ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಂದ ಕೆಲಸ ಸ್ಥಗಿತ ಆಂದೋಲನ !
ಬಂಗಾಲವು ಮತ್ತೊಂದು ಬಾಂಗ್ಲಾದೇಶವಾಗುವ ಹಾದಿಯಲ್ಲಿ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ತೃಣಮೂಲ ಕಾಂಗ್ರೆಸ್ಅನ್ನು ಆರಿಸಿದಕ್ಕಾಗಿ ಹಿಂದೂಗಳಿಗೆ ಸಿಕ್ಕಿದ ಶಿಕ್ಷೆಯೇ ಎನ್ನಬಹುದು!

ಹೂಗ್ಲಿ (ಬಂಗಾಲ) – ಇಲ್ಲಿಯ ಪಾಂಡುವಾ ಗ್ರಾಮೀಣ ಆಸ್ಪತ್ರೆಯಲ್ಲಿ ಇಸ್ಮಾಯಿಲ್ ಶೇಖ್ ಎಂಬ ರೋಗಿಯು ಮೃತಪಟ್ಟಿದ್ದರಿಂದ ಆತನ ಸಂಬಂಧಿಕರು ಚಿಕಿತ್ಸೆ ನೀಡುವ ವೈದ್ಯ ಶಿವಶಂಕರ ರಾಯ ಇವರನ್ನು ಥಳಿಸಿರುವ ಘಟನೆ ನಡೆದಿದೆ. ಈ ಘಟನೆಯ ನಂತರ ವೈದ್ಯರು ಮತ್ತು ಆರೋಗ್ಯ ಕಾರ್ಮಿಕರು ತಮಗೆ ರಕ್ಷಣೆ ನೀಡುವಂತೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮುಷ್ಕರವನ್ನು ಪ್ರಾರಂಭಿಸಿದ್ದರಿಂದ ಇತರ ರೋಗಿಗಳು ಪರದಾಡುತ್ತಿದ್ದಾರೆ. ಕೇವಲ ಅಗತ್ಯ ಸೇವೆಗಳು ನಡೆಯುತ್ತಿವೆ. ಆಸ್ಪತ್ರೆಯ ಆವರಣದಲ್ಲಿ ಶಾಶ್ವತವಾದ ಪೊಲೀಸ್ ಚೌಕಿ ಸ್ಥಾಪಿಸಬೇಕು ಎಂದು ವೈದ್ಯರು ಒತ್ತಾಯಿಸಿದ್ದಾರೆ. ಘಟನೆ ನಡೆದ ೨೪ ಗಂಟೆಗಳ ನಂತರವೂ ಪೊಲೀಸರು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.
West Bengal: Doctor assaulted after one Sheikh Ismail dies in Pandua, hospital staff on strike in protesthttps://t.co/c1icPZ66i4
— OpIndia.com (@OpIndia_com) June 9, 2021
ಈ ಘಟನೆಗೆ ‘ತೃಣಮೂಲ ಕಾಂಗ್ರೆಸ್ ಗೂಂಡಾಗಳು ಕಾರಣ’ ಎಂದು ಬಿಜೆಪಿಯು ಆರೋಪಿಸಿದರೆ, ತೃಣಮೂಲ ಕಾಂಗ್ರೆಸ್ ಮುಖಂಡ ಸೌಗತ್ ರಾಯ್, ‘ನಾವು ವೈದ್ಯರನ್ನು ರಕ್ಷಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. (ವೈದ್ಯರ ರಕ್ಷಣೆಯನ್ನು ಮಾಡಲಾಗುತ್ತಿದ್ದಲ್ಲಿ ಅವರ ಮೇಲೆ ಯಾಕೆ ಹಲ್ಲೆಗಳಾಗುತ್ತಿವೆ ? ಇಂತಹ ಸುಳ್ಳುಗಾರರು ವ್ಯವಹಾರಗಳನ್ನು ಹೇಗೆ ಮಾಡುತ್ತಿರಬಹುದು, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕ)
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
‘ಭಾರತದಲ್ಲಿ ವಾಸಿಸಲು ನನಗೆ ನಾಚಿಕೆಯಾಗುತ್ತದೆ !’
ಶವಪರೀಕ್ಷೆಯ ಸಮಯದಲ್ಲಿ ಮಹಿಳೆಯರ ಮೃತದೇಹಗಳ ಬೆತ್ತಲೆ ಫೋಟೊಗಳನ್ನು ತೆಗೆಯುತ್ತಿದ್ದ ಸಿಬ್ಬಂದಿ ಮುನೀರ್ ಅಹಮದ್ ಬಂಧನ!
ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕ ತಪನ ಚಟರ್ಜಿಯವರ ಬಂಧನ!
ತೃಣಮೂಲ ಕಾಂಗ್ರೆಸ್ಸಿನ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೆ ಜನರ ಕಲ್ಲು ತೂರಾಟ
ತೃಣಮೂಲ ಕಾಂಗ್ರೆಸ್ ಕೇವಲ ಮುಸ್ಲಿಮರ ಪಕ್ಷವಾಗಿದೆ ! – ಪ್ರದೇಶಾಧ್ಯಕ್ಷರಾದ ಅಭಿಜೀತ ಮಜುಮದಾರ