
ಸೀತಾಪುರ (ಉತ್ತರಪ್ರದೇಶ) – ಇಲ್ಲಿಯ ಉಪಜಿಲ್ಲಾಧಿಕಾರಿಯ ಆದೇಶದ ನಂತರ ಅನೇಕ ವರ್ಷಗಳಿಂದ ಅಕ್ರಮವಾಗಿ ಕಟ್ಟಲಾಗಿರುವ ಮದರಸಾ ನೆಲೆಸಮ ಮಾಡಲಾಯಿತು. ಭಾಜಪ ನಾಯಕ ಆಶೀಷ ಚೌಧರಿ ಇವರ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಉಪಜಿಲ್ಲಾಧಿಕಾರಿ ಶಿಖಾ ಶುಕ್ಲಾ ಇವರು, ಈ ಅಕ್ರಮ ಮದರಸಾ ಸರಕಾರಿ ಜಾಗದಲ್ಲಿ ಕಟ್ಟಲಾಗಿತ್ತು. (ಸರಕಾರಿ ಜಾಗದ ರಕ್ಷಣೆ ಮಾಡುವ ಜವಾಬ್ದಾರಿ ಸರಕಾರದಾಗಿರುತ್ತದೆ ಅದರ ಜಾಗದಲ್ಲಿ ಈ ರೀತಿ ಕಾಮಗಾರಿ ಯಾರು ಮಾಡುತ್ತಿದ್ದರೆ, ಇದರ ಮಾಹಿತಿ ಅವರಿಗೆ ಹೇಗೆ ಸಿಗುವುದಿಲ್ಲ ? ಸ್ವಂತ ಜಾಗದ ಬಗ್ಗೆ ಸರಕಾರಿ ಅಧಿಕಾರಿಗಳು ಹೀಗೆ ನಿದ್ರೆಸುತ್ತಾರೆಯೆ ? – ಸಂಪಾದಕರು)
೧. ನೆಲಸಮ ಮಾಡಲಾದ ಮದರಸಾ ಸುಮಾರು ೪೦ ವರ್ಷಗಳ ಹಿಂದೆ ಅಹಮದ್ ಮತ್ತು ಹಬೀಬ್ ಇವರು ಕಟ್ಟಿದ್ದರು. (೪೦ ವರ್ಷ ಸರಕಾರದಲ್ಲಿ ಯಾರು ಅಧಿಕಾರಿಗಳಿದ್ದರೂ, ಆ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
೨. ಈ ಮದರಸಾದ ನೋಂದಣಿ ಇರಲಿಲ್ಲ ಮತ್ತು ಅದು ಯಾವುದೇ ಮಾನ್ಯತೆ ಇಲ್ಲದೆಯೇ ನಡೆಯುತ್ತಿತ್ತು. (ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
೩. ೨೦೧೮ ರಲ್ಲಿ ನ್ಯಾಯಾಲಯವು ಮದರಸಾವನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು; ಆದರೆ ಆ ಸಮಯದಲ್ಲಿ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. (ನ್ಯಾಯಾಲಯದ ಆದೇಶದ ನಂತರ ೬ ವರ್ಷ ಕ್ರಮ ಕೈಗೊಳ್ಳದಿರುವ ಇಲಾಖೆಯ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ಇತರ ಅಧಿಕಾರಿಗಳಿಗೆ ಕಡಿವಾಣ ಬೀಳುತ್ತದೆ !- ಸಂಪಾದಕರು)
ಸಂಪಾದಕೀಯ ನಿಲುವುಇಂತಹ ದೂರು ಏಕೆ ನೀಡಬೇಕಾಗುತ್ತದೆ ? ಸರಕಾರಕ್ಕೆ ಇದು ತಿಳಿದಿಲ್ಲವೇ ? ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ನಿದ್ರಿಸುತ್ತಿತ್ತೇ ? |
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!