
ಬೆಂಗಳೂರು – ರಾಜ್ಯದಲ್ಲಿ ಈಗ ಭ್ರೂಣಪತ್ತೆ, ಭ್ರೂಣ ಹತ್ಯೆ ಇಂತಹ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿಯಾಗುವ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ರಾಜ್ಯ ಸರಕಾರವು ಬಾಲ್ಯ ವಿವಾಹ ತಡೆಯುವುದಕ್ಕಾಗಿ ಕಾನೂನು ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿಶ್ಚಯಿಸಿದೆ. ಆದರೂ ರಾಜ್ಯದಲ್ಲಿ ಒಂದು ವರ್ಷದಲ್ಲಿ ೨೮ ಸಾವಿರದ ೬೫೭ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದಿಂದ ಮಾಹಿತಿ ಬಹಿರಂಗವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ೯೨೧ ಬಾಲಕಿಯರು ಗರ್ಭಿಣಿ ಆಗಿದ್ದು ಸುರಪುರ ತಾಲೂಕಿನಲ್ಲಿ ೩೦೦ ಕ್ಕೂ ಹೆಚ್ಚಿನ ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಇಲಾಖೆಯವರ ಕಣ್ತಪ್ಪಿಸಿ ಬಾಲ್ಯ ವಿವಾಹ ನಡೆಯುತ್ತಿರುವುದು ಬಹಿರಂಗವಾಗಿದೆ.
ಸಂಪಾದಕೀಯ ನಿಲುವುಇಡೀ ದೇಶದಲ್ಲಿ ಬಾಲ್ಯವಿವಾಹದ ಮೇಲೆ ನಿಷೇಧ ಇರುವಾಗ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯುವವರೆಗೆ ಸರಕಾರ ಮತ್ತು ಪೊಲೀಸರು ನಿದ್ರಿಸುತ್ತಿದ್ದರೆ ? |
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಶ್ರೀರಾಮ ಮಂದಿರದ ಸಿಬ್ಬಂದಿಯ ಮನೆಯಲ್ಲಿ ಸಿಕ್ಕಿತು 10 ಲಕ್ಷ ರೂಪಾಯಿ : ಸಗಣಿಯ ರಾಶಿಯ ಕೆಳಗೆ ಬಚ್ಚಿಡಲಾಗಿದ್ದ ನಗದು
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
‘ಬಾಂಗ್ಲಾದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ!’ – ‘ಜಮಾತ್-ಎ-ಇಸ್ಲಾಮಿ’ : Jamaat-e-Islami
ಕೆನಡಾ: ಮೂವರು ಸಿಖ್ ವ್ಯಕ್ತಿಗಳಿಗೆ ಜೈಲು ಶಿಕ್ಷೆ