ರಕ್ಷಾಬಂಧನದ ನಿಮಿತ್ತ ಎಲ್ಲೆಡೆಯ ಹಿಂದೂ ಬಾಂಧವರಿಗೆ ಕರೆ !

ರಕ್ಷಾಬಂಧನದಂದು ಸಹೋದರಿಗೆ ಶಾಶ್ವತ ಜ್ಞಾನಾಮೃತವಾಗಿರುವ ಸನಾತನದ ಗ್ರಂಥಗಳನ್ನು ನೀಡಿ, ಹಾಗೆಯೇ ರಾಷ್ಟ್ರ-ಧರ್ಮದ ಬಗ್ಗೆ ಅಭಿಮಾನವನ್ನು ಹೆಚ್ಚಿಸುವ ‘ಸನಾತನ ಪ್ರಭಾತ’ದ ವಾಚಕಳನ್ನಾಗಿಸಿ ಅಮೂಲ್ಯವಾದ ಉಡುಗೊರೆ ನೀಡಿ !

೧. ರಕ್ಷಾಬಂಧನ ಮತ್ತು ಅದರ ಮಹತ್ವ

‘ಶ್ರಾವಣ ಹುಣ್ಣಿಮೆ, ಅಂದರೆ ರಕ್ಷಾಬಂಧನ ! – ೩೦.೮.೨೦೨೩

ಈ ದಿನ ‘ರಕ್ಷಾಬಂಧನ’ ಇದೆ. ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ಅಸಾಧಾರಣ ಮಹತ್ವವಿದೆ. ಈ ದಿನ ಸಹೋದರಿಯು ತನ್ನ ಸಹೋದರನಿಗೆ ಆರತಿಯನ್ನು ಬೆಳಗಿ ಅವನ ಬಲಗೈಗೆ ರಾಖಿಯನ್ನು ಕಟ್ಟುತ್ತಾಳೆ. ಇದರ ಹಿಂದೆ ‘ಸಹೋದರನ ಅಭಿವೃದ್ಧಿಯಾಗಬೇಕು ಮತ್ತು ಸಹೋದರನು ತನ್ನ ರಕ್ಷಣೆ ಮಾಡಬೇಕು’, ಎಂಬ ವಿಚಾರವಿರುತ್ತದೆ. ಈ ದಿನ ಸಹೋದರನು ಸಹೋದರಿಗೆ ಧನ ಅಥವಾ ಅವಳಿಗೆ ಉಪ ಯುಕ್ತÀ ವಸ್ತುಗಳನ್ನು ಉಡುಗೊರೆಯೆಂದು ನೀಡುತ್ತಾನೆ.

೨. ಪ್ರಸ್ತುತ ಕಾಲಕ್ಕನುಸಾರ ಶ್ರೇಷ್ಠ ಉಡುಗೊರೆ !

ರಕ್ಷಾಬಂಧನದ ದಿನ ತಮ್ಮ ಸಹೋದರಿಗೆ ಬಟ್ಟೆ, ಆಭರಣ ಗಳು ಮುಂತಾದ ಅಶಾಶ್ವತ ಉಡುಗೊರೆಯನ್ನು ನೀಡುವ ಬದಲು ಶಾಶ್ವತ ಜ್ಞಾನದ ಪ್ರಸಾರ ಮಾಡುವ ಸನಾತನದ ಗ್ರಂಥಸಂಪತ್ತಿನ ಗ್ರಂಥಗಳನ್ನು ಉಡುಗೊರೆಯೆಂದು ನೀಡಬಹುದು. ಅದೇ ರೀತಿ ಅವಳಿಗೆ ‘ಸನಾತನ ಪ್ರಭಾತ’ ಈ ನಿಯತಕಾಲಿಕೆಯ ವಾಚಕಳನ್ನಾಗಿಯೂ ಮಾಡಬಹುದು. ಸದ್ಯದ ಕಾಲಕ್ಕನುಸಾರ ಈ ಉಡುಗೊರೆ ನೀಡುವುದು ಹೆಚ್ಚು ಸೂಕ್ತವಾಗಿರುತ್ತದೆ.

೩. ಸಹಜಸುಲಭ ಭಾಷೆಯಲ್ಲಿ ಧರ್ಮಶಾಸ್ತ್ರವನ್ನು ಹೇಳಿ ಧರ್ಮದ ಬಗ್ಗೆ ಶ್ರದ್ಧೆಯನ್ನು ಹೆಚ್ಚಿಸುವ ಸನಾತನದ ಗ್ರಂಥಗಳು !

ಸನಾತನವು ಜುಲೈ ೨೦೨೩ ರವರೆಗೆ ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರ ರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ೩೬೨ ಗ್ರಂಥ ಮತ್ತು ಕಿರುಗ್ರಂಥಗಳ ೯೩ ಲಕ್ಷಗಳಿಗಿಂತ ಹೆಚ್ಚು ಪ್ರತಿ ಗಳನ್ನು ಪ್ರಕಾಶಿಸಿದೆ. ಈ ಗ್ರಂಥಗಳು ೧೭ ಭಾಷೆಗಳಲ್ಲಿ ಲಭ್ಯವಿದ್ದು ಅವು
ವಾಚಕರಿಗೆ ‘ಕಾಲಾನುಸಾರ ಆವಶ್ಯಕವಾಗಿರುವ ಸಾಧನೆ ಯಾವುದು? ದೇವತೆಗಳ ಉಪಾಸನೆಯನ್ನು ಹೇಗೆ ಮಾಡಬೇಕು ? ಧಾರ್ಮಿಕ ಉತ್ಸವವನ್ನು ಹೇಗೆ ಆಚರಿಸಬೇಕು ?’ ಮುಂತಾದ ವಿಷಯ ಗಳ ಅಮೂಲ್ಯ ಜ್ಞಾನವನ್ನು ಸಹಜಸುಲಭ ಭಾಷೆಯಲ್ಲಿ ನೀಡುವುದರಿಂದ ಧರ್ಮದ ಬಗೆಗಿನ ಶ್ರದ್ಧೆಯು ಹೆಚ್ಚಾಗುತ್ತದೆ.

೪. ಸಾಧನೆಯ ಮಹತ್ವವನ್ನು ಬಿಂಬಿಸುವ ಮತ್ತು ಪ್ರತಿಕೂಲ ಪ್ರಸಂಗಗಳನ್ನು ಎದುರಿಸಲು ಸ್ತ್ರೀಯರಲ್ಲಿ ಮನೋಧೈರ್ಯವನ್ನು ಸೃಷ್ಟಿಸುವ ‘ಸನಾತನ ಪ್ರಭಾತ’ !

ಸನಾತನ ಪ್ರಭಾತ

ಸದ್ಯ ಸಮಾಜದಲ್ಲಿ ಬಿಕ್ಕಟ್ಟಿನ ಸ್ಥಿತಿ ಇರುವುದರಿಂದ ಸ್ತ್ರೀಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಆದುದರಿಂದ ಅವರಿಗೆ ಈ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಎಚ್ಚರಿಸುವುದು, ಇದು ಕಾಲದ ಆವಶ್ಯಕತೆಯಾಗಿದೆ. ‘ಸನಾತನ ಪ್ರಭಾತ’ ನಿಯತಕಾಲಿಕೆಗಳು ಈ ಸಮಾಜೋಪಯೋಗಿ ಕಾರ್ಯ ವನ್ನು ನಿರಂತರವಾಗಿ ಮಾಡುತ್ತಿವೆ. ಸ್ವರಕ್ಷಣೆಗಾಗಿ ಪ್ರೇರಣೆನೀಡುವ, ಹಾಗೆಯೇ ‘ಸಾಧನೆಯ ಆಧಾರ ಪಡೆದು ಪ್ರತಿಕೂಲ ಪ್ರಸಂಗಗಳನ್ನು ಹೇಗೆ ಎದುರಿಸಬೇಕು ?’ ಇವುಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುವ ಲೇಖನಗಳನ್ನು ಈ ನಿಯತಕಾಲಿಕೆ ಗಳಲ್ಲಿ ನಿಯಮಿತವಾಗಿ ಪ್ರಕಟಿಸಲಾಗುತ್ತದೆ. ಆದುದರಿಂದ ಕಠಿಣ ಪ್ರಸಂಗಗಳನ್ನು ಎದುರಿಸುವ ಮನೋಧೈರ್ಯ ಸ್ತ್ರೀಯರಲ್ಲಿ ಮೂಡುತ್ತದೆ.

ಸಹೋದರಿಯ ಮನಸ್ಸಿನಲ್ಲಿ ಸಾಧನೆಯ ಮಹತ್ವವನ್ನು ಬಿಂಬಿಸಿ ಜೀವನದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡುವ ‘ಸನಾತನ ಪ್ರಭಾತ’ಕ್ಕೆ ಅವಳನ್ನು ವಾಚಕಳನ್ನಾಗಿ ಸುವುದು ಮತ್ತು ಅದರಲ್ಲಿನ ಅಮೂಲ್ಯ ಮಾಹಿತಿಯನ್ನು ಓದಲು ಪ್ರೋತ್ಸಾಹಿಸುವುದು, ಇವುಗಳಿಗಿಂತ ಇತರ ಶ್ರೇಷ್ಠ ಉಡುಗೊರೆ ಯಾವುದಾಗಿರಬಹುದು ?

ಸಹೋದರಿಗೆ ನೀಡಲು ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳು ಬೇಕಿದ್ದರೆ ಅವುಗಳ ಬೇಡಿಕೆಯನ್ನು ಸ್ಥಳೀಯ ವಿತರಕರಿಗೆ ನೀಡಬಹುದು. ಅವಳನ್ನು ವಾಚಕಳನ್ನಾಗಿ ಮಾಡಲು www.SanatanPrabhat.org/subscribe/ ಈ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸ್ಥಳೀಯ ಸಾಧಕರನ್ನು ಸಂಪರ್ಕಿಸಿ.’ (೩೦.೭.೨೦೨೩)