ಜಿಹಾದಿ ಭಯೋತ್ಪಾದಬೆಯನ್ನು ಬೆಂಬಲಿಸುವ ಸ್ವಯಂ ಘೋಷಿತ ಪತ್ರಕರ್ತ ವಾಜಿದ್ ಖಾನ್ ಬಂಧನ

ಜಯಪುರ (ರಾಜಸ್ಥಾನ್) – ಇಸ್ಲಾಮಿ ಭಯೋತ್ಪಾದನೆಗೆ ಬೆಂಬಲ ನೀಡುವ ಮತ್ತು ನಿರಂತರವಾಗಿ ಹಿಂದುದ್ವೇಷಿ ವಿಷಯಗಳು ಸಾಮಾಜಿಕ ಜಾಲತಾಣದಿಂದ ಪ್ರಸಾರ ಮಾಡುವ ಸ್ವಯಂ ಘೋಷಿತ ಪತ್ರಕರ್ತ ವಾಜಿದ್ ಖಾನ್ ಇವನನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಈಗ ಅವನ ‘ಪೋಸ್ಟ್’ ನಲ್ಲಿನ ಲೇಖನ ಮತ್ತು ಅವನ ಸಂಪರ್ಕ ಈ ವಿಷಯದ ಕುರಿತು ತನಿಖೆ ನಡೆಸುತ್ತಿದ್ದಾರೆ. ವಾಜಿದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಮತ್ತು ಜ್ಯೂಗಳ ವಿರುದ್ಧ ಪ್ರಚೋದನಕಾರಿ ಲೇಖನಗಳು ಬರೆಯುತ್ತಿದ್ದನು. ಅವನ ಎಕ್ಸ್ ನಲ್ಲಿ ‘ಕೊಲ್ಲಿ ದೇಶಗಳಲ್ಲಿನ ಅಲ್ ಜಝಿರ ಈ ಪ್ರಸಾರ ಮಾಧ್ಯಮದಲ್ಲಿ ಅಂಕಣಕಾರ’ ಎಂದು ಗುರುತಿಸಿಕೊಂಡಿದ್ದನು. ವಾಜಿದ ಖಾನ್ ರಾಜಸ್ಥಾನದಲ್ಲಿನ ಅಜ್ಮೆರ್ ಜಿಲ್ಲೆಯ ಗವಾನಾದ ನಿವಾಸಿಯಾಗಿದ್ದಾನೆ; ಆದರೆ ರಾಜಸ್ಥಾನದಲ್ಲಿ ಭಾಜಪದ ಸರಕಾರ ಬಂದ ನಂತರ ಅವನು ಅಮೇರಿಕಾದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದನು.

ವಾಜಿದ್ ಖಾನ್ ನ ಹಿಂದೂ ದ್ವೇಷ ಮತ್ತು ಜಿಹಾದಿಗಳ ಕುರಿತು ಪ್ರೀತಿ !

ಅಕ್ಟೋಬರ್ ೮ ರಂದು ಇಸ್ರಯಿಲ್ ಮೇಲೆ ದಾಳಿ ಮಾಡಿದ ಹಮಾಸ ಭಯೋತ್ಪಾದಕರ ದಾಳಿಗೆ ೧ ವರ್ಷ ಕಳೆದಿದೆ. ಅದರ ನಂತರ ಖಾನ್ ಇವನು ಈ ದಾಳಿಯನ್ನು ವೈಭವಿಕರಿಸುತ್ತಿದ್ದಾನೆ. ಜಿಹಾದಿ ಭಯೋತ್ಪಾದಕರ ವಿರುದ್ಧ ಇಸ್ರೇಲಿನ ಬೆಂಬಲಕ್ಕೆ ನಿಂತಿರುವ ಹಿಂದುಗಳ ವಿಷಯದಲ್ಲಿ ಕೂಡ ಮೇಲಿಂದ ಮೇಲೆ ‘ಎಕ್ಸ್’ನಲ್ಲಿ ವಿಷ ಕಾರುತ್ತಿದ್ದನು. ವಾಜಿದ್ ಖಾನ್ ಇವನು ಅಕ್ಟೋಬರ್ ೪ ರಂದು ಮಹಮ್ಮದ್ ಪೈಗಂಬರ್ ಇವರ ಕಥಿತ ಅವಮಾನ ಮಾಡುವದ್ದಾರೆಂದು ಮಹಾಂತ ಯತಿ ನರಸಿಂಹನಂದ ಮತ್ತು ಅವರ ಅನುಯಾಯಿಗಳಿಗೆ ಜೀವ ಬೆದರಿಕೆ ನೀಡಿದ್ದನು.

ಸಂಪಾದಕೀಯ ನಿಲುವು

ಸಾಮಾಜಿಕ ಜಾಲತಾಣದಲ್ಲಿ ಹಿಂದುಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವ ಮತ್ತು ಜಿಹಾದಿ ಭಯೋತ್ಪಾದನೆಯನ್ನು ಬೆಂಬಲಿಸುವವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ. ಇಂಥವರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನ ಮಾಡುವುದು ಆವಶ್ಯಕ !