
೧. ಪ್ರಜ್ಞಾಪರಾಧ (ಬುದ್ಧಿ, ಸ್ಥೈರ್ಯ, ಸ್ಮೃತಿ ಇವುಗಳಿಂದ ದೂರ ಹೋಗಿ, ಹಾನಿಯ ಬಗ್ಗೆ ಗೊತ್ತಿದ್ದರೂ ಶಾರೀರಿಕ, ವಾಚಿಕ ಅಥವಾ ಮಾನಸಿಕ ಸ್ತರದಲ್ಲಿ ಮತ್ತೆ ಮತ್ತೆ ಮಾಡಿದ ಅಯೋಗ್ಯ ಕೃತ್ಯಗಳು) ಆಗಲು ಬಿಡದಿರುವುದು.
೨. ಮನಸ್ಸು ಮತ್ತು ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಮತ್ತು ಕಾಮ, ಕ್ರೋಧ ಇತ್ಯಾದಿಗಳ ಪ್ರಚೋದನೆಯನ್ನು ನಿಯಂತ್ರಣದಲ್ಲಿಡುವುದು.
೩. ಕೆಮ್ಮು, ಶೌಚ, ಮೂತ್ರ ಇತ್ಯಾದಿಗಳ ನೈಸರ್ಗಿಕ ವೇಗವನ್ನು ನಿಯಂತ್ರಿಸ ಬಾರದು.
೪. ಆರೋಗ್ಯಕ್ಕಾಗಿ ಹಿತಕರ ಆಹಾರ-ವಿಹಾರ ಇರಬೇಕು.
೫. ವಸಂತಋತುವಿನಲ್ಲಿ ಕಫ ಹೆಚ್ಚಾಗಬಾರದೆಂದು; ವಾಂತಿ ಮಾಡಿಕೊಳ್ಳುವುದು, ಶರದ ಋತುವಿನಲ್ಲಿ ಪಿತ್ತ ಹೆಚ್ಚಾಗಬಾರದೆಂದು; ಭೇದಿಯ ಔಷಧಿ ತೆಗೆದುಕೊಳ್ಳುವುದು, ಮಳೆಗಾಲದಲ್ಲಿ ವಾತ ಹೆಚ್ಚಬಾರದೆಂದು; ‘ಎನಿಮಾ ತೆಗೆದುಕೊಳ್ಳುವುದು.
೬. ದೇಶ-ಕಾಲಕ್ಕನುಸಾರ ದಿನಚರ್ಯೆ ಮತ್ತು ಋತುಚರ್ಯೆಯನ್ನು ಆಯೋಜಿಸುವುದು.
೭. ದಾನ ಮಾಡುವುದು ಮತ್ತು ಇತರರಿಗೆ ಸಹಾಯ ಮಾಡುವುದು.
೮. ಸತ್ಯ ಮಾತನಾಡುವುದು, ಹಾಗೆಯೇ ತಪ ಮತ್ತು ಯೋಗಸಾಧನೆಯನ್ನು ಮಾಡುವುದು.
೯. ಅಧ್ಯಾತ್ಮ ಚಿಂತನೆ ಮಾಡುವುದು ಮತ್ತು ಅದರಂತೆ ನಡೆದುಕೊಳ್ಳುವುದು
೧೦. ಸದ್ವರ್ತನೆ, ಎಲ್ಲರೊಂದಿಗೆ ಸ್ನೇಹಭಾವದಿಂದ ಮತ್ತು ಸಮಾನತೆಯಿಂದ ವರ್ತಿಸುವುದು.
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !