ನಾಲ್ವರೂ ಹಿಂದೂಗಳು ಎಂಬುದು ಬಹಿರಂಗ

ಖೋಪೋಲಿ (ರಾಯಗಡ ಜಿಲ್ಲೆ) – ಖೋಪೋಲಿಯ ೧೮ ನೇ ಶತಮಾನದ ಐತಿಹಾಸಿಕ ಶ್ರೀ ಭಗವಾನ ವೀರೇಶ್ವರ (ವಿಶ್ವೇಶ್ವರ) ದೇವಸ್ಥಾನದಲ್ಲಿ ಜುಲೈ ೧೯ ರ ಮಧ್ಯರಾತ್ರಿ ಕಳ್ಳತನ ನಡೆದಿದೆ. ಅಜ್ಞಾತ ಕಳ್ಳರು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿ ೨೮ ಲಕ್ಷ ರೂಪಾಯಿ ಮೌಲ್ಯದ ಹಾಗೂ ೧೭ ಕೆಜಿ ತೂಕದ ಬೆಳ್ಳಿಯ ಸಂಪೂರ್ಣ ಪಿಂಡವನ್ನು (ಮುಖವಾಡ ಮತ್ತು ಕವಚ/ಹೊದಿಕೆ) ಕದ್ದೊಯ್ದಿದ್ದಾರೆ. ಪೊಲೀಸರು ತನಿಖೆ ನಡೆಸಿ ಪುಣೆ ಮತ್ತು ಅಹಿಲ್ಯಾನಗರ ಜಿಲ್ಲೆಗಳಿಂದ ೪ ಜನ ಸರಣಿ ಕಳ್ಳರನ್ನು ಬಂಧಿಸಿದ್ದಾರೆ. ಅಮೋಲ ಕಸಬೆ, ವಿಕಾಸ ಅಗಿವಲೆ, ದಿಲೀಪ ಜಾಧವ ಮತ್ತು ಸಖಾರಾಮ ಗಾಯಕ್ವಾಡ ಇವರು ಬಂಧಿತ ಆರೋಪಿಗಳು.
ಭಕ್ತರಿಗೆ ಕೇವಲ ಮುಂಭಾಗದ ಬಾಗಿಲಿನಿಂದ ಮಾತ್ರ ಪ್ರವೇಶ ನೀಡಲಾಗುತ್ತಿದ್ದುದರಿಂದ ದೇವಸ್ಥಾನದ ಹಿಂಭಾಗದ ಬಾಗಿಲು ಯಾವಾಗಲೂ ಮುಚ್ಚಿರುತ್ತಿತ್ತು; ಆದರೆ ಕಳ್ಳರು ಹಿಂಭಾಗದ ಬಾಗಿಲಿನ ಸರಪಳಿ ಮತ್ತು ಬೀಗವನ್ನು ಮುರಿದು ಗರ್ಭಗುಡಿಯನ್ನು ಪ್ರವೇಶಿಸಿ ಕಳ್ಳತನ ಮಾಡಿದ್ದಾರೆ. ಮರುದಿನ ಮುಂಜಾನೆ ವಾಡಿಕೆಯಂತೆ ದೇವಸ್ಥಾನವನ್ನು ತೆರೆಯಲು ಬಂದ ಸಹಾಯಕ ಅರ್ಚಕರಾದ ಕಿಶೋರ ಶಿಗವಾನ ರವರಿಗೆ ಕಳ್ಳತನದ ಬಗ್ಗೆ ತಿಳಿಯುತ್ತಲೇ ಅವರು ದೇವಸ್ಥಾನದ ಟ್ರಸ್ಟಿಗಳಿಗೆ ಈ ಬಗ್ಗೆ ತಿಳಿಸಿದರು. ಅವರು ದೂರು ದಾಖಲಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಕಳ್ಳತನದ ಕೃತ್ಯ ಬಯಲಿಗೆ ಬಂದಿದೆ. ಪೊಲೀಸರು ಆರೋಪಿಗಳಿಂದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation