ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !
ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.
ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.
ಶಿಷ್ಯನ ಜನ್ಮ-ಜನ್ಮದ ಅಜ್ಞಾನ, ಅಂಧಃಕಾರವನ್ನು ದೂರ ಮಾಡಿ ಜ್ಞಾನರೂಪಿ ಬೆಳಕನ್ನು ನೀಡಿ ಶಿಷ್ಯನನ್ನು ಮೋಕ್ಷದ ದಾರಿಯಲ್ಲಿ ಮುಂದೆ ಕರೆದುಕೊಂಡು ಹೋಗುವವರೇ ಗುರುಗಳು. ಅದಕ್ಕಾಗಿ ನಮ್ಮನ್ನು ನಾವು ಗುರುಗಳಿಗೆ ಸಮರ್ಪಣೆ ಮಾಡಿಕೊಳ್ಳಬೇಕು.
ಅಧ್ಯಾತ್ಮದಲ್ಲಿ ನಮ್ಮ ಪ್ರಗತಿಯಾದ ಹಾಗೆ, ನಮ್ಮಲ್ಲಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳ ಪೈಕಿ ಹೆಚ್ಚೆಚ್ಚು ಉಚ್ಚ ತತ್ತ್ವಗಳ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಅದರಂತೆ ಶ್ರೀಚಿತ್ಶಕ್ತಿ (ಸೌ.) ಅಂಜಲಿಯವರಲ್ಲಿ ವಾಯುತತ್ತ್ವವು ಹೆಚ್ಚಾಗಿದೆ.
ಜಗತ್ತಿನಲ್ಲಿನ ನೈಸರ್ಗಿಕ ಸಿಹಿ ಪದಾರ್ಥವೆಂದರೆ ‘ಜೇನುತುಪ್ಪ’. ಅದರಲ್ಲಿನ ಸಿಹಿಯನ್ನು ಈಶ್ವರನೇ ನಿರ್ಮಿಸಿದ್ದಾನೆ. ಅನೇಕ ಯುಗಗಳಿಂದ ಜೇನುನೊಣಗಳು ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಆ ಜೇನುನೊಣಗಳಿಗೆ ಯಾರೂ ಸಂಬಳ ಕೊಡುವುದಿಲ್ಲ.
ಬಾಲ್ಯದಿಂದ, ಅಷ್ಟೇ ಅಲ್ಲ ಗರ್ಭದಲ್ಲಿರುವಾಗಲೇ ಜೀವದ ಮೇಲೆ ಸಾತ್ತ್ವಿಕತೆಯ ಸಂಸ್ಕಾರವನ್ನು ಮಾಡಿದರೆ ಆದರ್ಶ ಮತ್ತು ಧರ್ಮಾಚರಣಿ ಯುವಕರು ನಿರ್ಮಾಣವಾಗುವರು ! ಸರ್ವ ಶ್ರೇಷ್ಠ ಹಿಂದೂ ಧರ್ಮದ ಶಾಸ್ತ್ರ ಮತ್ತು ಉಪಾಸನೆಯನ್ನು ತಿಳಿದು ಅದರಂತೆ ಕೃತಿಯನ್ನು ಮಾಡಿದರೆ ಸಮಾಜದಲ್ಲಿ ಪರಿವರ್ತನೆಯಾಗಲು ಸಮಯ ಬೇಕಾಗುವುದಿಲ್ಲ.
ತಾಯಿ-ತಂದೆ ಮಕ್ಕಳಿಗೆ ಜನ್ಮದಿಂದ ಹಿಡಿದು ಸ್ವಾವಲಂಬಿ ಆಗುವವರೆಗೆ ಎಲ್ಲ ರೀತಿಯಿಂದ ಕಾಳಜಿಯನ್ನು ವಹಿಸಿದರು ಅವರ ಬಗ್ಗೆ ಕೃತಜ್ಞತೆ ಅನಿಸದೇ ಇಂದಿನ ಆಂಗ್ಲಮಾನಸಿಕತೆಯ ಯುವಕರು ತಾಯಿ-ತಂದೆಯರನ್ನು ಅವರ ವೃದ್ಧಾಪ್ಯದಲ್ಲಿ ‘ಬಳಸಿರಿ ಮತ್ತು ಎಸೆಯಿರಿ’ ಈ ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಗನುಸಾರ ವೃದ್ಧಾಶ್ರಮದಲ್ಲಿ ಕಳುಹಿಸುತ್ತಿದ್ದಾರೆ.
ಸಾಧಕರಿಗಾಗಿ ಕಾಲದೊಂದಿಗೂ ಹೋರಾಡುವ ಸಾಕ್ಷಾತ್ ಶ್ರೀಮನ್ನಾರಾಯಣಸ್ವರೂಪ ಗುರುದೇವರಿರುವಾಗ ನಮಗೇಕೆ ಕಾಲದ ಭಯ ? ಹೇ ಭಗವಂತ, ನೀವು ನಮ್ಮ ಜೀವನದಲ್ಲಿ ಬಂದಿದ್ದೀರಿ, ಇದಕ್ಕಿಂತ ದೊಡ್ಡಭಾಗ್ಯ ಇನ್ನೇನಿಲ್ಲ ! ನಿಮ್ಮ ಕೋಮಲ ಚರಣಗಳಲ್ಲಿ ಅನಂತಾನಂತ ಕೃತಜ್ಞತೆಗಳು !
ರಥದಲ್ಲಿನ ಶ್ರೀಗುರುಗಳ ನಯನಮನೋಹರ ರೂಪವನ್ನು ನೋಡಿ ಸಾಧಕರು ಸ್ತಬ್ಧರಾದರು ! ಸಾಧಕರ ವಿಲಕ್ಷಣ ಭಾವಜಾಗೃತಿಯಾಯಿತು. ಗುರುಗಳನ್ನು ಶ್ರೀವಿಷ್ಣುವಿನ ರೂಪದಲ್ಲಿ ನೋಡಿದ ಸಾಧಕರ ಮುಖದ ಮೇಲಿನ ಕೃತಜ್ಞತಾಭಾವವು ಶಬ್ದಾತೀತವಾಗಿತ್ತು !
ಯಾವುದು ಸಾಕ್ಷಾತ್ ಈಶ್ವರನಿಗೆ ಸಂಬಂಧಿಸಿರುತ್ತದೆಯೋ, ಅದು ಮಾಯೆಗೆ ಸಂಬಂಧಿಸಿರುವುದಿಲ್ಲ, ಅದು ಶಾಶ್ವತವಾಗಿರುತ್ತದೆ. ಅದು ಚಿರಂತನವಾಗಿ ಉಳಿಯುವ ಮತ್ತು ಆತ್ಮಾನಂದವನ್ನು ನೀಡುವುದಾಗಿರುತ್ತದೆ. ಆದ್ದರಿಂದ ಸಾತ್ತ್ವಿಕ ಘಟಕಗಳಲ್ಲಿ ಜೀವಂತಿಕೆಯು ಕಾಣಿಸುತ್ತದೆ.
ಶ್ರೀಮನ್ನಾರಾಯಣನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ (ಗುರುದೇವರ) ರಥವು ಆಶ್ರಮದಿಂದ ಹೊರಗೆ ಬಂದ ಕ್ಷಣವೇ, ಪೃಥ್ವಿಯ ಮೇಲಿನ ಎಲ್ಲ ಜಾಗೃತ ದೇವಸ್ಥಾಗಳ, ತೀರ್ಥಕ್ಷೇತ್ರಗಳ, ೫೧ ಶಕ್ತಿಪೀಠಗಳ, ೧೨ ಜ್ಯೋತಿರ್ಲಿಂಗಗಳಲ್ಲಿನ ಚೈತನ್ಯಕ್ಕೆ ನವಜಾಗೃತಿ ದೊರಕಿತು.