ಲಾರೆನ್ಸ ಬಿಷ್ಣೋಯಿ ಗ್ಯಾಂಗ್ ನಿಂದ ದೆಹಲಿಯ ಕೊಲೆಗಾರರಿಗೆ ಸುಪಾರಿ(ಹಣ) ನೀಡಿರುವುದು ಬಹಿರಂಗ

ನವ ದೆಹಲಿ – ಏಕಪಾತ್ರಾಭಿನಯ ಹಾಸ್ಯ ಕಾರ್ಯಕ್ರಮ ಮಾಡುವ ಹಿಂದೂ ದ್ವೇಷಿ ಕಲಾವಿದ ಮುನವ್ವರ ಫಾರೂಕಿಯನ್ನು ಹತ್ಯೆ ಮಾಡುವ ಪ್ರಯತ್ನವನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮಾಡುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಫಾರೂಕಿಯನ್ನು ಹತ್ಯೆ ಮಾಡುವ ಸಂಚು ಇಂಗ್ಲೆಂಡ್ ನಲ್ಲಿ ರಚಿಸಲಾಗಿದೆ. ಲಾರೆನ್ಸ ಬಿಷ್ಣೋಯಿ ಗುಜರಾತ್ನ ಸಾಬರಮತಿಯ ಕಾರಾಗೃಹದಲ್ಲಿದ್ದರೂ, ಅವನ ಕೆಲವು ಸಹಚರರು ವಿದೇಶದಲ್ಲಿದ್ದು ಗ್ಯಾಂಗ ನಡೆಸುತ್ತಿದ್ದಾರೆ. ಇದರಲ್ಲಿ ಗೋಲ್ಡಿ ಬ್ರಾರ ಮತ್ತು ರೋಹಿತ ಗೋದಾರಾ ಇವರು ಸೇರಿದ್ದಾರೆ. ಅವರೇ ಫಾರೂಕಿಯನ್ನು ಹತ್ಯೆ ಮಾಡಲು ಸಂಚನ್ನು ರಚಿಸಿರುವುದು ಬಹಿರಂಗವಾಗಿದೆ. ರೋಹಿತ ಗೋದಾರಾ ಇವನು ದೆಹಲಿಯ 2 ಕೊಲೆಗಾರರಿಗೆ ಫಾರೂಕಿಯನ್ನು ಕೊಲ್ಲಲು ಸುಪಾರಿ ನೀಡಿದ್ದನು. ಸೆಪ್ಟೆಂಬರ್ 13 ರಂದು, ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಾದಿರ ಶಾ ಓರ್ವ ಅಪಘಾನಿ ವ್ಯಕ್ತಿಯ ಹತ್ಯೆಯಾಗಿರುವ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿರುವಾಗ ಹರಿಯಾಣದಿಂದ ಕೊಲೆಗಾರನನ್ನು ಬಂಧಿಸಿದರು. ಗೋದಾರ ಇವರು ಫಾರೂಕಿಯನ್ನು ಹತ್ಯೆ ಮಾಡಲು ಯಾರಿಗೆ ಸುಪಾರಿ ನೀಡಿದ್ದನೋ, ಅವರಲ್ಲಿ ಇವನೂ ಒಬ್ಬನಾಗಿದ್ದನು. ಅವನು ತನಿಖೆಯಲ್ಲಿ ಫಾರೂಕಿಯ ಹತ್ಯೆಯ ಸುಪಾರಿ ಪಡೆದಿರುವುದಾಗಿ ಒಪ್ಪಿಕೊಂಡನು. ನಾದಿರ್ ಷಾನ ಹತ್ಯೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮಾಡಿತ್ತು.
ಸಂಪಾದಕೀಯ ನಿಲುವುಮುನವ್ವರ್ ಫಾರೂಕಿ ತನ್ನ ಕಾರ್ಯಕ್ರಮಗಳಲ್ಲಿ ಅನೇಕ ಬಾರಿ ಹಿಂದೂ ದೇವತೆಗಳ ವಿಡಂಬನೆ ಮಾಡಿದ್ದಾನೆ ! |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ