೧೨ ವರ್ಷದ ಬಾಲಕಿಯನ್ನು ಅಪಹರಿಸಿದ್ದ ೭ ಮಂದಿಯ ಬಂಧನ
ಇಲ್ಲಿಯ ಇಬಾದತ್ನಗರದಲ್ಲಿ ಸಪ್ಟೆಂಬರ್ ೧೧ ರಂದು ಅಪಹರಿಸಲಾಗಿದ್ದ ೧೨ ವರ್ಷದ ಹುಡುಗಿಯನ್ನು ೪ ದಿನಗಳ ನಂತರ ಹುಡುಕುವಲ್ಲಿ ಪೊಲೀಸರಿಗೆ ಯಶಸ್ಸು ಸಿಕ್ಕಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟಿ ಖಾನ್ ಸಹಿತ ೭ ಮಂದಿಯನ್ನು ಬಂಧಿಸಲಾಗಿದೆ.
ಇಲ್ಲಿಯ ಇಬಾದತ್ನಗರದಲ್ಲಿ ಸಪ್ಟೆಂಬರ್ ೧೧ ರಂದು ಅಪಹರಿಸಲಾಗಿದ್ದ ೧೨ ವರ್ಷದ ಹುಡುಗಿಯನ್ನು ೪ ದಿನಗಳ ನಂತರ ಹುಡುಕುವಲ್ಲಿ ಪೊಲೀಸರಿಗೆ ಯಶಸ್ಸು ಸಿಕ್ಕಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟಿ ಖಾನ್ ಸಹಿತ ೭ ಮಂದಿಯನ್ನು ಬಂಧಿಸಲಾಗಿದೆ.
‘ಝೀ ಟಿವಿ’ ಈ ಖಾಸಗಿ ವಾಹಿನಿಯಲ್ಲಿ ಅಕ್ಟೋಬರ್ ೫ ರಿಂದ ‘ರಾಮ ಪ್ಯಾರೆ ಸಿರ್ಫ್ ಹಮಾರೆ’ ಹೆಸರಿನ ಹಿಂದಿ ಧಾರಾವಾಹಿಯು ಪ್ರಸಾರವಾಗಲಿದೆ. ಈ ಧಾರಾವಾಹಿಯ ‘ಪ್ರೋಮೊ’ (ಪ್ರಸಿದ್ಧಿಗಾಗಿ ಮಾಲಿಕೆಯಲ್ಲಿನ ಆಯ್ದ ಭಾಗಗಳನ್ನು ತೋರಿಸುವುದು) ತೋರಿಸಲಾಗುತ್ತಿದ್ದು ಅದರಲ್ಲಿ ದುಲಾರಿ ಹೆಸರಿನ ಮಹಿಳೆಯ ಗಂಡನ ಹೆಸರು ‘ರಾಮ’ ಇದೆ.
ಇಂಡೋ-ಟಿಬೆಟ್ ಸಹಕಾರ ವೇದಿಕೆಯು ಪ್ರತಿವರ್ಷ ತವಾಂಗ್ ತೀರ್ಥಯಾತ್ರೆಯನ್ನು ಆಯೋಜಿಸುತ್ತದೆ. ಯಾತ್ರಿಕರು ಇಂಡೋ-ಟಿಬೆಟಿಯನ್ ಗಡಿಯಲ್ಲಿರುವ ಬುಮಲಾಗೆ ಕಾಲ್ನಡಿಗೆಯಿಂದ ಹೋಗಿ ಮಾತೃಭೂಮಿಗೆ ಪೂಜೆ ಸಲ್ಲಿಸುತ್ತಾರೆ. ೧೯೬೨ರಲ್ಲಿ ಚೀನಾ ವಶಪಡಿಸಿಕೊಂಡ ಭೂಮಿಯನ್ನು ಪುನಃ ಪಡೆದುಕೊಳ್ಳಲು ಅವರು ಸಂಕಲ್ಪ ಮಾಡುತ್ತಾರೆ
ಲವ್ ಜಿಹಾದ್ನ ವಿಷಯದಲ್ಲಿ ಉತ್ತರಪ್ರದೇಶ ಸರಕಾರ ಶೀಘ್ರವಾಗಿ ಮತಾಂತರದ ಬಗ್ಗೆ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ‘ಇತರ ರಾಜ್ಯಗಳಲ್ಲಿ ಮತಾಂತರದ ವಿರುದ್ಧ ರೂಪಿಸಲಾಗಿರುವ ಕಾನೂನುಗಳು ಹಾಗೂ ಅಧಿನಿಯಮಗಳ ಬಗ್ಗೆ ಅಭ್ಯಾಸ ಮಾಡಲಾಗುತ್ತಿದೆ. ನಂತರ ಉತ್ತರಪ್ರದೇಶ ಸರಕಾರ ಇದರ ಬಗ್ಗೆ ತನ್ನ ಕಾನೂನುಗಳನ್ನು ರೂಪಿಸಲಿದೆ’, ಎಂದು ರಾಜ್ಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿಯ ಮಡಿಕೇರಿಯಲ್ಲಿನ ಹಿಂದೂ ಮಹಿಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರ್ನನ್ನು ಆ ಮಹಿಳೆ ಹಾಗೂ ಆಕೆಯ ಸಂಬಂಧಿಕರು ಥಳಿಸಿದರು. ಪೊಲೀಸರು ಮಹಮ್ಮದ ಮುನಾಸಿರನನ್ನು ಬಂಧಿಸಿದ್ದಾರೆ. ಅದೇರೀತಿ ಮಹಮ್ಮದ ಮುನಾಸಿರಗೆ ಥಳಿಸಿದ ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ೪ ಸಂಬಂಧಿಕರನ್ನು ಸಹ ಬಂಧಿಸಿದ್ದಾರೆ.
ಇಲ್ಲಿಯ ಶ್ರೀ ಕನಕದುರ್ಗಾ ದೇವಸ್ಥಾನ ಪ್ರಾಂಗಣದಲ್ಲಿಯ ‘ಅಮ್ಮಾವರಿ ರಥಮ್’ನ (‘ಪವಿತ್ರ ರಥ’ದ) ೪ ಮೂಲೆಗಳಲ್ಲಿರುವ ಸಿಂಹಗಳ ಬೆಳ್ಳಿಯ ಮೂರ್ತಿಗಳ ಪೈಕಿ ೩ ಮೂಲೆಯ ಸಿಂಹದ ಮೂರ್ತಿಗಳ ಕಳ್ಳತನವಾಗಿದೆ. ಪ್ರತಿಯೊಂದು ಸಿಂಹವನ್ನು ೩ ಕೆಜಿಯಷ್ಟು ಬೆಳ್ಳಿಯಿಂದ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷವಾಗಿರುವ ಟಿಡಿಪಿಯು ಸಿಬಿಐ ತನಿಖೆಯನ್ನು ಆಗ್ರಹಿಸಿದೆ.
ಸಿಎಎ ಕಾಯ್ದೆಯ ವಿರುದ್ಧ ನಡೆದ ಆಂದೋಲನದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ಶರಜೀಲ್ ಉಸ್ಮಾನೀಯು ‘ಬಾಬರಿ ಮಸೀದಿ ಪುನಃ ಕಟ್ಟುವೆವು’, ಎಂಬ ಪ್ರಚೋದನಕಾರಿ ಟ್ವೀಟ್ ಮಾಡಿದ್ದಾನೆ.
ನೇಪಾಳದಲ್ಲಿಯ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ ‘ಯುನಿಫೈಡ್ ನೇಪಾಳ ನ್ಯಾಶನಲ್ ಫ್ರಂಟ್’ ಈ ಸಂಘಟನೆಯೊಂದಿಗೆ ‘ಗ್ರೇಟರ್ ನೇಪಾಳ’ ಹೆಸರಿನ ಒಂದು ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರಲ್ಲಿ ಭಾರತದ ಈ ಮೇಲಿನ ಭಾಗಗಳೊಂದಿಗೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಸಿಕ್ಕಿಮ್ ಈ ರಾಜ್ಯಗಳ ಅನೇಕ ಭಾಗ ತಮ್ಮದೆಂದು ಹೇಳಿಕೊಂಡಿದೆ.
ರಂಗನಾಥನ್ ಇವರ ಮನೆಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿರುವಾಗ ಕೆಲವರು ಮನೆಯೊಳಗೆ ನುಗ್ಗಿದರು ಹಾಗೂ ಅವರೊಂದಿಗೆ ಜಗಳವಾಡಲಾರಂಭಿಸಿದರು. ಈ ಸಮಯದಲ್ಲಿ ರಂಗನಾಥನ್ ಅಲ್ಲಿಂದ ಓಡಿ ಹೊರಗೆ ಬಂದಾಗ ಹಂತಕರು ಅವರನ್ನು ಹಿಂಬಾಲಿಸಿ ಅವರ ಮೇಲೆ ಕೊಡಲಿಯಿಂದ ಹಾಗೂ ಮಾರಣಾಂತಿಕ ಶಸ್ತ್ರಗಳಿಂದ ದಾಳಿ ಮಾಡಿ ಅವರ ಹತ್ಯೆ ಮಾಡಿ ಪರಾರಿಯಾದರು.
ಇಲ್ಲಿಯ ಹಿಂದೂ ಯುವಾ ವಾಹಿನಿಯ ನಾಯಕ ಡಾ. ಸಂಜಯ ಸಿಂಹ ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಇಲ್ಲಿ ಅವರ ಖಾಸಗಿ ಆಸ್ಪತ್ರೆಯ ಎದುರಲ್ಲೇ ರಾತ್ರಿಯ ಸಮಯದಲ್ಲಿ ಅವರ ಹತ್ಯೆ ಮಾಡಲಾಯಿತು. ಅವರು ಕಳೆದ ೨ ವರ್ಷಗಳಿಂದ ಈ ಸಂಘಟನೆಯ ಮಿರಜಗಂಜ್ ತಾಲೂಕಿನ ಮುಖಂಡರಾಗಿದ್ದರು.