ಪುಣೆ – ಪುಣೆಯ ಸನಾತನ ಸಂಸ್ಥೆಯ ೫೮ ನೇ ವ್ಯಷ್ಟಿ ಸಂತ ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ (ವಯಸ್ಸು ೮೮ ವರ್ಷ) ಇವರು ೨೪ ಡಿಸೆಂಬರ್ ೨೦೨೩ ರಂದು ಬೆಳಗ್ಗೆ ೭ ಗಂಟೆಗೆ ದೇಹತ್ಯಾಗ ಮಾಡಿದರು. ವೃದ್ಧಾಪ್ಯದಿಂದಾಗಿ ಅವರು ಅನಾರೋಗ್ಯದಲ್ಲಿದ್ದರು. ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಡಾಯೆ ಅವರು ಫಾಲ್ಗುಣ ಶುಕ್ಲ ಪಕ್ಷ ನವಮಿಯಂದು (೧೭.೩.೨೦೧೬) ಅವರನ್ನು ‘ಸಂತ’ ಎಂದು ಘೋಷಿಸಿದ್ದರು. ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ ಅವರು ಆನಂದದಲ್ಲಿ, ಸ್ಥಿರವಾಗಿ ಮತ್ತು ಶಾಂತವಾಗಿದ್ದರು. ಅವರಿಗೆ ಸೇವೆಯನ್ನು ಮಾಡುವ ತೀವ್ರ ತಳಮಳ ಇತ್ತು. ಇಳಿ ವಯಸ್ಸಿನಲ್ಲೂ ತಮ್ಮನ್ನು ಬದಲಾಯಿಸುವ ತಳಮಳವು ತೀವ್ರವಾಗಿತ್ತು. ಅವರು ಪುಣೆಯ ಸನಾತನ ಸಂಸ್ಥೆಯ ಸಾಧಕಿ ಆಧುನಿಕ ವೈದ್ಯೆ ಜ್ಯೋತಿ ಕಾಳೆ ಅವರ ತಾಯಿಯಾಗಿದ್ದಾರೆ. ಪೂ. ಅಜ್ಜಿಯವರು ಸೊಸೆ, ಮಗಳು, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಡಿಸೆಂಬರ್ ೨೪ ರಂದು ಮಧ್ಯಾಹ್ನ ನವಿ ಪೇಠ್ನಲ್ಲಿರುವ ವೈಕುಂಠ ಸ್ಮಶಾನದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಸನಾತನ ಸಂಸ್ಥೆಯ ಸಂತರಾದ (ಸೌ.) ಮನೀಷಾ ಪಾಠಕ ಇವರು ಅಜ್ಜಿಯ ಪಾರ್ಥಿವ ಶರೀರದ ದರ್ಶನ ಪಡೆದು ಪುಷ್ಪ ಮಾಲೆ ಅರ್ಪಿಸಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಮಹಾರಾಷ್ಟ್ರ > ಸನಾತನದ ಸಂತರಾದ ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ ಇವರಿಂದ ದೇಹತ್ಯಾಗ
ಸನಾತನದ ಸಂತರಾದ ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ ಇವರಿಂದ ದೇಹತ್ಯಾಗ
ಸಂಬಂಧಿತ ಲೇಖನಗಳು
- Sanatan Sanstha : ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಪುಣೆಯಲ್ಲಿ ‘ಸನಾತನ ಗೌರವ ದಿಂಡಿ(ಮೆರವಣಿಗೆ) !
- ಪ್ರೀತಿಸ್ವರೂಪ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಮತ್ತು ಅವರ ಚೈತನ್ಯಮಯ ನಿವಾಸಸ್ಥಾನ !
- ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ಸಾಧಕರೇ, ಇತರ ಸಾಧಕರು ಮತ್ತು ಸಂತರ ಕುರಿತಾದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ತತ್ಪರತೆಯಿಂದ ಬರೆದು ಕಳುಹಿಸಿ !
- ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ ಇವರು ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ವಿಷಯದ ಸತ್ಸಂಗದ ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ