ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಜಾಗೃತ ಹಿಂದೂಗಳಿಗೆ ದಿಶೆ ನೀಡುವುದು ಅವಶ್ಯಕ !

‘ಸಕ್ರಿಯ ಹಿಂದೂಗಳೇ, ಮಲಗಿರುವ ಹಿಂದೂಗಳನ್ನು ಜಾಗೃತಗೊಳಿಸುವುದರಲ್ಲಿ ಸಮಯ ವ್ಯರ್ಥ ಮಾಡಬೇಡಿ. ಈಗ ಜಾಗೃತ ಹಿಂದೂಗಳಿಗೆ ದಿಶೆ ನೀಡುವ ಕಾರ್ಯವನ್ನು ಮಾಡಿರಿ. ಆಗ ಮಾತ್ರ ನೀವು ಸಮೀಪಿಸುತ್ತಿರುವ ಆಪತ್ಕಾಲದಲ್ಲಿ ರಕ್ಷಿಸಲ್ಪಡುವಿರಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬಲ್ಲಿರಿ !’

ಚುನಾವಣೆಗಳೆಂಬ ಹುಡುಗಾಟ !

‘ಚುನಾವಣೆಗಳಿಗೆ ಸಂಬಂಧಿಸಿದಂತೆ ಪ್ರತಿದಿನಬರುವ ವಾರ್ತೆಗಳನ್ನು ಓದಿದಾಗ ‘ಈಗ ಚುನಾವಣೆಗಳು ಹುಡುಗಾಟ ವಾಗಿಬಿಟ್ಟಿವೆ’ ಎಂದೆನಿಸುತ್ತದೆ !’

ಪೊಲೀಸ್‌ ಇಲಾಖೆ ಮತ್ತು ಆಡಳಿತದ ದುಸ್ಥಿತಿ !

‘ಸದ್ಯದ ಪೊಲೀಸ್‌ ಇಲಾಖೆ ಮತ್ತು ಆಡಳಿತದ ದುಸ್ಥಿತಿ ನೋಡಿ, ಮುಂಬರುವ ಕಾಲದಲ್ಲಿ, ‘ಭ್ರಷ್ಟಾಚಾರ ಮಾಡದೇ ಇರುವಂತಹ ಒಬ್ಬ ಪೊಲೀಸ್‌ ಅಥವಾ ಸರಕಾರಿ ಅಧಿಕಾರಿಯನ್ನಾದರೂ ತೋರಿಸಿ ಮತ್ತು ಬಹುಮಾನ ಪಡೆಯಿರಿ !’ ಎಂದು ಜಾಹೀರಾತು ಬಂದರೆ ಆಶ್ಚರ್ಯವೆನಿಸಲಾರದು !’

ವಿದ್ಯಾಭ್ಯಾಸದಲ್ಲಿ ಮಾನವೀಯತೆಯ ಶಿಕ್ಷಣ ನೀಡದಿರುವುದರ ಪರಿಣಾಮ !

‘ಶಾಲೆಯಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಿಯೂ ಮಾನವೀಯತೆಯ ಶಿಕ್ಷಣವನ್ನು ನೀಡದಿರುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರನ್ನು ಲೂಟಿ ಮಾಡುವಂತಹ ವ್ಯಾಪಾರಿಗಳೂ, ನೌಕರಿ ಮಾಡುವವರೂ ನಿರ್ಮಾಣವಾಗಿದ್ದಾರೆ’.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ