ಅಪರಾಧಿ ಅಬ್ದುಲ್ ಹಮೀದ್ನ ಗಲ್ಲು ಶಿಕ್ಷೆ ಮತ್ತು ದೋಷಾರೋಪಣೆ ರದ್ದು
ಮತ್ತೆ ನಡೆಯಲಿದೆ ಮರು ವಿಚಾರಣೆ

ನವದೆಹಲಿ – ಸರ್ವೋಚ್ಛ ನ್ಯಾಯಾಲಯವು ೧೯೯೬ ರ ರಾಜಸ್ಥಾನದ ಸಮಲೇಟಿ ಬಳಿ ಬಸ್ನಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣದಲ್ಲಿ ೨೦೧೯ ರಲ್ಲಿ ರಾಜಸ್ಥಾನ ಹೈಕೋರ್ಟ್ನಿಂದ ಅಪರಾಧಿ ಎಂದು ಸಾಬೀತಾಗಿದ್ದ ಡಾ. ಅಬ್ದುಲ್ ಹಮೀದ್ನ ಗಲ್ಲು ಶಿಕ್ಷೆ ಮತ್ತು ದೋಷಾರೋಪಣೆಯನ್ನು ರದ್ದುಗೊಳಿಸಿದೆ. ವಿಚಾರಣೆಯ ಸಮಯದಲ್ಲಿ ಅವರಿಗೆ ಸೂಕ್ತ ಕಾನೂನು ನೆರವು ಸಿಗಲಿಲ್ಲ, ಇದರಿಂದಾಗಿ ಅವರ ನಿಷ್ಪಕ್ಷಪಾತ ವಿಚಾರಣೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಹೇಳಿದೆ.
ವಿಶೇಷ ತ್ವರಿತ ವಿಚಾರಣೆ ನಡೆಸುವ ನ್ಯಾಯಾಲಯ (ಫಾಸ್ಟ್ ಟ್ರ್ಯಾಕ್ ಕೋರ್ಟ್) ಸ್ಥಾಪಿಸಲು ಆದೇಶ
ಸರ್ವೋಚ್ಛ ನ್ಯಾಯಾಲಯವು ಈಗ ರಾಜಸ್ಥಾನ ಹೈಕೋರ್ಟ್ಗೆ ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವಂತೆ ನಿರ್ದೇಶನ ನೀಡಿದೆ. ಈ ನ್ಯಾಯಾಲಯವು ಎಲ್ಲಾ ಸಾಕ್ಷ್ಯಗಳನ್ನು ಹೊಸದಾಗಿ ಮತ್ತು ಸ್ವತಂತ್ರವಾಗಿ ಮೌಲ್ಯಮಾಪನ ಮಾಡಿ ಮತ್ತೆ ವಿಚಾರಣೆ ನಡೆಸಲಿದೆ.
೧೯೯೬ ರಲ್ಲಿ ಉತ್ತರ ಪ್ರದೇಶದ ಆಗ್ರಾದಿಂದ ರಾಜಸ್ಥಾನದ ಬಿಕಾನೇರ್ಗೆ ಹೋಗುತ್ತಿದ್ದ ಬಸ್ನಲ್ಲಿ ರಾಜಸ್ಥಾನದ ಸಮಲೇಟಿ ಗ್ರಾಮದ ಬಳಿ ಬಾಂಬ್ ಸ್ಪೋಟವಾಗಿತ್ತು. ಈ ಸ್ಪೋಟದಲ್ಲಿ ೧೪ ಜನರು ಸಾವನ್ನಪ್ಪಿದ್ದರು ಮತ್ತು ೩೭ ಜನರು ಗಾಯಗೊಂಡಿದ್ದರು.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
ಠಾಕೂರಬುವಾ ಸಮಾಧಿಯಲ್ಲಿ ಭಕ್ತಿಭಾವದ ಮಾವುಲಿ ರಿಂಗಣ : Mauli Palkhi Ringan