ಅಲ್ಲಾ ಮನಸ್ಸು ಮಾಡಿದ್ರೆ ಕೇಂದ್ರ ಸರಕಾರ ಉರುಳಿಸುತ್ತಾನೆ ! ಖುದಾ ಬಯಸಿದ್ರೆ ಏನ್ ಬೇಕಾದರೂ ಆಗುತ್ತೆ ! – ಜಮೀರ್ ಅಹಮದ್

ಕಾಂಗ್ರೆಸ್ ಸಚಿವ ಜಮೀರ್ ಅಹಮದ್ ಹೇಳಿಕೆ

ವಿಜಯಪುರ – ಅಲ್ಲಾ ಮನಸ್ಸು ಮಾಡಿದ್ರೆ ಕೇಂದ್ರ ಸರಕಾರ ಉರುಳಿಸುತ್ತಾನೆ ಎಂದು ರಾಜ್ಯ ಸಚಿವ ಜಮೀರ್ ಅಹಮದ್ ಇಲ್ಲಿ ಆಯೋಜಿಸಿದ್ದ ‘ವಕ್ಫ್ ಅದಾಲತ್’ ಕಾರ್ಯಕ್ರಮದಲ್ಲಿ ಹೇಳಿದರು.

ಅಲ್ಲಾ ಭಾಜಪವನ್ನು 240ಕ್ಕೆ ನಿಲ್ಲಿಸಿದ !

ಲೋಕಸಭೆ ಚುನಾವಣೆಯಲ್ಲಿ ಭಾಜಪ 400 ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಜಮೀರ್ ಅಹ್ಮದ್ ಹೇಳಿದರು; ಆದರೆ ಅಲ್ಲಾ ಅವರಿಗೆ 400 ಸ್ಥಾನಗಳನ್ನು ತಲುಪಲು ಬಿಡಲಿಲ್ಲ. ಅಲ್ಲಾ ಭಾಜಪವನ್ನು 240 ಸ್ಥಾನಗಳಲ್ಲಿ ನಿಲ್ಲಿಸಿದರು. ಅಲ್ಲಾ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು. ಭಾಜಪ ಸರಕಾರ ವಕ್ಫ್ ಕಾಯ್ದೆಯನ್ನು ರದ್ದುಪಡೊಸಲು ಪ್ರಯತ್ನಿಸುತ್ತಿದೆ. ಇದನ್ನು ಅಲ್ಲಾಹನು ನೋಡಿಕೊಳ್ಳುತ್ತಾನೆ ಎಂದೂ ಹೇಳಿದರು.

ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ

ಸರಕಾರಿ ಕಾರ್ಯಕ್ರಮವಿದ್ದರೂ ಶಿಷ್ಟಾಚಾರ ಪಾಲಿಸಿಲ್ಲ ಎಂದು ಭಾಜಪ ಆರೋಪಿಸಿದೆ. ಅಲ್ಪಸಂಖ್ಯಾತರು, ಹಜ್, ವಕ್ಫ್ ಇಲಾಖೆ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ಭಾಜಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾವಚಿತ್ರ ಇರಲಿಲ್ಲ; ಆದರೆ ವಿಜಯಪುರ ಜಿಲ್ಲೆಯ ಇತರ ಶಾಸಕರ ಭಾವಚಿತ್ರಗಳ ಫಲಕ ಇದ್ದವು.

ಸಂಪಾದಕೀಯ ನಿಲುವು

ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಯಾರಿಂದ ಉಳಿದಿದೆ ಎಂದು ಬೇರೆ ಹೇಳಬೇಕಾಗಿಲ್ಲ !