ಖಲಿಸ್ತಾನಿಗಳು ಯಾವಾಗ ಕಚ್ಚುತ್ತಾರೆ ಎಂದು ತಿಳಿದಿಲ್ಲ !

ಒಟ್ಟಾವಾ (ಕೆನಡಾ) – ಕೆನಡಾದಲ್ಲಿ ಜುಲೈ 8 ರಂದು ಖಲಿಸ್ತಾನಿ ಬೆಂಬಲಿಗರು `ಕಿಲ್ ಇಂಡಿಯಾ’ ಹೆಸರಿನ ಮೆರವಣಿಗೆಯನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕೆಲವು ದಿನಗಳ ಹಿಂದೆ ಅವರಿಂದ ಒಂದು ಭಿತ್ತಿಪತ್ರ ಪ್ರಸಾರವಾಗಿತ್ತು. ಅದರಲ್ಲಿ ಭಾರತೀಯ ರಾಯಭಾರಿಗಳು ಖಲಿಸ್ತಾನಿ ಭಯೋತ್ಪಾದಕರ ಕೊಲೆಗಾರರಾಗಿದ್ದಾರೆಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾದ ಭಾರತೀಯ ವಂಶಸ್ಥ ಸಂಸದ ಚಂದ್ರ ಆರ್ಯ ಇವರು ಖಲಿಸ್ತಾನಿ ಬೆಂಬಲಿಗರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಅವರು, `ನಮ್ಮ ಅಂಗಳದಲ್ಲಿ ಹಾವು ಇದ್ದು, ಅದು ಹೆಡೆ ಬಿಚ್ಚಿದೆ. ಅದೀಗ ಯಾವಾಗ ಕಚ್ಚುವುದೋ ಗೊತ್ತಿಲ್ಲ.’ ಎಂದು ಹೇಳಿದ್ದಾರೆ. ಆರ್ಯ ಇವರು ಮೂಲತಃ ಕರ್ನಾಟಕದವರಾಗಿದ್ದು, ಅವರು ಕೆನಡಾದ `ಲಿಬರಲ್ ಪಾರ್ಟಿ’ಯ ಸಂಸದರಾಗಿದ್ದಾರೆ. ಆರ್ಯ ಈ ಸಂದರ್ಭದಲ್ಲಿ ಒಂದು ಟ್ವೀಟ್ ಮಾಡಿದ್ದು, ಅದರಲ್ಲಿ ಅವರು ಖಲಿಸ್ತಾನ ಬೆಂಬಲಿಗರು ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದ್ದಾರೆ. ಇದರಿಂದ ಕೆನಡಾದ ಜನರ ಅಧಿಕಾರ ಮತ್ತು ಸ್ವಾತಂತ್ರ್ಯಹರಣವಾಗುತ್ತಿದೆ. ಖಲಿಸ್ತಾನಿ ಬೆಂಬಲಿಗರ ಕೃತ್ಯಗಳು ನಾಚಿಕೆಪಡುವಂತಹದ್ದಾಗಿದೆ. ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಬೆಂಬಲಿಸುತ್ತಾ, ಆ ದಿನವನ್ನು ಸಂಭ್ರಮದಿಂದ ಆಚರಿಸಿದರು. ಇದನ್ನು ಯಾವೊಬ್ಬ ಜನಪ್ರತಿನಿಧಿಯೂ ವಿರೋಧಿಸಲಿಲ್ಲ. ಇದರಿಂದ ಅವರ ಭಯ ದೂರವಾಗಿದ್ದು, ಅವರು ಈಗ ಭಾರತೀಯ ರಾಯಭಾರಿಗಳ ಮೇಲೆ ದಾಳಿ ನಡೆಸಲು ಆರಂಭಿಸಿದ್ದಾರೆ. ಎಂದು ಹೇಳಿದ್ದಾರೆ.
Chandra Arya, an Indian-origin MP in #Canada, has come forward in strong criticism of some pro-#Khalistani posters that depicted some Indian diplomats as “killers”. @AryaCanada https://t.co/lZ9ySp5Umb
— IndiaToday (@IndiaToday) July 5, 2023
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation