
೧. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಾಧಕನಿಗೆ ನಿಮ್ಮ ‘ಭಾವನಾಶೀಲತೆ ಈ ಸ್ವಭಾವ ದೋಷಕ್ಕೆ ಪರಿಹಾರ ೫ ರಿಂದ ೭ ವರ್ಷಗಳ ನಂತರ ಸಿಗುವುದು, ಎಂದು ಹೇಳುವುದು
‘ಒಮ್ಮೆ ಓರ್ವ ಸಂತರ ಸಂದೇಶವನ್ನು ಕೊಡಲು ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಳಿ ಹೋಗಿದ್ದೆ. ಆಗ ನನ್ನಲ್ಲಿನ ಭಾವನಾಶೀಲತೆ ಈ ಸ್ವಭಾವದೋಷದಿಂದ ನನ್ನ ಸಾಧನೆಯಲ್ಲಿ ಬರುವ ಅಡಚಣೆಯ ಕುರಿತು ಆಕಸ್ಮಿಕವಾಗಿ ಗುರುದೇವರೊಂದಿಗೆ ಚರ್ಚೆ ಆಯಿತು. ಆಗ ಗುರುದೇವರು ಸಹಜವಾಗಿಯೇ, “ಚಿಂತೆ ಮಾಡಬೇಡ, ೫ ರಿಂದ ೭ ವರ್ಷಗಳಲ್ಲಿ ಈ ಅಡಚಣೆ ದೂರವಾಗುವುದು. ಸಾಧನೆಯ ಕಡೆಗೆ ಗಮನ ಕೊಡು. ಎಲ್ಲವೂ ಸರಿಯಾಗುತ್ತದೆ. ಎಂದು ಹೇಳಿದರು.
೨. ‘ಈ ಸ್ವಭಾವದೋಷ ದೂರವಾಗಲು ೫ ರಿಂದ ೭ ವರ್ಷಗಳ ಕಾಲಾವಧಿ ಬಹಳ ಹೆಚ್ಚಿದೆ ಎಂದು ನನಗೆ ಅನಿಸಿತು; ಆದರೆ ಪ್ರತ್ಯಕ್ಷದಲ್ಲಿ ಅಷ್ಟು ಕಾಲಾವಧಿಯೇ ಬೇಕಾಯಿತು
ಆ ಸಮಯದಲ್ಲಿ ನನಗೆ, ‘ಭಾವನಾಶೀಲತೆ ಈ ಸ್ವಭಾವ ದೋಷವನ್ನು, ಸಾಧನೆಯಲ್ಲಿ ಬರುವ ಈ ಚಿಕ್ಕ ಮತ್ತು ಸಾಮಾನ್ಯ ಅಡಚಣೆಯನ್ನು ದೂರಗೊಳಿಸಲು ೫ ರಿಂದ ೭ ವರ್ಷಗಳ ಕಾಲಾವಧಿ ತುಂಬಾ ಹೆಚ್ಚಾಗಿದೆ ಎಂದು ಅನಿಸಿತು; ಆದರೆ ವಾಸ್ತವದಲ್ಲಿ ಈ ಅಡಚಣೆ ದೂರವಾಗಲು ಗುರುದೇವರು ಹೇಳಿದಂತೆ ೭ ವರ್ಷಗಳ ಕಾಲಾವಧಿ ಬೇಕಾಯಿತು. ಇದರಿಂದ ನನಗೆ ಮತ್ತೊಮ್ಮೆ ಗುರುದೇವರ ದಾರ್ಶನಿಕತೆ ಅನುಭವಿಸಲು ಸಿಕ್ಕಿತು.
ಶ್ರೀ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.
– ಓರ್ವ ಸಾಧಕ, (೧೨.೨.೨೦೨೩)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !