ಭೀಕರ ಆಪತ್ಕಾಲದಲ್ಲಿ ಆರೋಗ್ಯ ರಕ್ಷಣೆಗಾಗಿ ಔಷಧಿ ಸಸ್ಯಗಳನ್ನು ಬೆಳೆಸಿರಿ
ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ನಮಗೆ ಆಲೋಪಥಿ ಔಷಧಿಗಳಲ್ಲ, ಆಯುರ್ವೇದೀಯ ಔಷಧಿ ಸಸ್ಯಗಳು ಆಧಾರವಾಗಲಿವೆ. ‘ಬಾಯಾರಿದಾಗ ಬಾವಿ ತೋಡಿದ ಹಾಗೆ ! ಎಂಬ ಗಾದೆ ಮಾತಿದೆ. ಹೀಗಾಗದಿರಲು ಮುಂಬರುವ ಭೀಕರ ಆಪತ್ಕಾಲದಲ್ಲಿ ಕಡಿಮೆ ಬೆಲೆಯ ಮತ್ತು ಬಹುಗುಣಿಯಾಗಿರುವ ವಿವಿಧ ಆಯುರ್ವೇದೀಯ ಸಸ್ಯಗಳು ಸಹಜವಾಗಿ ದೊರೆಯಲು ಈಗಿನಿಂದಲೇ ಅವುಗಳನ್ನು ಮನೆಯ ಸುತ್ತಲೂ, ಮನೆಯ ಪರಿಸರದಲ್ಲಿ ಮತ್ತು ಗದ್ದೆಗಳಲ್ಲಿ ಬೆಳೆಸುವುದು ಆವಶ್ಯಕವಾಗಿದೆ.