ಭಕ್ತರಿಗೆ ಅಖಂಡ ಕೃಪೆಯನ್ನು ತೋರಿಸುವ ಪ. ಪೂ.ಭಕ್ತರಾಜ ಮಹಾರಾಜರು !

ಜುಲೈ ೭ ರಂದು ಇರುವ ಪ.ಪೂ.ಭಕ್ತರಾಜ ಮಹಾರಾಜರ ಜನ್ಮೋತ್ಸವದ ನಿಮಿತ್ತ…

ಪ.ಪೂ.ಭಕ್ತರಾಜ ಮಹಾರಾಜರ ಚರಣಗಳಿಗೆ ಕೃತಜ್ಞತಾ ಭಾವದಿಂದ ಪ್ರಾರ್ಥನೆ ಮಾಡುತ್ತಿರುವ ಶಿಷ್ಯ ಡಾ. ಆಠವಲೆ

ಪ.ಪೂ. ಭಕ್ತರಾಜರ ಕೃಪೆಯ ಪ್ರತ್ಯಕ್ಷ ಸಾಕ್ಷಿಯನ್ನು ನೀಡುವ ವೈಶಿಷ್ಟ್ಯಪೂರ್ಣ ಘಟನೆಗಳು

೧. ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದಲ್ಲಿ ತನ್ನಿಂತಾನೇ ಆಗಿರುವ ಬದಲಾವಣೆ : ೨೦೦೬ ರಲ್ಲಿ ಸನಾತನದ ರಾಮನಾಥಿ ಆಶ್ರಮದ ನನ್ನ ಕೋಣೆಯಲ್ಲಿರುವ ದೇವರ ಮಂಟಪದಲ್ಲಿ ಬಾಬಾರವರ ಛಾಯಾಚಿತ್ರವನ್ನು ಇಡಲಾಗಿತ್ತು. ಆ ಛಾಯಾಚಿತ್ರದಲ್ಲಿ ಅಗಸ್ಟ್ ೨೦೧೦ ರಲ್ಲಿ ತನ್ನಿಂತಾನೆ ಬದಲಾವಣೆಯಾಯಿತು. ಆ ಛಾಯಾಚಿತ್ರದ ‘ಮುಖ ಬಿಳಿ-ಹಳದಿ ಮತ್ತು ಸ್ವಲ್ಪ ಅಸ್ಪಷ್ಟವಾಗುವುದು, ಇದು ನಿರ್ಗುಣ ತತ್ತ್ವದ ಕಡೆಗೆ ಆಗುವ ಪ್ರಯಾಣವನ್ನು ತೋರಿಸುತ್ತದೆ, ‘ಪ್ರಭಾವಲಯ ಗಾಡ ಹಾಗೂ ಗುಲಾಬಿಯಾಗುವುದು, ಇದು ಧರ್ಮಪ್ರಸಾರಕ್ಕಾಗಿ ಆವಶ್ಯಕವಿರುವ ಕಾರ್ಯಕಾರೀ ಶಕ್ತಿ ಪ್ರಕಟವಾಗಿರುವುದನ್ನು ತೋರಿಸುತ್ತದೆ.

೨. ಪ.ಪೂ. ಭಕ್ತರಾಜ ಮಹಾರಾಜರ ಪಾದುಕೆಗಳ ರೂಪದಲ್ಲಿ ರಾಮನಾಥಿ ಆಶ್ರಮಕ್ಕೆ ಆಗಮನ : ಗೋವಾದ ಪಣಜಿಯ ಪ.ಪೂ. ಬಾಬಾರವರ ಭಕ್ತ ಶ್ರೀಮತಿ ಸ್ಮಿತಾ ರಾವ್ ಇವರು ಎಪ್ರಿಲ್ ೨೦೧೯ ರಲ್ಲಿ ತಮ್ಮಲ್ಲಿರುವ ಪ.ಪೂ.ಬಾಬಾರವರ ಪಾದುಕೆಗಳನ್ನು ಆಂತರಿಕ ಪ್ರೇರಣೆಯಿಂದ ರಾಮನಾಥಿ ಆಶ್ರಮದಲ್ಲಿಡಲು ನೀಡಿದರು. ‘ಪಾದುಕೆಗಳ ರೂಪದಲ್ಲಿ ಬಾಬಾರವರೆ ಆಶ್ರಮಕ್ಕೆ ಬಂದರು, ಎನ್ನುವ ಭಾವ ನಮ್ಮೆಲ್ಲರಲ್ಲಿದೆ. ಈ ಮೇಲಿನ ಘಟನೆಯಿಂದ ಪ.ಪೂ. ಬಾಬಾ ನಮಗೆ ‘ನನ್ನ ಗಮನವು ನಿಮ್ಮ ಮೇಲಿದೆ, ಚಿಂತೆ ಮಾಡಬೇಡಿ, ಎಂದು ಹೇಳುತ್ತಿರುವ ಹಾಗಿದೆ.

೩. ದೇಶ-ವಿದೇಶಗಳಲ್ಲಿನ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ವಿಷಯದಲ್ಲಿ ಬರುವ ಅನುಭೂತಿ : ಭಾರತದಷ್ಟೆ ಅಲ್ಲ, ವಿದೇಶದ ಅನೇಕ ಜಿಜ್ಞಾಸುಗಳು ಮತ್ತು ಸಾಧಕರು ಬಾಬಾರವರನ್ನು ನೋಡಿಯೇ ಇಲ್ಲ, ಆದರೂ ಬಾಬಾರವರ ಛಾಯಾಚಿತ್ರವನ್ನು ನೋಡಿದಾಗ ಅವರ ಭಾವಜಾಗೃತವಾಗುತ್ತದೆ, ಹಾಗೂ ಅವರಿಗೆ ಪ.ಪೂ. ಬಾಬಾರವರ ವಿಷಯದಲ್ಲಿ ಅನೇಕ ಅನುಭೂತಿಗಳು ಬರುತ್ತವೆ.

೧. ತ್ರೈಲೋಕ್ಯಾಚೆ ಯೋಗಿರಾಜ ಹೆ ಅವತರಲೆ ಭೂವರೀ |

(ಅರ್ಥ : ತ್ರಿಲೋಕದ ಯೋಗಿರಾಜರು ಭೂಮಿಯಲ್ಲಿ ಅವತರಿಸಿದರು) ತ್ರೈಲೋಕ್ಯಾಚೆ ಯೋಗಿರಾಜ ಹೆ ಅವತರಲೆ ಭೂವರೀ |, ಹೀಗೆ ಪ.ಪೂ. ಭಕ್ತರಾಜ ಮಹಾರಾಜರು (ಬಾಬಾ) ಒಂದು ಭಜನೆಯಲ್ಲಿ ತಮ್ಮ ಗುರುಗಳನ್ನು (ಶ್ರೀ ಅನಂತಾನಂದ ಸಾಯೀಶರಿಗೆ) ಉದ್ದೇಶಿಸಿ ಹೇಳಿದ್ದಾರೆ. ಆ ಭಜನೆಯು ಬಾಬಾ ರವರಿಗೂ ಅನ್ವಯಿಸುತ್ತದೆ. ಪ.ಪೂ. ಭಕ್ತರಾಜ ಮಹಾರಾಜರು ಗೃಹಸ್ಥಾಶ್ರಮಿ ಆಗಿದ್ದರೂ ಅಂತರಿಕ ಯೋಗಿರಾಜರಾಗಿದ್ದರು ! ಸಾಧಕರನ್ನು ಮತ್ತು ಭಕ್ತರನ್ನು ಉದ್ಧರಿಸಲು ಬಾಬಾ ಇವರು ಅವತರಿಸಿದ ಆ ದಿನವೆ ೭ ಜುಲೈ ೧೯೨೦.

೨. ಪ.ಪೂ. ಭಕ್ತರಾಜ ಮಹಾರಾಜರು ಶಿಷ್ಯಾವಸ್ಥೆಯಲ್ಲಿ ತಳಮಳದಿಂದ ಮಾಡಿದ ಗುರುಸೇವೆ

ಶಿಷ್ಯಾವಸ್ಥೆಯಲ್ಲಿರುವಾಗ ‘ಗುರು ಮತ್ತು ಗುರುವಿನ ಸ್ಥಾನದಲ್ಲಿರುವಾಗ ‘ಭಕ್ತ, ಇವೆರಡು ಶಬ್ದಗಳಲ್ಲಿಯೆ ಬಾಬಾ ರವರ ಸಂಪೂರ್ಣ ಜೀವನವೇ ಸಮಾವೇಶವಾಗಿತ್ತು. ಶಿಷ್ಯನಾಗಿರು ವಾಗ ಗುರುಗಳು ಪಾದರಕ್ಷೆ ಧರಿಸದೆ ಹೊರಗೆ ಹೋಗಲು ಹೊರಟ ತಕ್ಷಣ ಅವರ ಪಾದರಕ್ಷೆಯನ್ನು ಕಂಕುಳಲ್ಲಿಟ್ಟುಕೊಂಡು ಅವರ ಹಿಂದೆ ಬರಿಗಾಲಿನಲ್ಲಿಯೇ ನಡೆಯುವುದು, ಭಜನೆಯ ಕಾರ್ಯಕ್ರಮದಲ್ಲಿ ‘ಗುರುಗಳು ಏಳಲು ಹೇಳಲಿಲ್ಲವೆಂದು ಸತತ ೮-೧೦ ಗಂಟೆ ಭಜನೆ ಹೇಳುವುದು, ಗುರುಗಳ ಮುಂದೆ ಗಂಟೆಗಟ್ಟಲೆ ಒಂದೇ ಕಾಲಿನಲ್ಲಿ ನಿಂತುಕೊಂಡು ಭಜನೆ ಹೇಳುವುದು, ರಾತ್ರಿ ಗುರುಗಳು ಮಲಗುವ ಸಮಯದಲ್ಲಿ ಅವರು ‘ಸಾಕು ಎಂದು ಹೇಳುವ ತನಕ ಅಖಂಡವಾಗಿ ಅವರ ಕಾಲುಗಳನ್ನು ಮರ್ದನ ಮಾಡುತ್ತಾ ಇರುವುದು, ಇತ್ಯಾದಿ ಬಾಬಾರವರು ಮಾಡಿದ ಗುರುಸೇವೆಗೆ ಸರಿಸಾಟಿಯಿಲ್ಲ. ಬಾಬಾರವರು ಇಂತಹ ಗುರುಸೇವೆಯಿಂದ ಶಿಷ್ಯತ್ವದ ದೊಡ್ಡ ಆದರ್ಶವನ್ನೇ ನಮ್ಮೆಲ್ಲರ ಮುಂದಿಟ್ಟಿದ್ದಾರೆ.

೩. ಪ.ಪೂ. ಭಕ್ತರಾಜ ಮಹಾರಾಜರ ಜೀವನದ ತ್ರಿಸೂತ್ರಗಳು : ಭಜನೆ, ಭ್ರಮಣ ಮತ್ತು ಭಂಡಾರ !

೩ ಅ. ಭಜನೆ : ಭಜನೆಯೆ ನನ್ನ ಜೀವನವಾಗಿದೆ ಎಂದು ಪ.ಪೂ. ಬಾಬಾ ಹೇಳುತ್ತಿದ್ದರು, ‘ ಬಾಬಾರವರ ಭಜನೆಯ ವೈಶಿಷ್ಟ್ಯ ವೆಂದರೆ, ಇಂದು ಇಷ್ಟು ವರ್ಷಗಳ ನಂತರವೂ ಪ್ರತಿಯೊಬ್ಬ ಸಾಧಕನಿಗೂ ಪ್ರತಿಯೊಂದು ಪ್ರಸಂಗದಲ್ಲಿ ಆ ಭಜನೆಯಿಂದ ಅವನ ಸಾಧನೆಗೆ ಆವಶ್ಯಕವಿರುವ ಅರ್ಥದ ಅರಿವಾಗುತ್ತದೆ. ಅದಕ್ಕಾಗಿಯೇ ‘ಬಾಬಾರವರ ಭಜನೆಯು ಅಮೂಲ್ಯವಾದ ಪ್ರಸಾದದಂತಹ ಕೊಡುಗೆಯೆ ಆಗಿದೆ. ಬಾಬಾರವರು ಭಜನೆಗಳ ಮೂಲಕ ಕೇವಲ ಭಕ್ತಿಯೋಗದ್ದು ಮಾತ್ರವಲ್ಲ, ನಾಮಸಂಕೀರ್ತನಯೋಗ, ಕರ್ಮಯೋಗ, ಜ್ಞಾನಯೋಗ ಇತ್ಯಾದಿ ಸಾಧನಾ ಮಾರ್ಗಗಳ ಬೋಧನೆಯನ್ನೂ ನೀಡಿದರು. ‘ಪ.ಪೂ. ಬಾಬಾರವರ ಭಜನೆಗಳನ್ನು ಕೇವಲ ಕೇಳುವುದ ರಿಂದಲೇ ಅವುಗಳಲ್ಲಿನ ಚೈತನ್ಯದಿಂದ ಕೆಟ್ಟಶಕ್ತಿಗಳ ತೊಂದರೆ ಕಡಿಮೆಯಾಗಿ ಅದು ಸಂಪೂರ್ಣ ದೂರವಾಗುತ್ತದೆ, ಎಂಬು ದನ್ನು ಅನೇಕ ಸಾಧಕರು ಅನುಭವಿಸಿದ್ದಾರೆ.

೩ ಆ. ಭ್ರಮಣ : ಭಕ್ತರಿಗೆ ಸತ್ಸಂಗ ಮತ್ತು ಆನಂದ ಸಿಗಬೇಕೆಂದು ಮತ್ತು ಅವರಿಗೆ ಸಾಧನೆಗಾಗಿ ಮಾರ್ಗದರ್ಶನವಾಗಬೇಕು, ಎಂಬುದಕ್ಕಾಗಿ ಮಳೆ-ಗಾಳಿಯನ್ನು ಲೆಕ್ಕಿಸದೆ, ಕೆಲವೊಮ್ಮೆ ಆನಾರೋಗ್ಯದಿಂದ ಇದ್ದರೂ ಪ.ಪೂ. ಬಾಬಾ ಅನೇಕ ಕಿಲೋ ಮೀಟರ್ ಪ್ರವಾಸ ಮಾಡಿ ಭಕ್ತರಲ್ಲಿಗೆ ಹೋಗುತ್ತಿದ್ದರು. ಪ.ಪೂ. ಬಾಬಾರವರ ಈ ಚೈತನ್ಯದಾಯಕ ಸಹವಾಸವನ್ನು ಸ್ಮರಿಸುವಾಗ ಸಾಧಕರಿಗೆ ಇಂದಿಗೂ ರೋಮಾಂಚನವಾಗುತ್ತದೆ.

೩ ಇ. ಭಂಡಾರ : ಒಮ್ಮೆ ಬಾಬಾರವರ ಗುರುಗಳು ಎಲ್ಲರಿಗೂ ಹೇಳಿದರು, “ನಾಳೆ ಇಲ್ಲಿ ದಿನೂವಿನ ಭಂಡಾರವಿದೆ (ಬಾಬಾ ರವರ ಪೂರ್ವಾಶ್ರಮದ ಹೆಸರು ‘ದಿನಕರ ಆದ್ದರಿಂದ ಅನೇಕ ಜನರು ಅವರನ್ನು ‘ದಿನೂ ಎಂದು ಕರೆಯುತ್ತಿದ್ದರು.) ಬಾಬಾ ಮನಸ್ಸಿನಲ್ಲಿಯೆ ಹೇಳಿದರು, ನನ್ನಲ್ಲಿ ಹಣವಿಲ್ಲ ಮತ್ತು ಮನೆಯಲ್ಲಿ ಭಂಡಾರಕ್ಕೆ ಬೇಕಾಗುವ ಸಾಹಿತ್ಯಗಳೂ ಇಲ್ಲ. ಹೀಗಿರುವಾಗ ಭಂಡಾರ ಹೇಗಾಗುವುದು ? ಆದರೂ ಬಾಬಾ ‘ಗುರುಗಳು ನೋಡಿಕೊಳ್ಳುವರು, ಎಂದು ವಿಚಾರ ಮಾಡಿ ಭಂಡಾರವನ್ನು ಮಾಡಲು ನಿರ್ಧರಿಸಿದರು. ಗುರುಗಳು ಅನೇಕ ಜನರಿಗೆ ಭಂಡಾರದ ಆಮಂತ್ರಣವನ್ನು ನೀಡಿದರು. ನಂತರ ಗುರುಗಳ ಕೃಪೆಯಿಂದ ಭಂಡಾರಕ್ಕಾಗಿ ಬೇಕಾಗುವ ಎಲ್ಲ ಸಾಹಿತ್ಯಗಳು ತನ್ನಿಂತಾನೇ ಸಂಗ್ರಹವಾದುವು. ಭಂಡಾರದಲ್ಲಿ ಯಾವುದೂ ಕಡಿಮೆಯಾಗಲಿಲ್ಲ. ಗುರುಗಳ ಪರೀಕ್ಷೆಯಲ್ಲಿ ಬಾಬಾ ಉತ್ತೀರ್ಣರಾದರು. ಮುಂದೆ ಬಾಬಾರವರಲ್ಲಿ ಹಣವಿಲ್ಲದಿದ್ದರೂ ಅನೇಕ ಭಂಡಾರಗಳನ್ನು ಮಾಡಿದರು ಹಾಗೂ ಭಕ್ತರಿಗೆ ಕಲಿಸಿದರು, ಗುರುಗಳ ಮೇಲೆ ದೃಢವಾದ ಶ್ರದ್ಧೆಯನ್ನಿಡಿ ಹಾಗೂ ಗುರುಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿರಿ. ಆಮೇಲೆ ನೋಡಿರಿ, ಗುರು ಹೇಗೆ ಕೃಪೆಯನ್ನು ತೋರಿಸುತ್ತಾರೆ ! ಎಂದು ತಮ್ಮ ಶಿಷ್ಯರಿಗೂ ಕಲಿಸಿದರು

೪. ಭಕ್ತರೊಂದಿಗೆ ಸಮರಸವಾಗಿರುವ ಪ.ಪೂ. ಭಕ್ತರಾಜ ಮಹಾರಾಜರು !

ಸಾಮಾನ್ಯವಾಗಿ ಹಿರಿಯ ಸಂತ-ಮಹಾತ್ಮರು ಜಪಜಾಪ್ಯ, ಧ್ಯಾನಧಾರಣೆ, ಸಮಾಧಿ ಇತ್ಯಾದಿಗಳಲ್ಲಿ ಮಗ್ನರಾಗಿರುತ್ತಾರೆ ಮತ್ತು ಕೆಲವೊಮ್ಮೆ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾರೆ. ಬಾಬಾರವರಿಗೆ ಮಾತ್ರ ಭಕ್ತರ ಹೊರತು ಸಮಾಧಾನವೆನಿಸುವುದಿಲ್ಲ, ಅಷ್ಟು ಅವರು ಭಕ್ತರೊಂದಿಗೆ ಲೀನವಾಗಿದ್ದರು.

೫. ಭಕ್ತರಿಗೆ ನಾನಾವಿಧಗಳಿಂದ ಕಲಿಸುವ ಪ.ಪೂ. ಭಕ್ತರಾಜ ಮಹಾರಾಜರು !

ಹೆಚ್ಚಿನ ಸಂತರು ಕೇವಲ ಮಾರ್ಗದರ್ಶನದ ಮೂಲಕ ಭಕ್ತರಿಗೆ ಕಲಿಸುತ್ತಾರೆ. ಬಾಬಾರವರು ಭಕ್ತರಿಗೆ ಕಲಿಸುವ ಅನೇಕ ಪದ್ಧತಿಗಳಿದ್ದವು. – ಪ.ಪೂ. ಭಕ್ತರಾಜರ ಶಿಷ್ಯ ಡಾ. ಜಯಂತ ಆಠವಲೆ ಅವರು ಭಕ್ತರಿಗೆ ಮಾರ್ಗದರ್ಶನದ ಮೂಲಕ ಮಾತ್ರವಲ್ಲ, ಸಹಜ ವರ್ತನೆ – ಮಾತುಗಳಿಂದ, ತಮಾಷೆ ಮಾಡಿ, ಕೆಲವೊಮ್ಮೆ ಕೋಪಿಸಿಕೊಂಡು, ಕೆಲವೊಮ್ಮೆ ಬೈದು ಕೂಡ ಕಲಿಸುತ್ತಿದ್ದರು. ಇಷ್ಟು ಮಾತ್ರವಲ್ಲ, ಭಕ್ತರು ತಪ್ಪು ಮಾಡಿದರೆ ಅವರ ಮೇಲೆ ಕೋಪಿಸಿಕೊಳ್ಳುತ್ತಿದ್ದರು. ಆದರೂ ಭಕ್ತರಿಗೆ ಅವರ ಕೋಪದಲ್ಲಿ ಪ್ರೇಮದ ಒಲವು ಮತ್ತು ಭಕ್ತರ ಕಲ್ಯಾಣದ ತಳಮಳದ ಅರಿವಾಗುತ್ತದೆ. ಅದಕ್ಕಾಗಿ ಇಂದು ಕೂಡ ಬಾಬಾರನ್ನು ಕೇವಲ ಸ್ಮರಣೆ ಮಾಡಿದರೂ ಭಕ್ತರ ನೇತ್ರ ಭಾವಾಶ್ರುವಿನಿಂದ ತುಂಬಿಕೊಳ್ಳುತ್ತದೆ.

೬. ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !

ಶ್ರೀ ಗುರುಗಳ ಹಿರಿಮೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ‘ಪ.ಪೂ. ಬಾಬಾರವರ ಕೃಪೆ ನಮ್ಮೆಲ್ಲರ ಮೇಲೆ ಹೀಗೆಯೇ ಅಖಂಡವಾಗಿರಬೇಕು ಹಾಗೂ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾಡಲು ಅವರು ನಮಗೆ ನಿರಂತರ ಶಕ್ತಿಯನ್ನು ನೀಡಬೇಕು, ಎಂದು ಅವರ ಚರಣಗಳಲ್ಲಿ ಭಾವಪೂರ್ಣ ಪ್ರಾರ್ಥನೆ ಮಾಡುತ್ತೇನೆ ಮತ್ತು ನನ್ನ ವಾಣಿಗೆ ವಿರಾಮವನ್ನು ನೀಡುತ್ತೇನೆ.

– ಪ.ಪೂ. ಭಕ್ತರಾಜರ ಶಿಷ್ಯ ಡಾ. ಜಯಂತ ಆಠವಲೆ