ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್‌ ನ ಬಂಧನ.

ಶ್ರೀನಗರ (ಜಮ್ಮು-ಕಾಶ್ಮೀರ) – ಪಾಕಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ಮತ್ತು ನೆರವು ನೀಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್‌ ಎಂಬಾತನನ್ನು ಜಮ್ಮು-ಕಾಶ್ಮೀರದ ಕಿಶ್ತವಾರ್ ಜಿಲ್ಲೆಯ ಛಾತ್ರೂ (ಛಾತರೂ) ದಿಂದ ಪೊಲೀಸರು ಬಂಧಿಸಿದ್ದಾರೆ. ಈತ ಮಹಮ್ಮದ್ ಕಲಾಸೋಯಿ ಭಾಗದ ಮಸೀದಿಯೊಂದರಲ್ಲಿ ಮೌಲ್ವಿ (ಇಸ್ಲಾಂನ ಧಾರ್ಮಿಕ ಮುಖಂಡ) ಯಾಗಿ ಕೆಲಸ ಮಾಡುತ್ತಿದ್ದನು. ಈತ ‘ಜೈಶ್-ಎ-ಮೊಹಮ್ಮದ್’ ಮತ್ತು ‘ಲಷ್ಕರ್-ಎ-ತೊಯ್ಬಾ’ದ ಕಮಾಂಡರ್ ಸೈಫುಲ್ಲಾನ ನೇತೃತ್ವದಲ್ಲಿದ್ದ ‘ಸೈಫುಲ್ಲಾ ಗ್ರೂಪ್’ನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು.

೧. ಕಿಶ್ತವಾರ್ ನ ಹಿರಿಯ ಪೊಲೀಸ್ ಅಧೀಕ್ಷಕ ನರೇಶ್ ಸಿಂಗ್ ಅವರು ನೀಡಿದ ಮಾಹಿತಿಯಂತೆ, ಆರೋಪಿ ಮಹಮ್ಮದ್ ರಫೀಕ್ ನಾಯಕ್ ಪಾಕಿಸ್ತಾನಿ ಭಯೋತ್ಪಾದಕ ಕಮಾಂಡರ್ ಸೈಫುಲ್ಲಾ ಮತ್ತು ಆತನ ಸಹಚರರಿಗೆ ಸುರಕ್ಷಿತ ಆಶ್ರಯ, ಆಹಾರ, ಅಗತ್ಯ ಸಾಮಗ್ರಿಗಳು ಮತ್ತು ಪರಸ್ಪರ ಸಮನ್ವಯಕ್ಕಾಗಿ ಸಹಾಯ ಮಾಡಿದ್ದನು.

೨. ಈ ಮೌಲ್ವಿಯ ಸಹಾಯದಿಂದಲೇ ಭಯೋತ್ಪಾದಕರು ಸುಮಾರು ಎರಡು ವರ್ಷಗಳ ಕಾಲ ಛಾತ್ರೂ ಕಾಡಿನಲ್ಲಿ ಅಡಗಿಕೊಂಡಿದ್ದರು. ಭದ್ರತಾ ಪಡೆಗಳು ಒಂದು ದೊಡ್ಡ ಕಾರ್ಯಾಚರಣೆ ನಡೆಸಿ ಸೈಫುಲ್ಲಾ ಮತ್ತು ಆತನ ಗುಂಪಿನ ೭ ಭಯೋತ್ಪಾದಕರನ್ನು ಚಕಮಕಿಯಲ್ಲಿ ಹೊಡೆದುರುಳಿಸಿದವು.

೩. ರಫೀಕ್ ನಾಯಕ್‌ ನ ಬಂಧನಕ್ಕೂ ಮುನ್ನ ಪೊಲೀಸರು ಇದೇ ಪ್ರಕರಣದಲ್ಲಿ ಮುನೀರ್ ಅಹಮದ್ ಮತ್ತು ಮಶ್ಕೂರ್ ಅಹಮದ್ ಎಂಬುವವರನ್ನು ಬಂಧಿಸಿದ್ದರು. ಇವರಿಬ್ಬರ ಮೇಲೆ ಭಯೋತ್ಪಾದಕ ಗುಂಪಿಗೆ ಸಾಮಗ್ರಿ ಮತ್ತು ಸಂಪರ್ಕ ಸಾಧನೆಗೆ ಸಂಬಂಧಿಸಿದ ನೆರವು ನೀಡಿದ ಆರೋಪವಿತ್ತು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಇಂತಹ ಘಟನೆಗಳೇನು ಹೊಸದಲ್ಲ; ಆದರೆ ಕಳೆದ ೭೮ ವರ್ಷಗಳಲ್ಲಿ ಯಾವುದೇ ಸರಕಾರವು ಇಂತಹ ಕೆಲಸ ಮಾಡುವ ಒಬ್ಬನಿಗೂ ದೇಶದ್ರೋಹಿ ಎಂದು ಘೋಷಿಸಿ ಗಲ್ಲಿಗೇರಿಸುವ ಶಿಕ್ಷೆ ನೀಡದಿರುವುದರಿಂದಲೇ ಇಂತಹ ಅಪರಾಧಕ್ಕೆ ಜನರು ಮುಂದಾಗುತ್ತಾರೆ. ಸರಕಾರಕ್ಕೆ ಇದು ನಾಚಿಕೆಗೇಡು!