ಕಾಂಗ್ರೆಸ್ಸಿನ ಹಿಂದೂವಿರೋಧಿ ಆಡಳಿತ ತಿಳಿಯಿರಿ !

೧. ಕಾಂಗ್ರೆಸ್ಸಿನ ಹಿಂದೂವಿರೋಧಿ ಆಡಳಿತ ತಿಳಿಯಿರಿ !

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ೧೦೮ ಅಡಿ ಎತ್ತರದ ಕಂಬದ ಮೇಲೆ ಹಿಂದೂಗಳು ಹಾರಿಸಿದ ಹನುಮ ಧ್ವಜವನ್ನು ಪೊಲೀಸರು ಬಲವಂತವಾಗಿ ಕೆಳಗಿಳಿಸಿದ್ದಾರೆ. ಹಿಂದೂಗಳು ಇದನ್ನು ವಿರೋಧಿಸಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ ಘಟನೆ ನಡೆದಿದೆ.

೨. ಹಿಂದೂಗಳಿಗೆ ಸರ್ವಧರ್ಮಸಮಭಾವದ ಪಾಠ ಹೇಳಿಕೊಡುವವರು ಈಗೇಕೆ ಮೌನವಾಗಿದ್ದಾರೆ ?

‘ಆಲ್‌ ಇಂಡಿಯಾ ಇಮಾಮ್‌ ಆರ್ಗನೈಸೇಶನ್‌’ನ ಮುಖ್ಯಸ್ಥ ಡಾ. ಇಮಾಮ್‌ ಉಮರ್‌ ಅಹ್ಮದ್‌ ಇಲ್ಯಾಸಿ ಇವರು ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿ ದ್ದರೆಂದು ಮತಾಂಧ ಮುಸಲ್ಮಾನರಿಂದ ಇವರಿಗೆ ಜೀವಬೆದರಿಕೆ ಬಂದಿದೆ.

೩. ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು !

ನಾವು ಅಯೋಧ್ಯೆಗೆ ಹೋಗಿ ಶ್ರೀರಾಮಲಲ್ಲಾನ ದರ್ಶನ ಪಡೆದರೆ ನಮ್ಮ ಮೇಲೆ ದಾಳಿಯಾಗಬಹುದು, ಎಂಬ ವಿಚಾರದಿಂದ ಬಾಂಗ್ಲಾದೇಶದ ಹಿಂದೂಗಳು ಭಯಭೀತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಹಿಂದೂಗಳ ಮೇಲೆ ದಾಳಿಗಳು ನಡೆದಿದ್ದವು.

೪. ಹಿಂದೂಗಳ ಸಂಘಟಿತ ವಿರೋಧಕ್ಕೆ ದೊರಕಿದ ಯಶಸ್ಸನ್ನು ತಿಳಿಯಿರಿ !

ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಲಕ್ಷತೀರ್ಥ ವಸಾಹತ್‌ ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮದರಸಾವನ್ನು ಕೆಡವಲು ಹೋದ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಮುಸಲ್ಮಾನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟಾಗಿ ವಿರೋಧಿಸಿದರು. ಹಿಂದೂಗಳಿಂದ ಪ್ರತಿಭಟನೆಯಾದ ನಂತರ, ಮದರಸಾವನ್ನು ಅಂತಿಮವಾಗಿ ಮುಸಲ್ಮಾನರು ಮತ್ತು ಮಹಾಪಾಲಿಕೆಯವರು ನೆಲಸಮಗೊಳಿಸಿದರು.

೫. ಹಿಂದೂದ್ವೇಷಿ ಬಿಬಿಸಿಗೆ ಕಪಾಳಮೋಕ್ಷ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದಾಗ ಜಗತ್ತಿನಾದ್ಯಂತ ಹಿಂದೂಗಳು ಸಂತೋಷಪಟ್ಟರು; ಆದರೆ ಇದರ ವರದಿ ಮಾಡುವಾಗ ಬಿಬಿಸಿ ಪಕ್ಷಪಾತ ಮಾಡಿದೆ ಎಂದು ಹೇಳಲು ವಿಷಾದವಾಗುತ್ತಿದೆ, ಎಂದು ಬ್ರಿಟಿಷ್‌ ಸಂಸದ ಬಾಬ್‌ ಬ್ಲ್ಯಾಕ್ಮನ್‌ ಅವರು ಸಂಸತ್ತಿನಲ್ಲಿ ‘ಬ್ರಿಟಿಷ್‌ ಮಾಧ್ಯಮ ಬಿಬಿಸಿ’ಗೆ ಕಪಾಳಮೋಕ್ಷ ಮಾಡಿದರು.

೬. ಅಂತಹ ಪ್ರಚೋದಕರನ್ನು ಹತೋಟಿಗೆ ತನ್ನಿರಿ !

ಜುನಾಗಢ್‌ನ ಮುಫ್ತಿ ಸಲ್ಮಾನ್‌ ಅಝ್ಹರಿ ಇವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ಸ್ವಲ್ಪ ಸಮಯ ಶಾಂತಿ ಇದೆ, ನಂತರ ಹರಿತ ಬರುತ್ತದೆ. ಇಂದು ನಾಯಿಗಳ (ಹಿಂದೂಗಳ) ಸಮಯ, ನಾಳೆ ನಮ್ಮ ಸರದಿ’ ಎಂದು ಜ್ಞಾನವಾಪಿಯಲ್ಲಿ ಹಿಂದೂಗಳು ಪೂಜೆಯನ್ನು ಆರಂಭಿಸಿದ ವಿಷಯದಲ್ಲಿ ಈ ಹೇಳಿಕೆ ನೀಡಿದ್ದಾರೆ.