ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂಲಕ ಒಟ್ಟಾದ ಹಿಂದೂ ಶಕ್ತಿಯು ಹಿಂದೂ ರಾಷ್ಟ್ರದ ನಿರ್ಮಿತಿಗಾಗಿ ಜೋಡಿಸಲ್ಪಡುವುದು ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಗೋವಾದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನ’ಕ್ಕೆ ೩೦೦ ಕ್ಕೂ ಹೆಚ್ಚು ಹಿಂದೂಗಳ ಸಹಭಾಗ

ಸದ್ಗುರು (ಡಾ.) ಚಾರುದತ್ತ ಪಿಂಗಳೆ

 

ಎಡದಿಂದ ಶ್ರೀ. ಅನುಪ ಜೈಸ್ವಾಲ, ಡಾ. ರಮೇಶ ಹಾಸನ, ಶ್ರೀ. ಕೃಷ್ಣದೇವರಾಯ ಮತ್ತು ಮಾತನಾಡುತ್ತಿರುವ ನ್ಯಾಯವಾದಿ ವಿಷ್ಣು ಶಂಕರ ಜೈನ್

ಖಾಲಿಸ್ತಾನದಲ್ಲಿ ಭಯೋತ್ಪಾದನೆ, ಶ್ರೀರಾಮನವಮಿ-ಹನುಮಾನಜಯಂತಿಯಂತಹ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿದ ಗಲಭೆಗಳು, ಸಲಿಂಗ ವಿವಾಹಕ್ಕೆ ಬೆಂಬಲ, ಲಿವ್ ಇನ್ ರಿಲೇಶನ್‌ಶಿಪ್ನಲ್ಲಿ ವ್ಯಭಿಚಾರ ಒಪ್ಪಿಗೆ, ಹೆಚ್ಚುತ್ತಿರುವ ಅಶ್ಲೀಲತೆ, ಅನೈತಿಕತೆಯನ್ನು ಸಾಂವಿಧಾನಿಕಗೊಳಿಸುವ ಪ್ರಯತ್ನಗಳು ಇಂತಹ ಅನೇಕ ಸವಾಲುಗಳನ್ನು ಹಿಂದೂಗಳು ಪ್ರಸ್ತುತ ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಸೆಕ್ಯುಲರ್ ರಾಜ್ಯವ್ಯವಸ್ಥೆಯಲ್ಲಿ ಯಾವುದೇ ಉತ್ತರವಿರದೇ ಶಾಶ್ವತ ಹಿಂದೂ ರಾಷ್ಟ್ರವೇ ಅದಕ್ಕೆ ಉತ್ತರವಾಗಿದೆ. ಸನಾತನ ಧರ್ಮದರ್ಶನದಲ್ಲಿ ಹಿಂದೂ ವಿಶ್ವದ, ಅಂದರೆ ವೈಶ್ವಿಕ ಹಿಂದೂ ರಾಷ್ಟ್ರದ ವಿಚಾರವಿದೆ. ಆದ್ದರಿಂದ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಅಂದರೆ ಒಂದು ರೀತಿಯ ಜನಮಂಥನವಾಗಿದೆ. ಈ ಜನಮಂಥನದಿಂದ ಒಟ್ಟಾಗಿರುವ ಈ ಹಿಂದು ಶಕ್ತಿಯು ಹಿಂದು ರಾಷ್ಟ್ರ ನಿರ್ಮಾಣದ ವಿಶ್ವಕಲ್ಯಾಣಕಾರಿ ಕಾರ್ಯಕ್ಕಾಗಿ ಜೋಡಿಸಲ್ಪಡುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ಪ್ರತಿಪಾದಿಸಿದರು. ಅಧಿವೇಶನದ ಸವಿಸ್ತಾರ ವಾರ್ತೆಗಾಗಿ ಭೇಟಿ ನೀಡಿ – shoಡಿಣuಡಿಟ.ಚಿಣ/xಆಇ೪೬