‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಕುರಿತು ‘ವಿಶೇಷ ಸಂವಾದ’ !
ಹಿಂದೂ ಜನಜಾಗೃತಿ ಸಮಿತಿಯ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಚಾರ ಸಂಕಿರಣದಲ್ಲಿ
ಹಿಂದೂ ಜನಜಾಗೃತಿ ಸಮಿತಿಯ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಚಾರ ಸಂಕಿರಣದಲ್ಲಿ
ಹಿಂದೂಪರ ಸಂಘಟನೆಯಾದ ಹಿಂದೂ ಐಕ್ಯ ವೇದಿಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬು ಇವರು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಕರೆ ನೀಡಿದ್ದಕ್ಕಾಗಿ ಅವರನ್ನು ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರಕಾರದ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಸರಕಾರದ ‘ಅಗ್ರಿಕಲ್ಚರಲ್ ಅಂಡ್ ಪ್ರೊಸೆಸ್ಡ್ ಫುಡ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪ್ಮೆಂಟ್’ಯು (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ)ಅಂದರೆ ‘ಆಪೆಡಾ’ವು ತನ್ನ ‘ರೆಡ ಮೀಟ್ ಮ್ಯಾನುಯಲ್’ ನಿಂದ ‘ಹಲಾಲ್’ ಪದವನ್ನೇ ತೆಗೆದುಹಾಕಿದೆ.
ಜಾತ್ಯತೀತ ಭಾರತದಲ್ಲಿ ಧರ್ಮಾಧಾರದಲ್ಲಿ ಸಮನಾಂತರ ಅರ್ಥವ್ಯವಸ್ಥೆಯು ದೇಶದ ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿದ್ದು ಸರಕಾರವು ‘ಹಲಾಲ್ ಪ್ರಮಾಣಿತ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ನಾಗರಿಕರು ‘ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಬಹಿಷ್ಕರಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.
ಈ ಪಿತೂರಿಯ ಬಗ್ಗೆ ಹಿಂದೂ ಧರ್ಮಪ್ರೇಮಿಗಳಿಗೆ ತಿಳಿದ ನಂತರ, ಅವರು ಟ್ವಿಟರ್ನಲ್ಲಿ #BoycottHalalProducts ಹೆಸರಿನಲ್ಲಿ ‘ಹ್ಯಾಶ್ಟ್ಯಾಗ್ ಪ್ರಾರಂಭಿಸಿದರು. ಪರಿಣಾಮವಾಗಿ ‘ಟ್ರೆಂಡ್ ರಾಷ್ಟ್ರೀಯ ಟ್ರೆಂಡ್ದಲ್ಲಿ ಮೊದಲು ನಾಲ್ಕನೇ ಮತ್ತು ನಂತರ ಮೂರನೇ ನಂತರ ಎರಡನೇಯ ಸ್ಥಾನದಲ್ಲಿತ್ತು. ಈ ‘ಟ್ರೆಂಡ್ನಲ್ಲಿ ೧ ಲಕ್ಷ ಜನರು ಟ್ವೀಟ್ಸ್ ಮಾಡಿದ್ದಾರೆ.
ಜಗತ್ತಿನ ಕಟ್ಟರ್ ಸಮುದಾಯವು ಪ್ರತಿಯೊಂದು ಆಹಾರ ಪದಾರ್ಥ ಅಥವಾ ವಸ್ತುಗಳು ಇಸ್ಲಾಂ ಪ್ರಕಾರ ಮಾನ್ಯತೆ ಪಡೆದ ಅಂದರೆ ‘ಹಲಾಲ್’ ಇರುವುದನ್ನು ಒತ್ತಾಯಿಸುತ್ತಿದೆ. ಇದಕ್ಕಾಗಿ ಆಹಾರ ಪದಾರ್ಥ ಅಥವಾ ವಸ್ತುಗಳ ಮಾರಾಟಕ್ಕೆ ‘ಹಲಾಲ್ ಪ್ರಮಾಣಪತ್ರ’ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಹಿಂದೆ ಇದು ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿತ್ತು;
ಮೂಲತಃ ಮಾಂಸದ ವಿಷಯದಲ್ಲಿ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹನಿರ್ಮಾಣಸಂಸ್ಥೆಗಳು, ಮಾಲ್ ಹೀಗೆ ಅನೇಕ ಅಂಶಗಳಲ್ಲಿ ಮಾಡಲಾರಂಭಿಸಿದ್ದಾರೆ. ಅದಕ್ಕಾಗಿ ಖಾಸಗಿ ಇಸ್ಲಾಮಿ ಸಂಸ್ಥೆಗಳಿಂದ ‘ಹಲಾಲ್ ಪ್ರಾಮಾಣಪತ್ರ’ ತೆಗೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.