೆ ಬರುತ್ತದೆ. ಈ ವಾರದ ಸಂಚಿಕೆಯಲ್ಲಿ ಶ್ರೀಲಂಕಾದ್ವೀಪದಲ್ಲಿರುವ ರಾಮಾಯಣ ಕಾಲದ ಸ್ಥಳಗಳ ಚಿತ್ರಗಳನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ.

ಸೀತಾಮಾತೆಯು ಅಗ್ನಿಪ್ರವೇಶ ಮಾಡಿದ ಸ್ಥಳದಲ್ಲಿರುವ ಅಶ್ವತ್ಥ ಮರ ಮತ್ತು ದೇವಸ್ಥಾನ. ಇದು ಲಂಕೆಯ ಮಧ್ಯಪ್ರಾಂತದ ಅತಿ ಎತ್ತರದ ಬೆಟ್ಟದ ಮೇಲಿದೆ.
ರಾವಣನ ಹೆಂಡತಿ ಮಂಡೋದರಿಯ ಅರಮನೆಯ ಅವಶೇಷಗಳು (ಗುರುಲುಪೋಥಾ) ! ಸೀತೆಯನ್ನು ಅಪಹರಿಸಿದ ರಾವಣನು ಮೊದಲು ಇಲ್ಲಿ ಇರಿಸಿದ್ದನು.
ಸೀತೆಯನ್ನು ಹುಡುಕುತ್ತಿದ್ದ ರಾಮಭಕ್ತ ಹನುಮಂತನು, ವೃಕ್ಷದ ಅಡಿಯಲ್ಲಿ ಕುಳಿತಿದ್ದ ಸೀತೆಯನ್ನು ನೋಡಿ ಆ ಮರದ ಮೇಲೆ ಹಾರಲು ಇದೇ ಬಂಡೆಗಲ್ಲಿನ ಮೇಲೆ ಕಾಲಿಟ್ಟಿದ್ದನು. ಅಲ್ಲಿ ಹನುಮಂತನ ಹೆಜ್ಜೆ ಗುರುತಿದೆ !