
ಪಾರಾದೀಪ (ಒಡಿಶಾ) – ಭಾರತೀಯ ಸಮುದ್ರ ಪ್ರದೇಶದಲ್ಲಿ ನುಗ್ಗಿ ಮೀನುಗಾರಿಕೆ ನಡೆಸುತ್ತಿದ್ದ 78 ಬಾಂಗ್ಲಾದೇಶದ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಬಂಧಿಸಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 2 ನೌಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ನೌಕೆಗಳು ‘ಎಫ್.ವಿ.ಲೈಲಾ-2’ ಮತ್ತು ‘ಎಫ್.ವಿ.ಮೇಘನಾ-5’ ಎಂದು ಗುರುತಿಸಲಾಗಿದೆ. ಅವರನ್ನು ವಿಚಾರಣೆಗಾಗಿ ಪಾರಾದೀಪ ಬಂದರಿಗೆ ಕರೆದೊಯ್ಯಲಾಗಿದೆ. ಭಾರತದ ಸಮುದ್ರದಲ್ಲಿ ನುಗ್ಗಿದ ಬಾಂಗ್ಲಾದೇಶದ ಮೀನುಗಾರರ ವಿರುದ್ಧ ‘ಸಾಗರ ವಲಯ ಕಾಯ್ದೆ 1981’ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಭಾರತದ ಗಡಿಯಲ್ಲಿ ಪ್ರವೇಶಿಸುವ ಶತ್ರು ದೇಶಗಳ ನುಸುಳುಕೋರರಿಗೆ ಮತ್ತೆಂದೂ ಭಾರತದ ಗಡಿಯಲ್ಲಿ ನುಸುಳುವ ಧೈರ್ಯ ಮಾಡಬಾರದು ಎಂಬ ಪಾಠವನ್ನು ಕಲಿಸಬೇಕು! – ಸಂಪಾದಕರು)
ಭಾರತೀಯ ಕರಾವಳಿ ರಕ್ಷಣಾ ಪಡೆ ಗಸ್ತು ತಿರುಗುತ್ತಿದ್ದಾಗ, ಮೀನುಗಾರಿಕೆ ನಡೆಸುತ್ತಿದ್ದ 2 ಬಾಂಗ್ಲಾದೇಶದ ನೌಕೆಗಳು ಭಾರತದ ಪ್ರಾದೇಶಿಕ ಸಮುದ್ರದಲ್ಲಿ ನುಸುಳಿರುವುದು ಕಂಡುಬಂದಿದೆ. ಅವರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಸೆರೆಹಿಡಿದಿದ್ದಾರೆ. ನೌಕೆಗಳಲ್ಲಿದ್ದ ಒಟ್ಟು 78 ಜನರನ್ನು ಬಂಧಿಸಲಾಗಿದೆ. ಎರಡೂ ನೌಕೆಗಳು ಬಾಂಗ್ಲಾದೇಶದಲ್ಲಿ ನೋಂದಣಿಯಾಗಿವೆ. ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !