ಬಹರಾಯಿಚ್ (ಉತ್ತರಪ್ರದೇಶ) ಗಲಭೆಯಲ್ಲಿ ಹಿಂದೂ ಯುವಕನ ಹತ್ಯೆ ಮಾಡಿದ್ದ ೫ ಮುಸಲ್ಮಾನರ ಬಂಧನ

ಚಕಮಕಿಯಲ್ಲಿ ಇಬ್ಬರಿಗೆ ಗಾಯ

ಬಹರಾಯಿಜ್ (ಉತ್ತರಪ್ರದೇಶ) – ಅಕ್ಟೋಬರ್ ೧೩ ರಂದು ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಮೇಲೆ ನಡೆದ ದಾಳಿಯಲ್ಲಿ ರಾಮ ಗೋಪಾಲ ಮಿಶ್ರ ಈ ಹಿಂದೂ ಯುವಕನ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಆರೋಪಿ ರಿಂಕು ಅಲಿಯಾಸ್ ಸರಫರಾಜ ಖಾನ್ ಮತ್ತು ತಾಲಿಬ್ ಗೆ ಚಕಮಕಿ ಬಳಿಕ ಬಂಧಿಸಿದ್ದಾರೆ. ನೇಪಾಳಕ್ಕೆ ಪಲಾಯನ ಮಾಡುತ್ತಿರುವಾಗ ನೇಪಾಳ ಗಡಿಯಲ್ಲಿ ಈ ಘಟನೆ ನಡೆದಿದೆ. ಇದರಲ್ಲಿ ಇಬ್ಬರ ಕಾಲಿಗೆ ಗುಂಡು ತಾಗಿರುವುದರಿಂದ ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೊಂದಿಗೆ ಇತರ 3 ಜನರನ್ನೂ ಬಂಧಿಸಲಾಗಿದೆ. ಇದರಲ್ಲಿ ಯಾವ ಮನೆಯಲ್ಲಿ ರಾಮಗೋಪಾಲ ಇವರ ಹತ್ಯೆ ನಡೆದಿತ್ತು ಆ ಮನೆಯ ಮಾಲೀಕ ಅಬ್ದುಲ್ ಹಮೀದ್ ಇವನ ಸಮಾವೇಶ ಕೂಡ ಇದೆ.