ಚಿತಗಾಂವ (ಬಾಂಗ್ಲಾದೇಶ) ನಲ್ಲಿಯ ಹಿಂದೂಗಳ ದೇವಾಲಯದಲ್ಲಿ ಗೋಮಾಂಸವನ್ನು ಎಸೆದು ವಿಡಂಬನೆ !

ಮುಸಲ್ಮಾನ ಬಹುಸಂಖ್ಯಾತ ದೇಶಗಳಲ್ಲಿನ ಹಿಂದೂಗಳ ಹಾಗೂ ಅವರ ದೇವಸ್ಥಾನಗಳ ದುಃಸ್ಥಿತಿಯನ್ನು ಅರಿತುಕೊಳ್ಳಿ !

ಇದರ ಬಗ್ಗೆ ಭಾರತದಲ್ಲಿನ ಕಮ್ಯುನಿಸ್ಟರು, ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿಗಳು ಎಂದಿಗೂ ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿ ತೆಗೆದುಕೊಳ್ಳಿ !

ಚಿತಗಾಂವ (ಬಾಂಗ್ಲಾದೇಶ) – ಚಿತಗಾಂವ ಜಿಲ್ಲೆಯ ಸಟಕನಿಯಾದ ದಕ್ಷಿಣ ಧರ್ಮಾಪುರಿಯ ಮಘದೇಶ್ವರೀ ದೇವಸ್ಥಾನದಲ್ಲಿ ಮತಾಂಧರು ಆಗಸ್ಟ್ ೧ ರಂದು ಗೋಮಾಂಸವನ್ನು ಎಸೆದು ವಿಡಂಬನೆಯನ್ನು ಮಾಡಿದರು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರು. ಅದರೊಂದಿಗೆ ಈ ಗೋಮಾಂಸದಿಂದ ಹೊರಗೆ ಬಂದ ರಕ್ತವನ್ನು ರಂಗಮತಿಯಲ್ಲಿನ ಹಿಂದೂಗಳ ಅಂಗಡಿಗಳಲ್ಲಿ ಸಿಂಪಡಿಸಿದರು. ಬಾಂಗ್ಲಾದೇಶದ ‘ವರ್ಲ್ಡ್ ಹಿಂದೂ ಫೆಡರೇಶನ್’ನ ಶಾಖೆಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಈ ಪ್ರಕರಣದ ಅಪರಾಧಿಗಳನ್ನು ಪತ್ತೆಹಚ್ಚಿ ಅವರನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ ತಕ್ಷಣ ಅವರಿಗೆ ಶಿಕ್ಷೆಯನ್ನು ವಿಧಿಸಬೇಕು, ಎಂದು ಒತ್ತಾಯಿಸಿದೆ.