
ಸರ್ವೋಚ್ಚ ನ್ಯಾಯಾಲಯವು ರಾಮಜನ್ಮಭೂಮಿಯ ಮೊಕದ್ದಮೆಯಲ್ಲಿ, ಮಸೀದಿಗಾಗಿ ೫ ಎಕರೆ ಭೂಮಿಯನ್ನು ನೀಡಬೇಕು ಎಂಬಂತಹ ತೀರ್ಪನ್ನೂ ನೀಡಿದೆ. ಈ ತೀರ್ಪು ಸರ್ವೋಚ್ಚ ನ್ಯಾಯಾಲಯದ್ದಾಗಿರುವುದರಿಂದ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಈ ತೀರ್ಪಿನ ನಂತರ ಇದಕ್ಕೆ ಸಂಬಂಧಿಸಿದಂತೆ ನಾನು ಒಂದು ಅರ್ಜಿಯನ್ನೂ ಸಲ್ಲಿಸಿದ್ದೆ, ‘ಮುಸಲ್ಮಾನರಿಗೆ ಯಾವುದೇ ರೀತಿಯಲ್ಲಿ ಭೂಮಿಯನ್ನು ನೀಡುವುದು, ತಪ್ಪಾಗಿದೆ. ಈ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.’ ‘ಕಟ್ಟಬೇಕಾಗಿರುವ ಮಸೀದಿ ನಿರ್ಮಾಣವಾಗಬಾರದೆಂದು ಹಿಂದೂ ಸಮಾಜಕ್ಕೆ ಅನಿಸಬೇಕು’, ಎಂದು ನಾನು ಭಾವಿಸುತ್ತೇನೆ; ಏಕೆಂದರೆ ಹಿಂದೂಗಳ ಹಣ, ಸರಕಾರದ ಹಣ ಅಥವಾ ಸರಕಾರದ ಭೂಮಿಯಲ್ಲಿ ಯಾವುದೇ ಮಸೀದಿ ಕಟ್ಟುವಂತಿಲ್ಲ. ಈ ಕಟ್ಟಡದ, ಅಂದರೆ ಬಾಬರಿ ಮಸೀದಿಯ ಬದಲು ಅವರಿಗೆ ಭೂಮಿ ನೀಡುವುದು ದೊಡ್ಡ ತಪ್ಪಾಗಿದೆ. ಆ ಮಸೀದಿಯ ಭೂಮಿಪೂಜೆಯ ವಿಷಯ ಬಂದರೆ, ಮುಸಲ್ಮಾನರಲ್ಲಿ ಭೂಮಿ ಪೂಜೆ ಮಾಡುವುದಿಲ್ಲ. ಕಾಮಗಾರಿಯನ್ನು ಅವರು ಯಾವಾಗಲೂ ಮಾಡಬಹುದು. ನನ್ನ ತಿಳುವಳಿಕೆಗನುಸಾರ ನಮ್ಮ ಯಾವುದೇ ರಾಜಕೀಯ ನೇತಾರ, ಸರಕಾರಿ ಪದಾಧಿಕಾರಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಯಾವುದೇ ಮಂತ್ರಿ ಅಥವಾ ರಾಜ್ಯ ಸಚಿವರು ಇಂತಹ ಕಾರ್ಯಕ್ರಮಕ್ಕೆ ಹೋಗಬಾರದು; ಏಕೆಂದರೆ ‘ಈ ದೇಶದಲ್ಲಿ ಬಾಬರನ ಹೆಸರಿನಲ್ಲಿ ಏನಾದರೂ ನಿರ್ಮಾಣ ಆಗುವುದನ್ನು ನಾವು ಹಿಂದೂಗಳು ಮೂಲತಃ ಸಹಿಸುವುದಿಲ್ಲ ಮತ್ತು ಅದನ್ನು ನಾವು (ಹಿಂದೂಗಳು) ಸಹಿಸಬಾರದು. ಅದರಲ್ಲಿ ಯಾರೂ ಪಾಲ್ಗೊಳ್ಳಬಾರದು ಮತ್ತು ಆ ಕಾರ್ಯಕ್ರಮವನ್ನು ಪೂರ್ಣ ಬಹಿಷ್ಕರಿಸ ಬೇಕೆಂದು ಎಂಬುದು ನನ್ನ ಮನವಿ.
– ಪೂ. (ನ್ಯಾಯವಾದಿ) ಹರಿ ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ.
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple
ನ್ಯಾಯಾಲಯದ ಬೇಸಿಗೆ ರಜೆಗಳ ನಂತರ ವಿಚಾರಣೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ! : Supreme Court
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಕೊಲಕಾತಾದ ‘ಸುಹ್ರಾವರ್ದಿ ರಸ್ತೆ’ಯ ಹೆಸರನ್ನು ‘ಗೋಪಾಲ್ ಮುಖರ್ಜಿ’ ಎಂದು ಬದಲಾಯಿಸಿದ ಸರಕಾರ : Gopal Mukherjee Road
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !