ಆಯುರ್ವೇದದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕೊರೊನಾ ಸೋಂಕು ಇಲ್ಲ ! – ಗ್ರಾಮಸ್ಥರ ಹೇಳಿಕೆ
ಆಯುರ್ವೇದದಿಂದಾಗುವ ಲಾಭವನ್ನು ನೋಡುತ್ತಾ, ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ದೇಶಾದ್ಯಂತದ ನಾಗರಿಕರಿಗೆ ಆಯುರ್ವೇದದ ಔಷಧಿಗಳನ್ನು ಒದಗಿಸುವ ಪ್ರಯತ್ನಿಸಬೇಕು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಲಕ್ಷ್ಮಣಪುರಿ ನಗರದಿಂದ ೨೦ ಕಿ.ಮೀ ದೂರದಲ್ಲಿರುವ ‘ಮಾತಿ’ಯಲ್ಲಿ ಇಂದಿನ ತನಕ ಕೊರೊನಾದ ಒಬ್ಬ ರೋಗಿಯೂ ಪತ್ತೆಯಾಗಿಲ್ಲ. ಈ ಗ್ರಾಮದಲ್ಲಿ ೧೨೦ ಕುಟುಂಬಗಳು ವಾಸಿಸುತ್ತಿದ್ದು, ಒಟ್ಟು ೧೨೦೦ ಜನರು ವಾಸಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ನಾವು ಅಲೋಪತಿಯ ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ ಇಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಆಯುರ್ವೇದ ವೈದ್ಯರಿಂದ ಔಷಧಿಯನ್ನು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಕೊರೊನಾ ನಮ್ಮ ಹಳ್ಳಿಗೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
೧. ಈ ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ. ಇಲ್ಲಿಂದ ೧೦ ಕಿ.ಮೀ ದೂರದಲ್ಲಿ ಆರೋಗ್ಯ ಕೇಂದ್ರವಿದ್ದರೂ ವೈದ್ಯರು ಅಲ್ಲಿ ಲಭ್ಯರಿರುವುದಿಲ್ಲ. ವೈದ್ಯಕೀಯ ತಂಡವೂ ಯಾವತ್ತೂ ಹಳ್ಳಿಗೆ ಬರುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು. (ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಭಾರತ ಮಾಡಿದ ಪ್ರಗತಿ ! – ಸಂಪಾದಕ)
೨. ‘ಆರೋಗ್ಯ ಭಾರತೀ’ಯ ಕಾರ್ಯದರ್ಶಿ (‘ಆರೋಗ್ಯ ಭಾರತೀ’ ಈ ಉಪಕ್ರಮವನ್ನು ಆರ್.ಎಸ್.ಎಸ್ ನಡೆಸುತ್ತಿದೆ) ಮತ್ತು ವೈದ್ಯ ಅಭಯ ನಾರಾಯಣ ತಿವಾರಿ ಇವರು, ‘ನಾವು ಕಳೆದ ೪ ವರ್ಷಗಳಿಂದ ಈ ಗ್ರಾಮವನ್ನು ದತ್ತು ಪಡೆದಿದ್ದೇವೆ. ನಮ್ಮ ಸಂಸ್ಥೆಯಿಂದ ಆಯುರ್ವೇದ ಔಷಧಿಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದರು.
೩. ತಿವಾರಿಯವರು ತಮ್ಮ ಮಾತನ್ನು ಮುಂದುವರಡಸುತ್ತಾ, ಕೊರೊನಾದ ೩ ನೇ ಅಲೆ ಬರುವ ಸಾಧ್ಯತೆಯಿಂದ, ಆರೋಗ್ಯ ಭಾರತೀಯದಿಂದ ಇಲ್ಲಿನ ಮಕ್ಕಳಿಗೆ ಪ್ರತಿ ತಿಂಗಳಿನ ಪುಷ್ಯ ನಕ್ಷತ್ರದ ಸಮಯದಲ್ಲಿ ‘ಸ್ವರ್ಣ ಪ್ರಾಶನ’ದ ಹನಿಗಳನ್ನು ನೀಡಲಾಗುತ್ತದೆ ಇದು ಅವರಲ್ಲಿ ರೋಗನಿರೋಧಕ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕೊರೊನಾದಿಂದಲೂ ರಕ್ಷಿಸುತ್ತದೆ ಎಂದು ಹೇಳಿದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !