ಸದ್ಯದ ಸ್ಥಿತಿಯಲ್ಲಿ ‘ಕೊರೋನಾ ವಿಷಾಣು’ವಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ‘ಪಾಲಾಶವಿಧಿ’ !
‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದಾಗಿ ಯಾರಾದರೂ ಮೃತಪಟ್ಟರೆ ಅವನ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ. ಆದುದರಿಂದ ಮೃತ ದೇಹದ ಎಲುಬುಗಳೂ (ಅಸ್ತಿ) ಸಿಗುವುದಿಲ್ಲ. ಇಂತಹ ಪ್ರಸಂಗದಲ್ಲಿ ‘ಅಂತ್ಯವಿಧಿಯನ್ನು ಹೇಗೆ ಮಾಡಬೇಕು ?’, ಎಂಬ ಪ್ರಶ್ನೆಯು ಸಮಾಜದಲ್ಲಿ ನಿರ್ಮಾಣವಾಗಿದೆ.