
ಭಗವಂತನಿಗೆ (ಪಾಂಡುರಂಗನಿಗೆ) ಯಾವುದರಿಂದ ಆನಂದವಾಗುತ್ತದೆ, ಭಕ್ತನು ಆ ರೀತಿಯಲ್ಲಿ ವರ್ತಿಸುವುದು ಆವಶ್ಯಕವಿದೆ. ಇದಕ್ಕಾಗಿ ಅವನು ಭಾವ ಸ್ತರದಲ್ಲಿದ್ದು ಪ್ರತಿಯೊಂದು ಕಾರ್ಯವನ್ನು ಮಾಡಬೇಕು. ವಾರಕರಿಗಳು ದೇವರನ್ನು ಭೇಟಿಯಾಗಲು ಉತ್ಸುಕರಾಗಿರುವುದರಿಂದ ಅವರು ಹಾಗೆ ಮಾಡುತ್ತಾರೆ. ಅವರು ಪಾಂಡುರಂಗನ ಹೆಸರನ್ನು ಜಪಿಸುತ್ತಾ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾ ಭಗವಂತನನ್ನು ಭೇಟಿಯಾಗಲು ಆನಂದದಿಂದ ಹೋಗುವಾಗ ದಾರಿಯಲ್ಲಿ ಅವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ; ಆದರೆ ಪಾಂಡುರಂಗನ ಭೇಟಿಯ ಉತ್ಸುಕತೆಯಿಂದಾಗಿ ವಾರಕರಿಗಳಿಗೆ ಅದೇನೂ (ಸಂಕಟದ ಬಗ್ಗೆ) ಅನಿಸುವುದಿಲ್ಲ. ಭಗವಂತನು ಅವರಲ್ಲಿರುವ ಭಾವವನ್ನು ಅರಿತು ಅವರ ಭೇಟಿಗಾಗಿ ಸದಾ ಕಾಲ ಉತ್ಸುಕನಾಗಿರುತ್ತಾನೆ.
ಹೇಗೆ ತಾವರೆಯ ಎಲೆಯು ನೀರಿನ ಮೇಲಿದ್ದರು ಸಹ ಅದಕ್ಕೆ ನೀರಿನ ಸ್ಪರ್ಶವಾಗುವುದಿಲ್ಲವೋ, ಅದೇ ರೀತಿಯಲ್ಲಿ ಪ್ರತಿಯೊಂದು ಕಾರ್ಯವನ್ನು ಮಾಡುವಾಗ ಶಾಶ್ವತ ಚೈತನ್ಯದ ಸಾನಿಧ್ಯದಲ್ಲಿ ಇದ್ದರೆ ಆ ಜೀವವು ಮಾಯೆಯ ಭೌತಿಕ ಭೋಗಗಳ ಭವಬಂಧನದಿಂದ ತೇಲಿ ಹೋಗಿ ನಿರಂತರ ಆನಂದದಲ್ಲಿರುತ್ತದೆ. ಅಂತಹ ಭಕ್ತನು ಭಗವಂತನಿಗೆ ಪ್ರಿಯನಾಗಿರುತ್ತಾನೆ.
– ಪರಾತ್ಪರ ಗುರು ಪರಶರಾಮ ಮಾಧವ ಪಾಂಡೆ ಮಹಾರಾಜರು
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು