ಬಾಂದಾ (ಉತ್ತರ ಪ್ರದೇಶ) ಗೋಡೌನ್ ಮಾಲೀಕ ಹನುಮಾನ್ ಚಾಲೀಸಾ ಹಚ್ಚಿದಕ್ಕೆ ಮತಾಂಧ ಮುಸಲ್ಮಾನರಿಂದ ಹಲ್ಲೆ !

ಗೋಡೌನ್ ಮಾಲೀಕ ಸಿದ್ದಾಂತ್ ತಿವಾರಿ

ಬಾಂದಾ (ಉತ್ತರ ಪ್ರದೇಶ) – ಇಲ್ಲಿನ ಹಾತಿಖಾನಾ ಅಲಿಗಂಜ್ ಪ್ರದೇಶದ ಗೋಡೌನ್‌ನಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದರಿಂದ ಮತಾಂಧ ಮುಸಲ್ಮಾನರು ಗೋಡೌನ್‌ಗೆ ನುಗ್ಗಿ ವಿಧ್ವಂಸ ನಡೆಸಿದ್ದಾರೆ. ಇದರೊಂದಿಗೆ ಗೋಡೌನ್ ಮಾಲೀಕ ಸಿದ್ದಾಂತ್ ತಿವಾರಿ ಇವರಿಗೂ ಥಳಿಸಿ ಜೀವ ಬೆದರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋಡೌನ್ ಹೊರಗೆ ಪೊಲೀಸರನ್ನು ನೇಮಿಸಲಾಗಿದೆ. ತಿವಾರಿಯವರು, ಅವರು ಎಂದಿನಂತೆ ಗೋಡೌನ್‌ನಲ್ಲಿ ಬೆಳಗ್ಗೆ ಪೂಜೆ ಮುಗಿಸಿ ಹನುಮಾನ್ ಚಾಲೀಸಾ ಹಚ್ಚಿದ್ದರು. ಆಗ ಈ ಪ್ರದೇಶದ ತೌಫಿಕ್, ಶಾನು ಸೇರಿ ೨೦ ಮಂದಿ ಗೋಡೌನ್ ಗೆ ನುಗ್ಗಿ ಥಳಿಸಿದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ ಎಂದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !