ಸಾಧಕರ ಸಾಧನೆಯು ಒಳ್ಳೆಯ ರೀತಿಯಲ್ಲಿ ಆಗುವುದಕ್ಕೆ ಪ್ರೇರಣೆ ನೀಡುವ ಪೂ. ರಮಾನಂದ ಗೌಡ !

ಪೂ. ರಮಾನಂದ ಗೌಡ

೨೭.೧.೨೦೨೨ ರಂದು ಕರ್ನಾಟಕದ ಸಾಧಕರಿಗಾಗಿ ಸನಾತನದ ಸಂತ ಪೂ. ರಮಾನಂದ ಗೌಡ ಇವರ ಆನ್‌ಲೈನ್ ಮಾರ್ಗದರ್ಶನವಿತ್ತು. ಆಗ ಅವರು ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದಕ್ಕಾಗಿ ಮಾರ್ಗದರ್ಶನ ಮಾಡಿದರು. ಸಾಧಕರ ಪ್ರಶ್ನೆಗೆ ಅವರು ಬಹಳ ಸುಂದರ ಉದಾಹರಣೆ ನೀಡಿ ಅವರನ್ನು ಅಂತರ್ಮುಖ ಮಾಡಿದರು ಮತ್ತು ಸಾಧಕರಿಗೆ ಸಾಧನೆ ಹೆಚ್ಚಿಸಲು ಪ್ರೇರಣೆ ನೀಡಿದರು.

ಸೌ. ಸುಜಾತಾ ರೇಣಕೆ

೧. ಪೂ. ರಮಾನಂದ ಅಣ್ಣ ಇವರು ನೀಡಿರುವ ಮಾರ್ಗದರ್ಶನದಲ್ಲಿನ ಕೆಲವು ಮಹತ್ವಪೂರ್ಣ ಅಂಶಗಳು

೧ ಅ. ಯೋಗ್ಯ ಸಾಧನೆ ಮಾಡುವುದರ ಮಹತ್ವ : ಸಾಧನೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಿದರೆ ಸಾಧಕರು ಕರ್ಮಫಲದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧನೆ ಒಳ್ಳೆಯ ರೀತಿಯಲ್ಲಿ ಮಾಡಬೇಕು. ಒಮ್ಮೆ ಅಂತರ್ಮನದಲ್ಲಿ ಸಾಧನೆ ಮಾಡುವ ನಿಶ್ಚಯವಾದರೆ ಸಾಧನೆಯಲ್ಲಿ ಜಿಗುಟುತನ ಹೆಚ್ಚುತ್ತದೆ. ಸಾಧನೆಗಾಗಿ ನಾನು ಹೇಗೆ ಪ್ರಯತ್ನಿಸುವುದು ? ಇದರ ಧ್ಯಾಸವಿರುವುದು ಎಂದರೆ ಅಂತರ್ಮುಖತೆ ಬರುವುದು. ಭೂತಕಾಲದಲ್ಲಿ ವಿಹರಿಸುವುದು ಎಂದರೆ ವಿಕಲ್ಪಕ್ಕೆ ಹೋಗುವುದು. ಸತತ ನಕಾರಾತ್ಮಕ ವಿಚಾರ ಮಾಡುವುದರಿಂದ ಸಾಧನೆ ವ್ಯಯವಾಗುತ್ತದೆ.

೧ ಆ. ಸಾಧನೆ ಇದು ಶರೀರಕ್ಕಾಗಿ ಅಲ್ಲ ಆತ್ಮಕ್ಕಾಗಿ ಮಾಡುತ್ತೇವೆ : ಸಾಧನೆ ಶರೀರಕ್ಕಾಗಿಯಲ್ಲ ಆತ್ಮಕ್ಕಾಗಿ ಮಾಡುತ್ತೇವೆ. ಇದರ ಒಂದು ಸುಂದರ ಉದಾಹರಣೆ ಇದೆ. ಫ್ರಾನ್ಸ್ ನಲ್ಲಿ ಒಬ್ಬ ಸಾಧಕಿ ಬಹಳ ತಳಮಳದಿಂದ ಸಾಧನೆ ಮಾಡುತ್ತಿದ್ದಳು. ಪರಾತ್ಪರ ಗುರು ಡಾಕ್ಟರ ಬಗ್ಗೆ ಆಕೆಗೆ ಬಹಳ ಶ್ರದ್ಧೆಯಿತ್ತು. ಆಕೆಗೆ ಅರ್ಬುದ ರೋಗವಾಯಿತು. ಆಗ ಆಕೆಯ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಆಕೆಗೆ ಕೇಳಿದರು, ನೀನು ಇಷ್ಟು ಸಾಧನೆ ಮಾಡುತ್ತಿಯ. ನಿನಗೆ ದೇವರ ಮೇಲೆ ಇಷ್ಟೊಂದು ಭಕ್ತಿ ಇದೆ. ಆದರೂ ಏಕೆ ನಿನಗೆ ಇಂತಹ ರೋಗ ಬಂದಿದೆ ? ಆಗ ಆಕೆ ಹೇಳಿದಳು, ನಾನು ಶರೀರಕ್ಕಾಗಿ ಸಾಧನೆ ಮಾಡುವುದಿಲ್ಲ, ನನ್ನ ಆತ್ಮಕ್ಕಾಗಿ ಮಾಡುತ್ತೇನೆ.

೧ ಇ. ಸಾಧನೆ ಎಂದರೆ ಅಂತರ್ ಮನಸ್ಸಿನಲ್ಲಿ ಬದಲಾವಣೆ ಆಗುವುದಕ್ಕಾಗಿ ತಖ್ತೆ ಬರೆಯುವುದು ಅವಶ್ಯಕ ! : ಸಾಧನೆ ಮಾಡುವುದು ಎಂದರೆ ಅಂತರ್ಮನಸ್ಸಿನಲ್ಲಿ ಬದಲಾವಣೆ ಮಾಡುವುದು. ಅದಕ್ಕಾಗಿ ತಖ್ತೆ ಬರೆಯುವುದು (ನಮ್ಮಿಂದಾಗಿರುವ ತಪ್ಪುಗಳನ್ನು ತಖ್ತೆಯಲ್ಲಿ ಬರೆಯುವುದು. ಏಕೆಂದರೆ ಅದೇ ತಪ್ಪು ಪುನಃ ಪುನಃ ಆಗದಿರಲಿ, ಅದರಿಂದ ಮನಸ್ಸಿಗೆ ಯೋಗ್ಯ ಸೂಚನೆ ನೀಡುವುದು). ತಖ್ತೆ ಮನಸ್ಸಿನಿಂದ ಬರೆದರೆ ಮನಸ್ಸು ಸತತ ಜಾಗೃತವಾಗಿರುತ್ತದೆ. ಮತ್ತು ತಪ್ಪು ಆಗುತ್ತಲೆ ತಪ್ಪಿನ ಅರಿವಾಗಿ ತಪ್ಪಾಗದಿರಲು ಪ್ರಯತ್ನಿಸಬಹುದು. ಯಾವ ದಿನ ಸಾಧಕರಿಂದ ತಖ್ತೆ ಬರೆಯುವುದು ಆಗುವುದಿಲ್ಲ, ಆ ದಿನ ನನಗೆ ನಿದ್ದೆ ಬರಬಾರದು, ಹೀಗೆ ಅವರಿಗೆ ಅನಿಸಬೇಕು.

೧ ಈ. ಗುರು ಆಜ್ಞೆ ಎಂದು ತಖ್ತೆ ಬರೆಯುವುದು, ಇದೇ ಈ ಕಾಲಾಸುಸಾರ ಸಾಧನೆ ! : ನಾವು ಸತತ ಸಾಧನೆಯಲ್ಲಿದ್ದು ಗುರುವಾಜ್ಞೆ ಪಾಲನೆ ಮಾಡಬೇಕು. ಪರಿಸ್ಥಿತಿ ಹೇಗೆ ಇದೆ ? ಇದಕ್ಕಿಂತಲೂ ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ನನಗೆ ಏನು ಹೇಳುತ್ತಿದ್ದಾರೆ ? ಇದು ಮಹತ್ವದ್ದಾಗಿದೆ. ಎಷ್ಟೇ ಕಠಿಣ ಪ್ರಸಂಗ ಇದ್ದರೂ ಗುರುವಾಜ್ಞೆ ಎಂದು ತಖ್ತೆ ಬರೆಯಬೇಕು. ಇದುವೇ ಈ ಕಾಲಕ್ಕೆ ತಕ್ಕ ಸಾಧನೆ ಆಗಿದೆ.

೨. ಪೂ.ರಮಾನಂದ ಅಣ್ಣ ಅವರಿಗೆ ಅದೇ ಪ್ರಶ್ನೆ ಪುನಃ ಪುನಃ ಕೇಳಿದರೂ ಅವರು ಶಾಂತವಾಗಿ ಉತ್ತರಿಸುವುದು !

ನಾನು ಪೂ. ರಮಾನಂದ ಅಣ್ಣ ಇವರಿಗೆ ಶಾರೀರಿಕ ಅಡಚಣೆಯ ಹಿನ್ನೆಲೆಯ ಪ್ರಶ್ನೆ ಕೇಳಿದೆ. ಪರಾತ್ಪರ ಗುರು ಡಾ. ಅಠವಲೆ ಇವರು ಅನೇಕ ಗ್ರಂಥ ಮತ್ತು ಪ್ರವಚನಗಳ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ, ಹೀಗಿದ್ದರೂ ನಾವು ಕೆಲವು ಸಾಧಕರು ಪೂ. ರಮಾನಂದ ಅಣ್ಣನವರಿಗೆ ಪುನಃ ಪುನಃ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ಆದರೂ ಅವರು ನಮಗೆ ಸಮಾಧಾನವಾಗುವ ಹಾಗೆ ಮತ್ತು ಬಹಳ ಸುಂದರ ಉದಾಹರಣೆ ನೀಡಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಇದರಿಂದ ಸಂತರು ಈಶ್ವರನ ಸಗುಣರೂಪ ಇರುವುದರಿಂದ ಅವರು ಪ್ರತಿಯೊಂದು ಪ್ರಶ್ನೆ ಉತ್ತರ ಸುಲಭವಾಗಿ ಮತ್ತು ಶಾಂತವಾಗಿ ನೀಡುತ್ತಾರೆ ಎಂದು ತಿಳಿಯಿತು.

೩. ಅನುಭೂತಿ – ಪೂ. ರಮಾನಂದ ಅಣ್ಣ ಅವರಲ್ಲಿ ನಮ್ರತೆ ಮತ್ತು ಪ್ರೀತಿಯಿಂದ ಅವರು ಮಾತನಾಡುವಾಗ ಪರಾತ್ಪರ ಗುರು ಡಾಕ್ಟರರೆ ಮಾತನಾಡುತ್ತಿದ್ದಾರೆ ಎಂದು ನನಗೆ ಅನಿಸಿತು.

ಕೃತಜ್ಞತೆ : ಹೇ ಗುರುದೇವ, ನೀವು ನನ್ನಂತಹ ಒಬ್ಬ ಸಾಮಾನ್ಯ ಜೀವದ ಅಡಚಣೆಯ ಸಮಯದಲ್ಲಿ ಸಂತರ ಸಾನಿಧ್ಯ ನೀಡಿ ನನ್ನ ಪ್ರತಿಯೊಂದು ಆಡಚಣೆ ಮತ್ತು ನಕಾರಾತ್ಮಕ ವಿಚಾರಗಳಿಂದ ನನ್ನನ್ನು ಹೊರತರುತ್ತಿದ್ದೀರಿ. ಪೂ. ರಮಾನಂದ ಅಣ್ಣ ಇವರ ಮಾರ್ಗದರ್ಶನದಿಂದ ನಮ್ಮೆಲ್ಲ ಸಾಧಕರಿಗೆ ಸಾಧನೆಯ ಪ್ರೇರಣೆ ಸಿಕ್ಕಿದೆ. ಇದಕ್ಕಾಗಿ ಪರಾತ್ಪರ ಗುರುದೇವರು ಮತ್ತು ಪೂ. ರಮಾನಂದ ಅಣ್ಣನವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ !

– ಸೌ. ಸುಜಾತಾ ಅಶೋಕ ರೇಣಕೆ, ಫೋಂಡಾ, ಗೋವಾ. (೩೧.೧.೨೦೨೨)