|

ಮುಂಬಯಿ – ಕಾಂ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಪ್ರಗತಿಯನ್ನು ಹೇಳುವ ಬದಲು ತನಿಖೆಯಲ್ಲಿ ಏನು ಪ್ರಗತಿಯಾಗಿದೆ ? ಅದನ್ನು ತೋರಿಸಿ, ಎಂದು ಮುಂಬಯಿ ಹೈಕೋರ್ಟ್ ಭಯೋತ್ಪಾದನಾ ನಿಗ್ರಹ ದಳದ ಮೇಲೆ ಕಿಡಿಕಾರಿತು. ತಂಡದ ನಿಧಾನಗತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಂಡ ಸಲ್ಲಿಸಿದ ವರದಿಯನ್ನು ಸ್ವೀಕರಿಸಲು ಮುಂಬಯಿ ಹೈಕೋರ್ಟ್ ನಿರಾಕರಿಸಿದೆ. ಈ ಪ್ರಕರಣದಲ್ಲಿ ಹೊಸದಾಗಿ ತನಿಖಾ ವರದಿ ಸಲ್ಲಿಸಲು ಭಯೋತ್ಪಾದನಾ ನಿಗ್ರಹ ದಳಕ್ಕೆ 3 ತಿಂಗಳ ಕಾಲಾವಕಾಶ ನೀಡಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು. ನ್ಯಾಯಮೂರ್ತಿ ಅಜಯ ಗಡ್ಕರಿ ಮತ್ತು ನ್ಯಾಯಮೂರ್ತಿ ಶಾಮ ಚಂಡಕ ಅವರ ವಿಭಾಗೀಯಪೀಠದ ಮುಂದೆ ಡಿಸೆಂಬರ್ 21 ರಂದು ವಿಚಾರಣೆ ನಡೆಯಿತು.
‘ಕೊಲ್ಹಾಪುರ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಪ್ರಕರಣದಲ್ಲಿ ಇದುವರೆಗೆ 17 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ ಎಂದು ಸರಕಾರಿ ವಕೀಲ ಮಾನಕುಂವರ್ ದೇಶಮುಖ ಅವರು ಹೈಕೋರ್ಟ್ಗೆ ತಿಳಿಸಿದರು. ಈ ಕುರಿತು ನ್ಯಾಯಾಲಯವು ‘ವಿಚಾರಣೆಗಿಂತ ತನಿಖೆಯ ಪ್ರಗತಿಯನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ’ ಎಂದು ಅಭಿಪ್ರಾಯಪಟ್ಟಿದೆ.
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy
ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ! – ಸರ್ವೋಚ್ಚ ನ್ಯಾಯಾಲಯ Supreme Court Order
‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium
ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ
Mumbai Airport Namaz : ಮುಂಬಯಿ ವಿಮಾನ ನಿಲ್ದಾಣದ ಬಳಿ ನಮಾಜ್ ಪಠಣಕ್ಕಾಗಿ ಜಾಗ ನೀಡಲು ಸಾಧ್ಯವಿಲ್ಲ! – ರಾಜ್ಯ ಸರಕಾರ